ಬ್ರೇಕಿಂಗ್ ನ್ಯೂಸ್
18-03-23 11:17 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಮಾ.18 : ಮಧ್ಯಪ್ರದೇಶದ ಬಾಲಘಾಟ್ನಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಟ್ರೈನಿ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ. ಬಂಡೆಗಳ ನಡುವೆ ಒಬ್ಬರು ದೇಹ ಪತ್ತೆಯಾಗಿವೆ.
ಬಾಲಾಘಾಟ್ ಜಿಲ್ಲೆಯ ಲಾಂಜಿ ಮತ್ತು ಕಿರ್ನಾಪುರ ನಡುವಿನ ಭಕ್ಕುಟೋಲಾ-ಕೋಸ್ಮಾರಾ ಬೆಟ್ಟದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟ್ರೈನಿ ಪೈಲಟ್ ರುಕಾಶಂಕ ವರ್ಸುಕ ಮತ್ತು ಪೈಲಟ್ ಮೋಹಿತ್ ಸಾವನ್ನಪ್ಪಿದ್ದಾರೆ ಎಂದು ಎಟಿಸಿ ಗೊಂಡಿಯಾ ಎಜಿಎಂ ಕಮಲೇಶ್ ಮೆಶ್ರಮ್ ಹೇಳಿದ್ದಾರೆ.
ಈ ವಿಮಾನವು ತರಬೇತಿ ವಿಮಾನವಾಗಿದ್ದು, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ಏರ್ಸ್ಟ್ರಿಪ್ನಿಂದ ಹಾರಿದೆ. ಈ ಸ್ಥಳವು ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಟೆಕ್ ಆಫ್ ಆದ 15 ನಿಮಿಷಗಳ ಬಳಿಕ ಮಧ್ಯಾಹ್ನ 3.20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಾಲಾಘಾಟ್ ಜಿಲ್ಲೆಯಲ್ಲಿ ವಿಮಾನ ಬಿದ್ದ ಸ್ಥಳದಲ್ಲಿ ಎರಡು ಕಡೆ ಪರ್ವತಗಳಿವೆ. ಪರ್ವತಗಳ ಮಧ್ಯದಲ್ಲಿರುವ 100 ಅಡಿ ಆಳದ ಕಮರಿಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ್ದರಿಂದ ರಕ್ಷಣಾ ತಂಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತದ ಸ್ಥಳವನ್ನು ತಲುಪಲು ಸುಮಾರು 7 ಕಿ.ಮೀ ಅರಣ್ಯ ಮತ್ತು ಪರ್ವತ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ.
ಪೈಲಟ್ಗಳಿಗೆ ಮಹಾರಾಷ್ಟ್ರದ ಗೊಂಡಿಯಾದಲ್ಲಿರುವ ಬಿರ್ಸಿ ಏರ್ಸ್ಟ್ರಿಪ್ನಲ್ಲಿ ತರಬೇತಿ ನೀಡಲಾಗುತ್ತದೆ. ಅನೇಕ ಬಾರಿ ಇಲ್ಲಿಂದ ಮಧ್ಯಪ್ರದೇಶದ ಗಡಿಯತ್ತ ವಿಮಾನಗಳು ಹಾರುತ್ತವೆ. 2017ರ ಏಪ್ರಿಲ್ನಲ್ಲಿ ಬಾಲಘಾಟ್ ಜಿಲ್ಲೆಯ ಖೈರ್ಲಾಂಜಿ ತಹಸಿಲ್ನ ಲಾವಣಿ ಪುರ ಗ್ರಾಮದಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು. ಆಗ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಜೊತೆಗಿನ ವಿಮಾನದ ಸಂಪರ್ಕ ಕಳೆದುಕೊಂಡಿತ್ತು. ಇದರ ನಂತರ, ವಿಮಾನವು ರೋಪ್ವೇಯ ಮರ ಮತ್ತು ಟವರ್ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿತು.
The charter plane crashed on the Bhakkutola-Kosmara hill between Lanji and Kirnapur in Balaghat district. A charter plane crashed in Balaghat, Madhya Pradesh on Saturday afternoon. A pilot and a trainee pilot were on board the aircraft. Both died. One’s body was seen burning between two rocks. On information, the police has rushed to the spot.
20-04-24 03:37 pm
HK News Desk
Hubballi Neha Murder, Accused Mother: ನೇಹಾಳೇ...
20-04-24 02:30 pm
Bhatkal boat: ಭಟ್ಕಳ ; ಗಾಳಿ ಮಳೆಗೆ ಮೀನುಗಾರಿಕಾ ಬ...
20-04-24 12:54 pm
Neha murder hubballi, Father: ಬಿಜೆಪಿ ಬಿಟ್ಟು ಕ...
20-04-24 12:53 pm
Hubbali Murder, Pramod Muthalik; ಹುಬ್ಬಳ್ಳಿ ಕೊ...
19-04-24 11:17 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
20-04-24 04:45 pm
Mangalore Correspondent
Rain in Mangalore, Udupi: ದಕ್ಷಿಣ ಕನ್ನಡ ಜಿಲ್ಲೆ...
20-04-24 12:12 pm
Mangalore Yedapadavu accident: ಮಣ್ಣು ಸಾಗಾಟದ ಕ...
19-04-24 10:11 pm
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm