ಬ್ರೇಕಿಂಗ್ ನ್ಯೂಸ್
15-12-20 11:46 am Source: FILMIBEAT Manjunatha C ಸಿನಿಮಾ
ತಮಿಳುನಾಡು, ಡಿ.15: ರಾಜಕೀಯ ಪ್ರವೇಶ ಮಾಡುವುದಾಗಿ ನಟ ರಜನೀಕಾಂತ್ ಈಗಾಗಲೇ ಅಧಿಕೃತವಾಗಿ ಘೋಷಿಸಿಯಾಗಿದೆ. ತಮ್ಮ ಪಕ್ಷದ ಹೆಸರು, ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸುವುದಾಗಿ ರಜನೀಕಾಂತ್ ಈಗಾಗಲೇ ಹೇಳಿದ್ದಾರೆ. ಆದರೆ ರಜನೀಕಾಂತ್ ಘೋಷಿಸುವ ಮುನ್ನವೇ ಪಕ್ಷದ ಹೆಸರು, ಚಿಹ್ನೆ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಹಲವು ತಮಿಳು ಚಾನೆಲ್ಗಳು ಈ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಿದ್ದು, ರಜನೀಕಾಂತ್ ಪಕ್ಷದ ಹೆಸರನ್ನು 'ಮಕ್ಕಳ್ ಸೇವೈ ಕಚ್ಚಿ' ಎಂದು ಚುನಾವಣಾ ಆಯೋಗದ ಬಳಿ ನೊಂದಾವಣಿ ಮಾಡಿಸಿದ್ದು, ಪಕ್ಷದ ಚಿಹ್ನೆ ಆಟೊ ರಿಕ್ಷಾ ಆಗಿದೆಯಂತೆ.
'ಮಕ್ಕಳ್ ಸೇವೈ ಕಚ್ಚಿ' ಎಂದರೆ, 'ಜನರಿಗೆ ಸೇವೆ ಮಾಡುವ ಪಕ್ಷ' ಎಂದರ್ಥ. ಈ ಪಕ್ಷದ ಸಿಂಬಲ್ ಆಗಿ ಆಟೊ ರಿಕ್ಷಾ ನೀಡಲಾಗಿದೆ ಎನ್ನಲಾಗುತ್ತಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸಲಾಗುತ್ತದೆ.

ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ
ರಜನೀಕಾಂತ್ ಅವರ ಸಂಘ 'ಮಕ್ಕಳ್ ಮಂದ್ರಮ್' ಸದಸ್ಯರ ಜೊತೆ ಚರ್ಚಿಸಿ ಪಕ್ಷದ ಹೆಸರು ನಿರ್ಧರಿಸಲಾಗಿದೆಯಂತೆ. ಈ ಮೊದಲು ಪಕ್ಷದ ಹೆಸರನ್ನು 'ಮಕ್ಕಳ್ ಶಕ್ತಿ ಕಳಗಂ' ಎಂದು ನೊಂದಾಯಿಸಿದ್ದರಂತೆ, ಜೊತೆಗೆ ಬಾಬಾ ಸಿಂಬಲ್ ಅನ್ನು ಗುರುತಾಗಿ ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.
ರಜನೀಕಾಂತ್ ಪ್ರವೇಶದಿಂದ ರಾಜಕೀಯ ಲೆಕ್ಕಾಚಾರ ಬದಲು?
ರಜನೀಕಾಂತ್ ರಾಜಕೀಯ ಪ್ರವೇಶದ ಸುದ್ದಿ ತಮಿಳುನಾಡು ರಾಜಕೀಯದ ಮೇಲೆ ಭಾರಿ ಪ್ರಭಾವ ಬೀರಿದೆ. ರಜನೀಕಾಂತ್ ಅವರು ಬಿಜೆಪಿಯ ಮಿತ್ರ ಪಕ್ಷ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಜನೀಕಾಂತ್ ರಾಜಕೀಯ ಪ್ರವೇಶದಿಂದ ಡಿಎಂಕೆಗೆ ತುಸು ಹಿನ್ನೆಡೆ ಆಗಲಿದೆ ಎನ್ನಲಾಗುತ್ತಿದೆ.
This News Article is a Copy of FILMIBEAT
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm