ಬ್ರೇಕಿಂಗ್ ನ್ಯೂಸ್
11-08-20 08:56 am Headline Karnataka News Network ಸಿನಿಮಾ
ಆಗಸ್ಟ್ 11: ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ತಮ್ಮ ಹೇಳಿಕೆ ಹಾಗೂ ಟ್ವೀಟ್ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಈಗ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಮೇಲೂ ಟ್ವೀಟ್ ವಾರ್ ನಡೆಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಸುಶಾಂತ್ ಸಾವಿಗೆ ಸ್ವಜನಪಕ್ಷಪಾತದ ಜೊತೆಗೆ ಬಿ-ಟೌನ್ನ ದೊಡ್ಡ ಕುಟುಂಬಗಳು ಎನಿಸಿಕೊಂಡಿರುವ ಕೆಲವರು ಪರೋಕ್ಷವಾಗಿ ಕಾರಣ ಎಂದು ಆರೋಪಿಸುತ್ತಾ ಬಂದಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ದೀಪಿಕಾ, ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಮಾನಿಕ ಖಿನ್ನತೆ ಕುರಿತಾಗಿ ಸಾಲು ಸಾಲು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು. ಆಗಲೂ ಕಂಗನಾ ಈ ಬಗ್ಗೆ ಟೀಕಿಸಿದ್ದರು.
ಈಗಲೂ ಸಹ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಟ್ವೀಟ್ ಮಾಡುತ್ತಾ ಕೊಂಚ ಖಾರವಾಗಿ ಟೀಕಿಸಿದ್ದಾರೆ.
ಟ್ವೀಟಿಗರೊಬ್ಬರು ಕಂಗನಾ ಹಾಗೂ ಸುಶಾಂತ್ ಅವರ ಹಿಟ್ ಸಿನಿಮಾ ಹಾಗೂ ಸಾಲು ಸಾಲು ಫ್ಲಾಪ್ ಕೊಟ್ಟ ರಣಬೀರ್ ಅವರ ಚಿತ್ರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ರಣಬೀರ್ ಹಾಗೂ ದೀಪಿಕಾ ಬಗ್ಗೆ ಸಖತ್ ಖಾರವಾಗಿ ಟೀಕಿಸಿದ್ದಾರೆ.
ರಣಬೀರ್ ಕಪೂರ್ಗೆ ಹುಡುಗಿಯರ ಹುಚ್ಚಿದೆ. ಆದರೆ ಅವರನ್ನು ಯಾರೂ ರೇಪಿಸ್ಟ್ ಎನ್ನುವ ಧೈರ್ಯ ತೋರುವುದಿಲ್ಲ ಎಂದಿದ್ದಾರೆ ಕಂಗನಾ.


ದೀಪಿಕಾ ಪಡುಕೋಣೆ ಸ್ವಘೋಷಿತ ಮಾನಸಿಕ ರೋಗಿ. ಇಂತಹ ನಟಿಯನ್ನು ಯಾರೂ ಸೈಕೋ ಎನ್ನುವುದಿಲ್ಲ. ಕೆಲವೊಂದು ಪದಗಳು ಏನಿದ್ದರೂ ಹೊರಗಿನಿಂದ ಬಂದ ನಟ-ನಟಿಯರಿಗೆ ಮಾತ್ರ ಮೀಸಲು ಎಂದು ಟೀಕಿಸಿದ್ದಾರೆ ಕಂಗನಾ.
ಇಂಡಸ್ಟ್ರಿಯಲ್ಲಿ ಸ್ಟಾರ್ ಕಿಡ್ಸ್ ಹಾಗೂ ಹೊರಗಿನಿಂದ ಬಂದ ಕಲಾವಿದರ ನಡುವೆ ತಾರತಮ್ಯ ಇಲ್ಲದೇ ಹೋದಾಗ ಮಾತ್ರ ಎಲ್ಲ ಸರಿಯಾಗುತ್ತದೆ ಎನ್ನುವುದು ಕಂಗನಾರ ಅಭಿಪ್ರಾಯ.
ಇದೇ ಬಾಲಿವುಡ್ನಲ್ಲಿ ಹೊರಗಿನಿಂದ ಬಂಧ ಪ್ರತಿಭಾವಂತ ಕಲಾವಿದರನ್ನು ನಿರ್ಲಕ್ಷಿಸುವ ಮಾಫಿಯಾ ಇದೆ. ಇದಕ್ಕೆ ಕೆಲವು ನಟ-ನಟಿಯರು ಬೆಂಬಲವಾಗಿದ್ದಾರೆ ಎಂದು ಬಹಳ ಹಿಂದಿನಿಂದ ಕಂಗನಾ ಆರೋಪಿಸುತ್ತಲೇ ಬಂದಿದ್ದಾರೆ.
26-02-26 10:01 pm
HK News Staffer
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
25-02-26 10:10 pm
HK News Desk
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
26-02-26 01:21 pm
HK News Staffer
Mangalore: ಕುರ್ನಾಡಿನ ವೃದ್ಧ ದಂಪತಿಗೆ ನೂತನ ಮನೆ ಹ...
26-02-26 10:37 am
ಮಂಗಳೂರು ವಿವಿಯ ಯಕ್ಷಮಂಗಳ ಪ್ರಶಸ್ತಿ ಪ್ರಕಟ ; ಕಪ್ಪೆ...
25-02-26 05:41 pm
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
26-02-26 11:04 pm
mangalore
ಹವಾಲಾ ಹಣದ ಭಾರವೇ ಸಿಜೆ ರಾಯ್ ಪ್ರಾಣ ತೆಗೆಯಿತಾ?! ಕ...
26-02-26 04:45 pm
Vexon fraud Company, Mangalore: ಮಂಗಳೂರಿನಲ್ಲಿ...
26-02-26 03:48 pm
Mangalore Blackmail, Crime: ಖಾಸಗಿ ವೀಡಿಯೋ ಮುಂದ...
24-02-26 10:07 pm
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm