ಬ್ರೇಕಿಂಗ್ ನ್ಯೂಸ್
30-06-23 04:02 pm Source: Vijayakarnataka ಸಿನಿಮಾ
ಹರೀಶ್ ಬಸವರಾಜ್
ರಾಜ್ ಬಿ ಶೆಟ್ಟಿ ಎಂದರೆ ‘ಒಂದು ಮೊಟ್ಟೆಯ ಕಥೆ’ ಸಿನಿಮಾವನ್ನೇ ಜನ ನೆನಪಿಸಿಕೊಳ್ಳುತ್ತಾರೆ. ಅವರನ್ನು ಹಾಸ್ಯ ನಟ ಎಂದು ಗುರುತಿಸುತ್ತಾರೆ. ಆ ಟ್ರೇಡ್ ಮಾರ್ಕ್ ಅನ್ನು ಹೊಡೆದು ಹಾಕಲು ರಾಜ್ ಬಿ ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ ಎಂಬ ಮಾಸ್ ಸಿನಿಮಾವನ್ನು ಮಾಡಿದರು. ಈಗ ‘ಟೋಬಿ’ ಎಂಬ ವಿಭಿನ್ನ ಸಿನಿಮಾದ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಕೆಲವು ವಾರಗಳ ಹಿಂದೆ ಅದರ ಟೈಟಲ್ ಅನೌನ್ಸ್ ಆಗಿತ್ತು. ಈಗ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದೀಗ ಸ್ಯಾಂಡಲ್ವುಡ್ನಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಹೌದು, ಗುರುವಾರ ರಿಲೀಸ್ ಆಗಿರುವ ಫಸ್ಟ್ ಲುಕ್ನಲ್ಲಿ ರಾಜ್ ಬಿ ಶೆಟ್ಟಿಯವರ ಅವತಾರವೇ ವಿಭಿನ್ನವಾಗಿದೆ. ಏಟು ಬಿದ್ದು ರಕ್ತಸಿಕ್ತವಾದ ಮುಖ, ಮೂಗಿಗೆ ಬಳೆಯಷ್ಟು ದೊಡ್ಡದಾದ ಮೂಗುತಿ. ಸಿಟ್ಟು ಹೀಗೆ ರಾಜ್ ಅವರ ಲುಕ್ ಕ್ರೋದವನ್ನು ಎತ್ತಿ ತೋರಿಸುತ್ತಿದೆ. ಇಂತಹ ಲುಕ್ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ಜನ ಇದೇ ಮೊದಲ ಬಾರಿಗೆ ನೋಡುತ್ತಿದ್ದಾರೆ. ದೊಡ್ಡ ಮೂಗತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜ್ ಬಿ ಶೆಟ್ಟಿ ಲವಲವಿಕೆ ಜತೆ ಮಾತನಾಡಿದ್ದಾರೆ.
ಅಚ್ಚರಿಯಾಗುವಂತಹ ಸಾಕಷ್ಟು ವಿಷಯಗಳಿವೆ
'ಟೋಬಿ ಪಾತ್ರಧಾರಿ ಅಂತಹ ಮೂಗುತಿಯನ್ನು ತೊಡಲು ಅದಕ್ಕೆ ಅದರದ್ದೇ ಆದ ಕಾರಣವಿದೆ. ಇದೊಂದು ರೀತಿಯಲ್ಲಿ ನನ್ನೊಳಗೆ ಮತ್ತು ಪಾತ್ರದಲ್ಲಿ ಆದಂತಹ ಬದಲಾವಣೆಯನ್ನು ತೋರಿಸುತ್ತದೆ. ಈ ಪೋಸ್ಟರ್ ನೋಡಿ ಅಚ್ಚರಿಯಾಗುತ್ತಾರೆ. ಅದೇ ರೀತಿ ಸಿನಿಮಾದಲ್ಲಿ ಅಚ್ಚರಿಯಾಗುವಂತಹ ಸಾಕಷ್ಟು ವಿಷಯಗಳಿವೆ. ಈ ಪೋಸ್ಟರ್ನಲ್ಲಿ ಕ್ರೋಧ ಎದ್ದು ಕಾಣುತ್ತದೆ. ಅದು ಬರೀ ಕ್ರೋಧವಲ್ಲ, ಅದರಲ್ಲಿಆಕ್ರಮಣಕಾರಿ ಸಹ ಆಗಿರುತ್ತದೆ’ ಎಂದು ಹೇಳಿದ್ದಾರೆ ರಾಜ್.
ನನ್ನ ಸಿಟ್ಟು ಯಾರಿಗೂ ತೊಂದರೆ ಕೊಡುವುದಿಲ್ಲ
‘ನಾನು ಇಡೀ ಸಿನಿಮಾ ಈ ಮೂಗುತಿಯನ್ನು ತೊಟ್ಟಿರುವುದಿಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ಅನಿವಾರ್ಯತೆ ಸೃಷ್ಟಿಯಾಗಿ ಅದನ್ನು ತೊಡುತ್ತೇನೆ. ಇದು ಜನರಿಗೆ ಇಷ್ಟವಾಗುತ್ತದೆ ಎಂಬುದು ನನ್ನ ನಂಬಿಕೆ. ನನ್ನ ಸಿಟ್ಟು ಸಹ ಟೋಬಿಯ ಪಾತ್ರವನ್ನು ರೂಪಿಸಲು ಸಹಾಯವಾಗಿದೆ. ನನ್ನ ಸಿಟ್ಟು ಯಾರಿಗೂ ತೊಂದರೆ ಕೊಡುವುದಿಲ್ಲ, ಬದಲಿಗೆ ಅದರಿಂದ ಪ್ರೊಡಕ್ಟಿವ್ ಮತ್ತು ಕ್ರಿಯೇಟಿವ್ ಕೆಲಸಗಳು ಆಗುತ್ತವೆ’ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
ಉತ್ತಮ ಸಿನಿಮಾನೇ ಒಂದು ಪ್ರಚಾರವಿದ್ದಂತೆ
ಈ ರೀತಿಯ ವಿಚಿತ್ರ ಪೋಸ್ಟರ್ಗಳ ಬಗ್ಗೆಯೂ ಮಾತನಾಡಿರುವ ರಾಜ್, ‘ಸಿನಿಮಾ ಮೇಕರ್ಗಳು ಯಾವಾಗಲೂ ಜನರನ್ನು ಹೊಸ ಪ್ರಯೋಗದತ್ತ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಸಿನಿಮಾ ಮತ್ತು ಪ್ರಚಾರ ಎರಡನ್ನೂ ನಾನು ಮಿಕ್ಸ್ ಮಾಡುವುದಿಲ್ಲ. ನನಗೆ ಉತ್ತಮ ಸಿನಿಮಾನೇ ಒಂದು ಪ್ರಚಾರವಿದ್ದಂತೆ. ಯಾವಾಗಲೂ ಪೋಸ್ಟರ್ಗಳು ಸಿನಿಮಾಗಳ ಕನ್ನಡಿಯಂತೆ ಕಾಣಬೇಕು. ಒಳ್ಳೆಯ ಸಿನಿಮಾ ಎನಿಸುವುದು ಸಹ ಪೋಸ್ಟರ್ ನೋಡಿದರೆ ಗೊತ್ತಾಗಬೇಕು’ ಎನ್ನುವುದು ರಾಜ್ ಬಿ ಶೆಟ್ಟಿಯವರ ಮಾತು.
‘ನನ್ನ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ನನ್ನದೇ ವೈಯಕ್ತಿಕ ಅನುಭವವನ್ನು ಇಟ್ಟುಕೊಂಡು ಮಾಡಿದ ಚಿತ್ರ. ಅದರ ಬಜೆಟ್ ಬಹಳ ಚಿಕ್ಕದಾಗಿತ್ತು. ಆ ಬಜೆಟ್ ಅನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಮೂಲಕ ಇನ್ನಷ್ಟು ಹೆಚ್ಚು ಮಾಡಿದೆವು. ಈ ಬಾರಿ ಮತ್ತಷ್ಟು ಹೆಚ್ಚಿಸಿ ‘ಟೋಬಿ’ ಮಾಡಿದ್ದೇವೆ. ಹಾಗಾಗಿ ಸಿನಿಮ್ಯಾಟಿಕ್ ಅನುಭವ ಮೊದಲ ಎರಡು ಸಿನಿಮಾಗಳಿಗಿಂತಲೂ ದೊಡ್ಡದಾಗಿರುತ್ತದೆ’ಎಂದು ಹೇಳಿದ್ದಾರೆ. ‘ಟೋಬಿ’ ಸಿನಿಮಾವನ್ನು ರಾಜ್ ಅವರ ಜತೆ ಕೆಲಸ ಮಾಡುತ್ತಿದ್ದ ಬಾಸಿಲ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಸಂಯಕ್ತಾ ಹೊರನಾಡು, ಚೈತ್ರಾ ಜೆ ಆಚಾರ್ ನಟಿಸಿದ್ದಾರೆ.
Raj B Shetty Samyukta hornad Chaithra j achars toby movie first look released.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 02:13 pm
HK News Desk
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm