ಬ್ರೇಕಿಂಗ್ ನ್ಯೂಸ್
21-08-23 01:27 pm HK News Desk ದೇಶ - ವಿದೇಶ
ಕಾನ್ಪುರ, ಆಗಸ್ಟ್ 21: ಗುಜರಾತಿನಲ್ಲಿ ಹಾವು ಕಡಿತಕ್ಕೊಳಗಾದ ಯುವಕನೊಬ್ಬ ಚಿಕಿತ್ಸೆಗಾಗಿ ಸುಮಾರು 1,300 ಕಿ.ಮೀ ಕ್ರಮಿಸಿ ಉತ್ತರ ಪ್ರದೇಶದ ಕಾನ್ಪುರ ತಲುಪಿ ಬದುಕುಳಿದಿರುವ ಅಚ್ಚರಿಯ ಘಟನೆ ನಡೆದಿದೆ. ಕಿಶನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಫತೇಪುರದ ಸುನಿಲ್ ಕುಮಾರ್ (20) ನೇ ಹೀಗೆ ಬದುಕುಳಿದ ಯುವಕನಾಗಿದ್ದಾನೆ
ಈತ ಗುಜರಾತ್ನ ರಾಜ್ಕೋಟ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 15ರಂದು ಆತನಿಗೆ ಹಾವು ಕಚ್ಚಿದೆ. ತಕ್ಷಣವೇ ಅವನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಸುನಿಲ್ ಆರೋಗ್ಯ ಹಾವು ಕಡಿತದಿಂದ ಹದಗೆಡುತ್ತಾ ಹೊರಟಿತ್ತು. ಅಲ್ಲದೆ ಆತ ಪ್ರಜ್ಞಾಹೀನಾಗಿದ್ದ. ಕುಟುಂಬದವರಿಗೆಲ್ಲ ಒಂದು ಬಾರಿ ಹೃದಯ ಬಡಿತ ನಿಂತಂತಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಡಮಾಡದೇ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು.
ಆದರೆ, ಗುಜಾರತ್ನಿಂದ ಉತ್ತರಪ್ರದೇಶದ ಕಾನ್ಪುರ ಆಸ್ಪತ್ರೆಗೆ ಸುಮಾರು 1.300 ಕಿ.ಮೀ ದೂರವಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಅಷ್ಟು ದೂರ ಕ್ರಮಿಸಿ ಸುನಿಲ್ನನ್ನು ಉಳಿಸಿಕೊಳ್ಳುವುದು ಕುಟುಂಬದವರಿಗೆ ಸವಾಲಾಗಿತ್ತು. ತಕ್ಷಣವೇ ಗುಜರಾತ್ನಲ್ಲಿ 51,000 ರೂಪಾಯಿಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್ನ್ನು ಬಾಡಿಗೆಗೆ ಪಡೆದು ಸುನಿಲ್ನ್ನು 1300 ಕಿಮೀ ಪ್ರಯಾಣಿಸಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಗೆ ತಲುಪಿದ ಕೂಡಲೇ ಸುನಿಲ್ನನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಯಿತು. ತುರ್ತು ಚಿಕಿತ್ಸೆ ನೀಡಿ ಪ್ರತಿ ನಿಮಿಷ ಸುನಿಲ್ ಆರೋಗ್ಯದ ಮೇಲೆ ನಿಗಾ ಇಡಲಾಯಿತು. ಅದೃಷ್ಟವಶಾತ್ ಸುನಿಲ್ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಾ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಅಂತಿಮವಾಗಿ ಶನಿವಾರ ಆತನಿಗೆ ಅಳವಡಿಸಿದ್ದ ವೆಂಟಿಲೇಟರ್ನ್ನು ತೆಗೆಯಲಾಗಿದೆ.
ವರದಿಗಳ ಪ್ರಕಾರ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಗಳು ಶೇಕಡಾ 75 ರಷ್ಟು ಜನ ತಮಗೆ ಹಾವು ಕಚ್ಚಿದೆ ಎಂಭ ಭಯದಿಂದಲೇ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದ್ದಾಗ ಭಯಗೊಂಡರೇ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ದೇಹ ಸೇರಿರುವ ಹಾವಿನ ವಿಷ ಬೇಗ ನಿಮ್ಮ ರಕ್ತನಾಳಗಳ ಮೂಲಕ ದೇಹದ ತುಂಬೆಲ್ಲ ಪಸರಿಸುತ್ತದೆ. ಪರಿಣಾಮ ಬೇಗ ಉಸಿರು ಚೆಲ್ಲುವ ಸಾಧ್ಯತೆ ಹೆಚ್ಚು ಅಂತಾ ತಜ್ಞರು.
A youth, bitten by a snake in Gujarat on August 15, travelled around 1,300 km and reached Kanpur in Uttar Pradesh for his treatment. Sunil Kumar, 20, of Fatehpur works as a labourer in Rajkot, Gujarat, where a snake bit him. He was rushed to a health centre there but his condition worsened and later, he became unconscious.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am