ಬ್ರೇಕಿಂಗ್ ನ್ಯೂಸ್
 
            
                        07-01-21 04:35 pm Source: FILMIBEAT Manjunatha C ಸಿನಿಮಾ
 
            ಸೆಲೆಬ್ರಿಟಿಗಳಿಗೆ ಖಾಸಗಿತನ ಎಂಬುದು ಬಹಳ ಕಡಿಮೆ, ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಿಗಂತೂ ಖಾಸಗಿತನ ಎಂಬುದು ಬಹುತೇಕ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಮಾಧ್ಯಮಗಳ ಕ್ಯಾಮೆರಾಮನ್ಗಳು ಸದಾ ಸೆಲೆಬ್ರಿಟಿಗಳ ಮನೆಗಳ ಮುಂದೆ ಇದ್ದೇ ಇರುತ್ತಾರೆ. ಅವರು ಎಲ್ಲಿ ಹೋದರೂ ಹಿಂಬಾಲಿಸುತ್ತಾರೆ. ಹಲವು ಬಾಲಿವುಡ್ ಪತ್ರಿಕೆಗಳು ಹಲವು ಶಿಫ್ಟ್ಗಳಲ್ಲಿ ಸೆಲೆಬ್ರಿಟಿಗಳ ಮನೆಯ ಮುಂದೆ ಕ್ಯಾಮೆರಾಮನ್ಗಳನ್ನು ಕೆಲಸಕ್ಕೆ ಹಾಕಿರುತ್ತಾರೆ. ಸೆಲೆಬ್ರಿಟಿಗಳು ವಿದೇಶಕ್ಕೆ ಹೋದರೂ ಹಿಂಬಾಲಿಸುವವರಿದ್ದಾರೆ. ಪ್ರಸ್ತುತ ಅನುಷ್ಕಾ ಶರ್ಮಾ ಬಾಲಿವುಡ್ನ ಟಾಪ್ ಸೆಲೆಬ್ರಿಟಿ, ಅಮ್ಮನಾಗುತ್ತಿರುವ ಅನುಷ್ಕಾ ರ ಸಣ್ಣ ಕದಲಿಕೆಗಳೂ ಸುದ್ದಿಯಾಗುತ್ತಿವೆ. ಅವರ ಮನೆಯ ಮುಂದೆ ಕ್ಯಾಮೆರಾಮನ್ಗಳ ದಂಡೇ ಇರುತ್ತದೆ. ಎಲ್ಲಿ ಹೋದರೂ ಕ್ಯಾಮೆರಾ ಕ್ಲಿಕ್ಕಿಸಲಾಗುತ್ತದೆ. ವಿಡಿಯೋ ಮಾಡಲಾಗುತ್ತದೆ. ಇದರಿಂದ ಬೇಸತ್ತುಹೋಗಿದ್ದಾರೆ ನಟಿ ಅನುಷ್ಕಾ ಶರ್ಮಾ.

ಸಾಕು ಇದನ್ನು ನಿಲ್ಲಿಸಿ: ಅನುಷ್ಕಾ ಶರ್ಮಾ
'ಮನವಿಗಳನ್ನು ಮಾಡಿದ ಬಳಿಕವೂ ಒಬ್ಬ ಫೊಟೊಗ್ರಾಫರ್ ಮತ್ತು ಒಂದು ಪ್ರಕಟಣಾ ಸಂಸ್ಥೆ ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದ್ದಾರೆ. ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ' ಎಂದಿದ್ದಾರೆ ಅನುಷ್ಕಾ ಶರ್ಮಾ.
ಚಿತ್ರ-ವಿಡಿಯೋ ಹಂಚಿಕೊಳ್ಳುವ ಅನುಷ್ಕಾ ಶರ್ಮಾ 
ಗರ್ಭಿಣಿ ಅನುಷ್ಕಾ ಶರ್ಮಾ ತಮ್ಮ ಸಾಕಷ್ಟು ಚಿತ್ರಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದಾಗ್ಯೂ ಅವರು ಎಲ್ಲಿ ಹೋದರೂ ಅವರನ್ನು ಹಿಂಬಾಲಿಸಿ ಅವರ ಖಾಸಗಿ ಕ್ಷಣಗಳನ್ನು ಸಹ ಕ್ಲಿಕ್ಕಿಸಿ ಮುದ್ರಿಸಲಾಗುತ್ತಿದೆ. ಇದು ಅನುಷ್ಕಾ ರಿಗೆ ಬೇಸರ ತಂದಿದೆ.

ಆಸ್ಟ್ರೇಲಿಯಾದಿಂದ ವಾಪಸ್ಸಾಗಿರುವ ವಿರಾಟ್ ಕೊಹ್ಲಿ 
ನಟಿ ಅನುಷ್ಕಾ ಶರ್ಮಾ ಇದೇ ತಿಂಗಳಾಂತ್ಯದಲ್ಲಿ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಆಸ್ಟ್ರೇಲಿಯಾ ಪ್ರವಾಸದಿಂದ ರಜೆ ಪಡೆದು ಪತ್ನಿಯೊಂದಿಗೆ ಕಾಲ ಕಳೆಯಲು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ ಅನುಷ್ಕಾ.
This News Article is a Copy of FILMIBEAT
 
            
            
             
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 09:00 pm
                        
            
                  
                Mangalore Correspondent    
            
                    
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm