ಬ್ರೇಕಿಂಗ್ ನ್ಯೂಸ್
29-06-23 01:22 pm Source: news18 ಸಿನಿಮಾ
ದಳಪತಿ ವಿಜಯ್ ಅವರ ಮುಂದಿನ ಸಿನಿಮಾ ಲಿಯೋ ಅವರಿಗೆ ತೊಂದರೆ ತಂದಿಟ್ಟಿದೆ. ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್ ಆಗಿದ್ದೇ ತಟ ತಮಿಳು ನಟ, ಸ್ಟಾರ್ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಲಿಯೋ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಲಿಯೋ ಸಿನಿಮಾ ಅಕ್ಟೋಬರ್ನಲ್ಲಿ ದಸರಾ ಸಂದರ್ಭ ಬಿಡುಗಡೆಯಾಗಲಿದೆ. ಸಿನಿಮಾದ ಹೆಚ್ಚಿನ ಸೀನ್ ಶೂಟಿಂಗ್ ಕೂಡಾ ಮುಗಿದಿದೆ. ಸಿನಿಮಾದ ಮೊದಲ ಸಾಂಗ್ ವಿಜಯ್ ಬರ್ತ್ಡೇ ಸಂದರ್ಭ ರಿಲೀಸ್ ಮಾಡಲಾಗಿತ್ತು. ಆದರೆ ಹಾಡಿನ ಬಗ್ಗೆ ವಿರೋಧ ವ್ಯಕ್ತವಾಗಿದೆ.
ನಾ ರೆಡಿ ಎನ್ನುವ ಹಾಡು ರಿಲೀಸ್ ಆಗಿದ್ದು ಈಗ ಸಮಸ್ಯೆ ಎದುರಾಗಿದೆ. ಕೊರುಕ್ಕುಪೇಟ್ ಎಂಬಲ್ಲಿನ ಸಾಮಾಜಿಕ ಕಾರ್ಯಕರ್ತ ಸೆಲ್ವಮ್ ಎಂಬ ವ್ಯಕ್ತಿ ನಾ ರೆಡಿ ಹಾಡಿನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಹಾಡು ಮಾದಕ ವ್ಯಸನವನ್ನು ಹಾಗೂ ರೌಡಿಸಂ ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಆ್ಯಕ್ಟ್ ಅಡಿಯಲ್ಲಿ ನಟ ವಿಜಯ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಮಿಷನರ್ ಬಳಿ ದೂರು ನೀಡಲಾಗಿದೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದ್ದು ಹಾಡಿನ ಲಿರಿಕ್ಸ್ ಬಗ್ಗೆ ಟೀಕೆ ವ್ಯಕ್ತವಾಗಿದೆ.

ನಾ ರೆಡಿ ಹಾಡಿನಲ್ಲಿರುವ ಕೆಲವು ಸಾಲುಗಳು ಡ್ರಗ್ಸ್ ಹಾಗೂ ರೌಡಿಸಂ ಸಪೋರ್ಟ್ ಮಾಡುತ್ತವೆ. ವಿಜಯ್ ಅವರು ಸ್ಮೋಕ್ ಮಾಡುತ್ತಿದ್ದು ಮದ್ಯವನ್ನೂ ಈ ಹಾಡಿನಲ್ಲಿ ಬಳಸಲಾಗಿದೆ. ಸಾಂಗ್ ವೈರಲ್ ಆಗಿದ್ದು ಇದು ಯುವಜನರನ್ನು ಪ್ರಭಾವಿಸುತ್ತದೆ ಎಂದು ಆರೋಪಿಸಲಾಗಿದೆ. ವಿಜಯ್ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡುವುದಾಗಿ ಸೆಲ್ವಮ್ ಹೇಳಿದ್ದಾರೆ. ಇದೇ ವಿಚಾರವಾಗಿ ಕೆಲವು ನೆಟ್ಟಿಗರು ವಿಜಯ್ ವಿರುದ್ಧ ಕಿಡಿ ಕಾರಿದ್ದಾರೆ. ವಿಜಯ್ ಅವರ ಅಭಿಮಾನಿಗಳು ಇದು ಸಿನಿಮಾಗೆ ಬಿಟ್ಟಿ ಪ್ರಚಾರ ಎಂದು ಹೇಳಿದ್ದಾರೆ.

ಸದ್ಯ ಲಿಯೋ ಸಿನಿಮಾದ ಶೂಟಿಂಗ್ ಫೈನಲ್ ಸ್ಟೇಜ್ಗೆ ತಲುಪಿದೆ. ಈ ಸಿನಿಮಾ ಬಹುನಿರೀಕ್ಷಿತ ಚಿತ್ರವಾಗಿದ್ದು ವಿಜಯ್ ಫ್ಯಾನ್ಸ್ ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದಾರೆ. ವಿಜಯ್ ಅವರ ಹಲವಾರು ಫೋಟೋಗಳು ವೈರಲ್ ಆಗಿದ್ದು ಇದರಲ್ಲಿ ನಟ ಸಿಗರೇಟ್ ಸೇದುವುದನ್ನು ಕಾಣಬಹುದು. ಹಾಗೆಯೇ ನಟ ಪಿಸ್ತೂಲ್ ಹಿಡಿದಿರುವಂತಹ ಫೋಟೋಗಳು ಕೂಡಾ ವೈರಲ್ ಆಗಿದ್ದವು.
A police complaint filed against leo actor vijay for promoting drugs.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm