ತಮಿಳು ನಟ ವಿಜಯ ಸೇತುಪತಿ ಮಗಳಿಗೆ ಅತ್ಯಾಚಾರದ ಬೆದರಿಕೆ

20-10-20 11:43 am       Headline Karnataka News Network   ಸಿನಿಮಾ

ವಿಜಯ್ ಅವರು ಮುರಳೀಧರನ್ ಜೀವನಚರಿತ್ರೆವುಳ್ಳ ಚಿತ್ರದಿಂದ ನಿರ್ಗಮಿಸಿದ ಕೆಲವೇ ಗಂಟೆಗಳ ಬಳಿಕ ನಟನ ಟೈಮ್‌ಲೈನ್‌ನಲ್ಲಿ ಅವರ ಮಗಳಿಗೆ ಅತ್ಯಾಚಾರದ ಬೆದರಿಕೆ

ಚೆನ್ನೈ, ಅಕ್ಟೋಬರ್ 19: ತಮಿಳು ನಟ ವಿಜಯ ಸೇತುಪತಿ ಸಾಮಾಜಿಕ ಒತ್ತಡದಿಂದ ಪಾರಾಗಲು ಸೋಮವಾರ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಚಿತ್ರದಿಂದ ನಿರ್ಗಮಿಸಿದ್ದರು. ಆದರೆ, ಕಿಡಿಗೇಡಿಗಳು ಇದೇ ವಿಚಾರಕ್ಕೆ ಸಂಬಂಧಿಸಿ ಸೇತುಪತಿಗೆ ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ.

ವಿಜಯ್ ಅವರು ಮುರಳೀಧರನ್ ಜೀವನಚರಿತ್ರೆವುಳ್ಳ ಚಿತ್ರದಿಂದ ನಿರ್ಗಮಿಸಿದ ಕೆಲವೇ ಗಂಟೆಗಳ ಬಳಿಕ ನಟನ ಟೈಮ್‌ಲೈನ್‌ನಲ್ಲಿ ಅವರ ಮಗಳಿಗೆ ಅತ್ಯಾಚಾರದ ಬೆದರಿಕೆಯನ್ನು ಒಡ್ಡುವ ಮೂಲಕ ಕೆಲವರು ಸಭ್ಯತೆಯ ಮೇರೆ ಮೀರಿದ್ದಾರೆ.

ಇತ್ತೀಚೆಗೆ ಕ್ರಿಕೆಟಿಗ ಎಂಎಸ್ ಧೋನಿ ಅವರ ಪುತ್ರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.

ವಿಜಯ್ ಸೇತುಪತಿ ಪುತ್ರಿಗೆ ಬೆದರಿಕೆ ಹಾಕಿರುವ ಟ್ರೋಲ್‌ಗಳು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಹಲವು ಜನರು ಇಂತಹ ವರ್ತನೆಯನ್ನು ಖಂಡಿಸಿದ್ದಾರೆ. ನೆಟ್ಟಿಗರ ನಡವಳಿಕೆಯನ್ನು ಖಂಡಿಸಿದ್ದ ಗಾಯಕ ಚಿನ್ಮಯ್ ಶ್ರೀಪಾದ ಕೆಟ್ಟದಾಗಿ ಮಾಡಿರುವ ಟ್ವೀಟನ್ನು ಚೆನ್ನೈ ಪೊಲೀಸ್ ಹಾಗೂ ಅಡ್ಯಾರ್ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.

Vijay's minor daughter was issued rape threat on Twitter. Several social media users came down heavily on the offender and demanded that the concerned person be arrested for advocating violence against a child.