ಬ್ರೇಕಿಂಗ್ ನ್ಯೂಸ್
02-01-21 10:54 am Source: FILMIBEAT ಸಿನಿಮಾ
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಖ್ಯೆ ಕೋಟಿಗಳಲ್ಲಿದೆ. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಮೆಗಾಸ್ಟಾರ್ ಚಿರಂಜೀವಿ. ಆದರೆ ತೆಲುಗಿನದ್ದೇ ಆದ ಒಟಿಟಿಯೊಂದು ಇದೀಗ ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆ ನಂತರ ತನ್ನ ತಪ್ಪು ತಿದ್ದಿಕೊಂಡು ಕ್ಷಮಾಪಣೆ ಸಹ ಕೇಳಿದೆ. ತೆಲುಗಿನ 'ಆಹಾ' ಒಟಿಟಿ ಇತ್ತೀಚೆಗೆ ಸಖತ್ ಖ್ಯಾತಿ ಗಳಿಸಿದೆ. ಆಹಾ ದಲ್ಲಿ ಸಮಂತಾ ನಡೆಸಿಕೊಡುವ 'ಸ್ಯಾಮ್ ಜ್ಯಾಮ್' ಹೆಸರಿನ ಟಾಕ್ ಶೋ ಅಂತೂ ಸಖತ್ ಹಿಟ್ ಆಗಿದೆ. ಈ ಟಾಕ್ ಶೋ ಗೆ ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ತಮನ್ನಾ ಇನ್ನೂ ಹಲವು ಸ್ಟಾರ್ಗಳು ಬಂದಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹ ಬಂದಿದ್ದರು. ಆಗಲೇ ಆಗಿದ್ದ ಯಡವಟ್ಟು.

ಟಾಕ್ ಶೋ ಗೆ ಬಂದಿದ್ದ ಅಲ್ಲು ಅರ್ಜುನ್ ಸ್ಯಾಮ್ ಜ್ಯಾಮ್ ಟಾಕ್ ಶೋ ಗೆ ಅಲ್ಲು ಅರ್ಜುನ್ ಬಂದಿದ್ದು, ಈ ಎಪಿಸೋಡ್ನ ಪ್ರಚಾರಕ್ಕಾಗಿ ಹಲವು ಪ್ರೋಮೋಗಳನ್ನು ಒಟಿಟಿಯು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಆದರೆ ಒಂದು ಪ್ರೋಮೋ ದಲ್ಲಿ ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದು ಸಂಭೋದಿಸಲಾಗಿತ್ತು. ಇದು ಚಿರು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಯಿತು.
ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದ ಆಹಾ
ಆಹಾ ಒಟಿಟಿಯನ್ನು, ಅಲ್ಲು ಅರ್ಜುನ್ ಅನ್ನು ಸಮಂತಾ ಅನ್ನುನ ಗುರಿಯಾಗಿಸಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದರು. ಅಲ್ಲು ಅರ್ಜುನ್ ಅನ್ನು ಸಖತ್ ಟ್ರೋಲ್ ಮಾಡಲಾಯಿತು.

ಕ್ಷಮೆ ಕೋರಿದ ಆಹಾ ಒಟಿಟಿ
ಕೊನೆಗೆ ತನ್ನ ತಪ್ಪು ತಿದ್ದಿಕೊಂಡ ಆಹಾ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿ, 'ನಿಮ್ಮ ಪ್ರೀತಿಯಿಂದಲೇ ನಾವು ಇಷ್ಟು ದೂರ ಬಂದಿದ್ದೇವೆ. ಉದ್ದೇಶಪೂರ್ವಕವಲ್ಲದ ತಪ್ಪು ನಮ್ಮಿಂದ ಆಗಿದೆ. ನಮ್ಮ ತಪ್ಪಿನಿಂದ ಯಾರಿಗೆ ಬೇಸರವಾಗಿದೆಯೋ ಅವರಿಗೆಲ್ಲ ಕ್ಷಮೆ ಕೋರುತ್ತಿದ್ದೇವೆ' ಎಂದಿದೆ ಆಹಾ.

ಇರುವುದು ಒಬ್ಬರೇ ಮೆಗಾಸ್ಟಾರ್
ಅಷ್ಟೇ ಅಲ್ಲದೆ, 'ಇಡೀಯ ಸಿನಿಮಾ ಉದ್ಯಮದಲ್ಲಿ ಒಬ್ಬರೇ ಮೆಗಾಸ್ಟಾರ್ ಇರುವುದು ಅವರು ಯಾರೆಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ' ಎಂದಿದೆ ಒಟಿಟಿ. ಆಹಾ ಕೋರಿದ ಕ್ಷಮೆಯನ್ನು ಮನ್ನಿಸಿದ್ದಾರೆ ಚಿರಂಜೀವಿ ಅಭಿಮಾನಿಗಳು.
This News Article is a Copy of FILMIBEAT
26-02-26 10:01 pm
HK News Staffer
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
27-02-26 06:14 am
HK News Staffer
ಮಾರ್ಚ್ 11ರಿಂದ ಅನಿರ್ದಿಷ್ಟ ಮುಷ್ಕರ ; ರಾಜ್ಯಾದ್ಯಂತ...
25-02-26 10:10 pm
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
26-02-26 01:21 pm
HK News Staffer
Mangalore: ಕುರ್ನಾಡಿನ ವೃದ್ಧ ದಂಪತಿಗೆ ನೂತನ ಮನೆ ಹ...
26-02-26 10:37 am
ಮಂಗಳೂರು ವಿವಿಯ ಯಕ್ಷಮಂಗಳ ಪ್ರಶಸ್ತಿ ಪ್ರಕಟ ; ಕಪ್ಪೆ...
25-02-26 05:41 pm
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
26-02-26 11:04 pm
mangalore
ಹವಾಲಾ ಹಣದ ಭಾರವೇ ಸಿಜೆ ರಾಯ್ ಪ್ರಾಣ ತೆಗೆಯಿತಾ?! ಕ...
26-02-26 04:45 pm
Vexon fraud Company, Mangalore: ಮಂಗಳೂರಿನಲ್ಲಿ...
26-02-26 03:48 pm
Mangalore Blackmail, Crime: ಖಾಸಗಿ ವೀಡಿಯೋ ಮುಂದ...
24-02-26 10:07 pm
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm