ಬ್ರೇಕಿಂಗ್ ನ್ಯೂಸ್
03-05-23 08:33 pm HK News Desk ದೇಶ - ವಿದೇಶ
ನವದೆಹಲಿ, ಮೇ 3: ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ ಜಲ ಮತ್ತು ವಿದ್ಯುತ್ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್ (ವಾಪ್ಕೋಸ್) ಕಂಪನಿಯ ನಿವೃತ್ತ ಮುಖ್ಯ ವ್ಯವಸ್ಥಾಪಕ ರಾಜೀಂದರ್ ಕುಮಾರ್ ಎಂಬಾತನ ಮನೆ ಮತ್ತು 19 ಕಡೆ ಇರುವ ಆಸ್ತಿಗಳಿಗೆ ಏಕಕಾಲದಲ್ಲಿ ಸಿಬಿಐ ದಾಳಿ ನಡೆಸಿದ್ದು, 20 ಕೋಟಿ ರೂಪಾಯಿ ನಗದನ್ನು ವಶಕ್ಕ ಪಡೆಯಲಾಗಿದೆ.
ದೆಹಲಿ, ಗುರುಗ್ರಾಮ್, ಪಂಚ್ ಕುಲಾ, ನೋಯ್ಡಾ, ಲೂಧಿಯಾನ, ಸೋನಿಪತ್, ಚಂಡೀಗಢ, ಉತ್ತರ ಪ್ರದೇಶದ ಗಾಜಿಯಾಬಾದ್ ಸೇರಿದಂತೆ 19 ವಿವಿಧ ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಂಡೀಗಢದಲ್ಲಿ ರಾಜೀಂದರ್ ಕುಮಾರ್ ಪುತ್ರನ ಮನೆ ಒಂದರಲ್ಲೇ ದಾಳಿ ವೇಳೆ 10 ಕೋಟಿ ನಗದು ಪತ್ತೆಯಾಗಿದೆ. ರಾಶಿ ರಾಶಿ ನಗದು ಸಿಕ್ಕಿದ್ದು ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
2011ರಿಂದ 2019ರ ವರೆಗೆ ಸಿಎಂಡಿ ಆಗಿದ್ದ ರಾಜೀಂದರ ಕುಮಾರ್ ಗುಪ್ತಾ ಅಕ್ರಮವಾಗಿ ಆಸ್ತಿ ಗಳಿಸಿದ್ದಾನೆಂದು ದೂರು ಲಭಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. 2019ರಲ್ಲಿ ನಿವೃತ್ತಿಯಾದ ಬಳಿಕ ರಾಜೀಂದರ್ ಕುಮಾರ್ ತನ್ನದೇ ಆದ ಕನ್ಸಲ್ಟೆನ್ಸಿ ಕಂಪನಿಯೊಂದನ್ನು ಆರಂಭಿಸಿದ್ದ. ಇದಲ್ಲದೆ, ದೆಹಲಿ, ಪಂಜಾಬ್ ರಾಜ್ಯದ ಗುರುಗ್ರಾಮ್, ಚಂಡೀಗಢ, ಪಂಚಕುಲಾದಲ್ಲಿ ಅಪಾರ ಆಸ್ತಿ ಮಾಡಿಟ್ಟಿದ್ದ. ಫ್ಲಾಟ್, ರೆಸಾರ್ಟ್, ಹಲವಾರು ಕಮರ್ಶಿಯಲ್ ಕಟ್ಟಡಗಳನ್ನು ಹೊಂದಿದ್ದಾನೆ. ತನಿಖೆ ಮುಂದುವರಿಸಿದ್ದು, ರಾಜೀಂದರ್ ಕುಮಾರ್ ಮತ್ತು ಆತನ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
More than Rs 20 crore was seized by the Central Bureau of Investigation (CBI) when raids were conducted at premises of Rajinder Kumar Gupta, former Chairman and Managing Director (CMD) of public sector undertaking WAPCOS Limited on Tuesday. Gupta was booked recently for amassing assets disproportionate to his known sources of income.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm