ಬ್ರೇಕಿಂಗ್ ನ್ಯೂಸ್
21-04-21 02:24 pm Headline Karnataka News Network ದೇಶ - ವಿದೇಶ
ನವದೆಹಲಿ, ಎ.21: ಬಾನಾಡಿಯಾಗಿ ಹಾರಿಹೋಗುವ ಪಾರಿವಾಳದ ವಿರುದ್ಧ ಎಫ್ಐಆರ್ ಆಗಿರುವುದನ್ನು ಕೇಳಿದ್ದೀರಾ.. ಸಾಮಾನ್ಯವಾಗಿ ಮನುಷ್ಯರು ಅಪರಾಧ ಕೃತ್ಯ ಎಸಗಿದರೆ ಅವರನ್ನು ಶಿಕ್ಷಿಸಲು ಕೇಸ್, ಎಫ್ಐಆರ್ ಮಾಡಲಾಗುತ್ತದೆ. ಆದರೆ, ಇಲ್ಲೊಂದು ಸಾಮಾನ್ಯ ಪಾರಿವಾಳದ ವಿರುದ್ಧವೇ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ಹೌದು.. ಪಾಕಿಸ್ಥಾನದ ಗಡಿಭಾಗ ಪಂಜಾಬ್ ನಲ್ಲಿ ಪಾರಿವಾಳದ ವಿರುದ್ಧವೇ ಸ್ಥಳೀಯ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಗಡಿರೇಖೆಯಿಂದ 500 ಮೀಟರ್ ಒಳಭಾಗದಲ್ಲಿ ಹಾರಿಬಂದ ಪಾರಿವಾಳವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಅದರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಎ.17ರಂದು ಸಂಜೆ ಗಡಿಭಾಗದಲ್ಲಿ ಕರ್ತವ್ಯದಲ್ಲಿದ್ದ ನೀರಜ್ ಕುಮಾರ್ ಎಂಬ ಯೋಧನ ಹೆಗಲಲ್ಲಿ ಕುಳಿತ ಪಾರಿವಾಳವನ್ನು ಆತ ಕೂಡಲೇ ಹಿಡಿದುಕೊಂಡಿದ್ದರು. ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದ ಚೂರಿನಲ್ಲಿ ಏನೋ ಗೂಢ ಸಂಖ್ಯೆ ಇರುವುದನ್ನು ಗಮನಿಸಿದ ಯೋಧ ಕೂಡಲೇ, ತಮ್ಮ ವಿಭಾಗದ ಕಮಾಂಡರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಕಮಾಂಡರ್ ಓಂಪಾಲ್ ಸಿಂಗ್ ಸೂಚನೆಯಂತೆ, ಪಾರಿವಾಳವನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದದ ಚೂರನ್ನು ಗಮನಿಸಿದ್ದಾರೆ.

ಪಾರಿವಾಳದ ಕಾಲಿಗೆ ಗಮ್ ಟೇಪಲ್ಲಿ ಸುತ್ತಿಟ್ಟ ರೀತಿಯಲ್ಲಿ ಕಾಗದದ ಚೂರನ್ನು ಅಂಟಿಸಲಾಗಿತ್ತು. ಅದರಲ್ಲಿ ಏನೋ ಕೋಡ್ ನಂಬರ್ ಬರೆಯಲಾಗಿತ್ತು. ಹೀಗಾಗಿ ಇದೊಂದು ಗೂಢಚಾರಿಕೆ ಕೆಲಸಕ್ಕಾಗಿ ಹಾರಿಬಿಟ್ಟ ಪಾರಿವಾಳ ಎನ್ನುವುದನ್ನು ಅರಿತ ಕಮಾಂಡರ್ ಓಂಪಾಲ್ ಸಿಂಗ್, ಅದರ ವಿರುದ್ಧ ಸ್ಥಳೀಯ ಅಮೃತಸರ ಸಮೀಪದ ಕಹಾಗರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಬಿಳಿ ಬಣ್ಣದ ದೇಹ ಮತ್ತು ಕಪ್ಪು ಬಣ್ಣದ ತಲೆ ಹೊಂದಿರುವ ಪಾರಿವಾಳ ಮತ್ತು ಬಿಳಿ ಬಣ್ಣದ ಪೇಪರ್ ವಶಕ್ಕೆ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿಯೂ ಇದೇ ರೀತಿಯ ಗೂಢಚಾರಿಕೆ ವೃತ್ತಿಯ ಪಾರಿವಾಳ ಒಂದನ್ನು ಜಮ್ಮು ಗಡಿಭಾಗದಲ್ಲಿ ಯೋಧರು ಪತ್ತೆ ಮಾಡಿದ್ದರು. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಭಾಗದಲ್ಲಿ ಗೂಢಚಾರಿಕೆಯ ತರಬೇತಾಗಿದ್ದ ಪಾರಿವಾಳವನ್ನು ವಶಕ್ಕೆ ಪಡೆಯಲಾಗಿತ್ತು. ಸೇನಾ ಮೂಲಗಳ ಪ್ರಕಾರ, ಪಾರಿವಾಳದ ಮೂಲಕ ಕೋಡೆಡ್ ಸಂದೇಶವನ್ನು ಕಳಿಸುತ್ತಿದ್ದು ಅದೆಲ್ಲೋ ದಾರಿತಪ್ಪಿ ಯೋಧರ ಕೈಗೆ ಸಿಕ್ಕಿದೆಯಂತೆ.
The auspicious pigeon was caught near the International Border at Punjab when the bird came flying near a constable who was on duty at BOP Roranwala. An FIR has been lodged against the pigeon which was carrying a piece of paper tied to its legs.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am