ಬ್ರೇಕಿಂಗ್ ನ್ಯೂಸ್
07-07-23 03:47 pm Source: News18 Kannada ಸಿನಿಮಾ
ರೋರಿಂಗ್ ಸ್ಟಾರ್ ಮುರಳಿ ಅಭಿನಯದ ರಥಾವರ ಸಿನಿಮಾ ನೆನಪಿರಬೇಕಲ್ವೇ ? ಹೌದು, ಆ ಚಿತ್ರದಲ್ಲಿ ಶ್ರೀ ಮುರಳಿ ಅದ್ಭುತ ಪಾತ್ರ ಮಾಡಿದ್ದರು. ಭಜರಂಗಿ ಚಿತ್ರ ಖ್ಯಾತಿಯ ನಟ ಲೋಕಿ ಕೂಡ ಈ ಸಿನಿಮಾದಲ್ಲಿ ಬೇಜಾನ್ ಸಖತ್ ರೋಲ್ ಮಾಡಿದ್ದರು. ಇದೆಲ್ಲ ಡೈರೆಕ್ಟರ್ ಕಲ್ಪನೆಯ ಅಧ್ಯಯನದ ರೂಪವೇ ಆಗಿತ್ತು.
ಅದೇ ನಿರ್ದೇಶಕ ಆನೆ ಪಟಾಕಿ ಅನ್ನುವ ಸಿನಿಮಾ ಮಾಡಿದ್ದರು.ಇದು ಇವರ ಮೊದಲ ಸಿನಿಮಾನೇ ಆಗಿತ್ತು. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈ ಚಿತ್ರದ ನಾಯಕರಾಗಿದ್ದರು. ಸಖತ್ ಹಾಸ್ಯವನ್ನ ಕೂಡ ಮಾಡಿದ್ದರು. ಈ ಚಿತ್ರದ ಓಟದಿಂದ ನಿರ್ಮಾಪಕರು ಕೂಡ ಫುಲ್ ಖುಷ್ ಆಗಿದ್ದರು.

ಹೌದು, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಒಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ. ಬೆರಳೆನಿಕೆಯಷ್ಟು ಸಿನಿಮಾ ಮಾಡಿರೋದು ಗೊತ್ತೇ ಇದೆ. ಆ ಸಾಲಿನಲ್ಲಿ ತಾರಕಾಸುರ ಸಿನಿಮಾ ಕೂಡ ಇತ್ತು. ಇದರಲ್ಲೂ ಒಳ್ಳೆ ಸ್ಟೋರಿ ಇತ್ತು. ಈ ಚಿತ್ರ ಆದ್ಮೇಲೆ ಚೌಕಿದಾರ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ವೈರ್ಮುಡಿ ಸಿನಿಮಾ ಈಗ ಪ್ರೀ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.
ಬಾಲಿವುಡ್ "ರೆಡ್ ಕಾಲರ್" ಸಿನಿಮಾದಲ್ಲಿ ಕಿಶೋರ್ ಹೀರೋ!
ಆದರೆ ಸದ್ದಿಲ್ಲದೇ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಕ್ರೈಂ ಕಥೆ ಹೊಂದಿರೋ ಈ ಚಿತ್ರಕ್ಕೆ ರೆಡ್ ಕಾಲರ್ ಅನ್ನುವ ಹೆಸರಿದೆ. ಇದಕ್ಕೂ ಹೆಚ್ಚಾಗಿ ಇದೊಂದು ದೇಸಿ ಕಂಟೆಂಟ್ ಇರೋ ಸಿನಿಮಾ ಅನ್ನೋದನ್ನ ಚಂದ್ರಶೇಖರ್ ಹೇಳುತ್ತಾರೆ.
ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಈ ಚಿತ್ರ ಇದೆ. ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಕನ್ನಡದ ಸ್ಪೆಷಲ್ ನಟ ಕಿಶೋರ್ ಈ ಸಿನಿಮಾದಲ್ಲಿ ಲೀಡ್ ರೋಲ್ ಅಲ್ಲಿಯೇ ಇದ್ದಾರೆ. ಈ ಮೂಲಕ ಕಿಶೋರ್ ಬಾಲಿವುಡ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕಿಶೋರ್ 3 ನೇ ಬಾಲಿವುಡ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ಈ ಹಿಂದೆ ಕಿಶೋರ್ ಬಾಲಿವುಡ್ನ ವೆಬ್ ಸಿರೀಸ್ಗಳಾದ ದಿ ಫ್ಯಾಮಿಲಿ ಮ್ಯಾನ್, She ಅಲ್ಲೂ ಅಭಿನಯಿಸಿದ್ದಾರೆ. ಆದರೆ ಹಿಂದಿ ಸಿನಿಮಾ ಅಂತ ಬಂದ್ರೆ, ರೆಡ್ ಕಾಲರ್ ಸಿನಿಮಾ ಫಸ್ಟ್ ಅಂತಲೇ ಹೇಳಬಹುದು.
ಬಾಂಬೆ ಹೀರೋಯಿನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲೂ ಮಾಡಲಾಗಿದೆ. ಇನ್ನುಳಿದಂತೆ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಈ ಮೂಲಕ ಬಾಲಿವುಡ್ಗೂ ಪ್ರವೇಶ ಪಡೆದಿದ್ದಾರೆ. ತಮ್ಮ ಮೊದಲ ಹಿಂದಿ ಚಿತ್ರದ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಈಗ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.
Sandalwood Kantara Fame Actor Kishore Hindi Movie Latest News Updates.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am