ತೆನೆ ಬಿಟ್ಟು ಕಮಲ ಹಿಡಿದ ನಟಿ ಅಮೂಲ್ಯ ; ಬಿಜೆಪಿಯಲ್ಲಿ 'ಪೋಸ್ಟ್' ಸಾಧ್ಯತೆ !

19-10-20 12:39 pm       Bangalore Correspondent   ಸಿನಿಮಾ

ಆರ್.ಆರ್. ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೇತೃತ್ವದಲ್ಲಿ ಪತಿ ಜಗದೀಶ್, ಮಾವ ಮಾಜಿ ಕಾರ್ಪೊರೇಟರ್ ಜಿ.ಎಚ್. ರಾಮಚಂದ್ರ ಜೊತೆ ಬಿಜೆಪಿ ಸೇರಿದ್ದಾರೆ. 

ಬೆಂಗಳೂರು, ಅಕ್ಟೋಬರ್ 19: ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪರ ಪ್ರಚಾರಕ್ಕಿಳಿದಿದ್ದ ನಟಿ ಅಮೂಲ್ಯ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆರ್.ಆರ್. ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೇತೃತ್ವದಲ್ಲಿ ಪತಿ ಜಗದೀಶ್, ಮಾವ ಮಾಜಿ ಕಾರ್ಪೊರೇಟರ್ ಜಿ.ಎಚ್. ರಾಮಚಂದ್ರ ಜೊತೆ ಬಿಜೆಪಿ ಸೇರಿದ್ದಾರೆ. 

ರಾಜರಾಜೇಶ್ವರಿ ನಗರದ ಜಿ.ಎಚ್. ರಾಮಚಂದ್ರ ಮನೆಯಲ್ಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಎಚ್. ರಾಮಚಂದ್ರ ಪರವಾಗಿ ಅಮೂಲ್ಯ ಬೀದಿಗಿಳಿದು ಪ್ರಚಾರ ನಡೆಸಿದ್ದರು. ಆದರೆ, ಚುನಾವಣೆ ಸೋತ ಬಳಿಕ ಪಕ್ಷದ ಚಟುವಟಿಕೆಯಲ್ಲಿ ಅಮೂಲ್ಯ ಕಾಣಿಸಿಕೊಂಡಿರಲಿಲ್ಲ. 

ಆಬಳಿಕ ಪತಿ ಜಗದೀಶ್ ಜೊತೆಗೆ ರಾಜರಾಜೇಶ್ವರಿ ನಗರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಸಕ್ರಿಯವಾಗುವ ದೂರಾಲೋಚನೆ ಇಟ್ಟುಕೊಂಡು ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಅಮೂಲ್ಯಗೆ ಪಕ್ಷದಲ್ಲಿ ಸ್ಥಾನಮಾನ ಸಿಗುವ ಸಾಧ್ಯತೆಯಿದೆ.