ಬ್ರೇಕಿಂಗ್ ನ್ಯೂಸ್
10-01-21 02:01 pm Source: FILMIBEAT Manjunatha C ಸಿನಿಮಾ
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್ ಫೇಸ್ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು.
ಅಂತೆಯೇ ದರ್ಶನ್ ಅವರ ಫೇಸ್ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್ಬುಕ್ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.
ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, ಆ ದಿನ ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬೇಡಿರೆಂದು ನಟ ದರ್ಶನ್ ಫೇಸ್ಬುಕ್ ಲೈವ್ ನಲ್ಲಿ ಮನವಿ ಮಾಡಿದರು. ಇದೇ ವಿಷಯವನ್ನು ತಿಳಿಸಲೆಂದೇ ತಾವು ಫೇಸ್ಬುಕ್ ಲೈವ್ ಬಂದಿರುವುದಾಗಿ ಹೇಳಿದರು ನಟ ದರ್ಶನ್.

ಕೊರೊನಾ ಕಾರಣದಿಂದಾಗಿ ಯಾರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಯಾರ ಜೇಬಿನಲ್ಲೂ ಹಣವಿಲ್ಲ. ಅಭಿಮಾನಿಗಳು ನೀವು ಕರ್ನಾಟಕದ ಮೂಲೆ-ಮೂಲೆಗಳಿಂದ ಹಣ, ಸಮಯ ಖರ್ಚು ಮಾಡಿಕೊಂಡು ಹುಟ್ಟುಹಬ್ಬಕ್ಕೆ ಬರುತ್ತೀರ. ಆದರೆ ಈ ವರ್ಷ ಅದು ಬೇಡ ಎಂದರು ದರ್ಶನ್.

ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ, ಅದರ ಮುಂದೆ ಬೇರೆ ಇನ್ನಾವ ಜವಾಬ್ದಾರಿಗಳೂ ಇಲ್ಲ. ನೀವು ಸೆಟ್ಲ್ ಆಗಿ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಯಾರೂ ಏನೂ ಆಚರಣೆ ಮಾಡುವುದು ಬೇಡ ಎಲ್ಲಿದ್ದೀರೊ ಅಲ್ಲಿಂದಲೇ ಹಾರೈಸಿ ಸಾಕು ಎಂದು ಮನವಿ ಮಾಡಿದರು ನಟ ದರ್ಶನ್.

ನಾನು ಸಹ ಫೆಬ್ರವರಿ 15 ರಿಂದ 18 ರ ವರೆಗೆ ಊರಿನಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲದೆ ಮನೆಯ ಬಳಿ ಹುಟ್ಟುಹಬ್ಬ ಆಚರಿಸಲು ಪೊಲೀಸರು ಅನುಮತಿ ಕೊಡುವುದಿಲ್ಲ. ಸಿಸಿಟಿವಿ ಗಳನ್ನು ಹಾಕಿಸಬೇಕಾಗುತ್ತದೆ, ಬ್ಯಾರಿಕೇಡ್ಗಳನ್ನು ಹಾಕಿಸಬೇಕಾಗುತ್ತದೆ. ಈ ಬಾರಿ ಅದೆಲ್ಲ ಯಾವುದು ಬೇಡ, ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸೋಣ ಎಂದರು ದರ್ಶನ್
ಪ್ರತಿ ಊರಿಗೆ ನಾನೇ ಹೋಗಿ ಅಭಿಮಾನಿ ಸಂಘಗಳನ್ನು ಭೇಟಿ ಮಾಡುವ ಯೋಚನೆ ಇದೆ. ಆದರೆ ಅದೆಲ್ಲವೂ ಮಾರ್ಚ್ ನಂತರವೇ. ಈ ನಡುವೆ ಭಾನುವಾರಗಳಂದು ನಾನೇ ಕೆಲವು ಸಂಘಗಳಿಗೆ ತಿಳಿಸುತ್ತೇನೆ ಅವರು ಬಂದು ಭೇಟಿ ಮಾಡಬಹುದು ಎಂದು ಮಾಹಿತಿ ನೀಡಿದರು ದರ್ಶನ್.
This News Article is a Copy of FILMIBEAT
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm