ಬ್ರೇಕಿಂಗ್ ನ್ಯೂಸ್
25-02-23 07:19 pm HK News Desk ದೇಶ - ವಿದೇಶ
ತಿರುವಂತಪುರ, ಫೆ.25: ಕೇರಳ ಮೂಲದ ಪ್ರಖ್ಯಾತ ಜುವೆಲ್ಲರಿ ಸಮೂಹ ಸಂಸ್ಥೆ ಜೋಯಲುಕ್ಕಾಸ್ ಕಚೇರಿ, ಮಳಿಗೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದೆರಡು ದಿನಗಳಲ್ಲಿ ಬರೋಬ್ಬರಿ 305 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
ಜೋಯ್ ಆಲುಕ್ಕಾಸ್ ಕಂಪನಿಯ ಪ್ರಧಾನ ಕಚೇರಿ ಇರುವ ತ್ರಿಶ್ಶೂರಿನಲ್ಲಿ ಜುವೆಲ್ಲರಿ ಮತ್ತು ಕಂಪನಿ ಮಾಲೀಕ ವರ್ಗೀಸ್ ಮನೆ ಮತ್ತು ಕಚೇರಿಯಲ್ಲಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ (ಫೆಮಾ) ಉಲ್ಲಂಘನೆ ಆಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮೇಲ್ನೋಟಕ್ಕೆ ಆಲುಕ್ಕಾಸ್ ಜುವೆಲ್ಲರಿ ಸಮೂಹದಿಂದ ಅನಧಿಕೃತ ಹಣದ ವಹಿವಾಟು ನಡೆದಿರುವ ಶಂಕೆಯಿದೆ. ಕೇರಳ, ಕರ್ನಾಟಕ, ತಮಿಳುನಾಡು ಸೇರಿ ದೇಶದ ಹಲವೆಡೆ 100ಕ್ಕೂ ಹೆಚ್ಚು ಜುವೆಲ್ಲರಿ ಮಳಿಗೆಗಳನ್ನು ಹೊಂದಿರುವ ಜೋಯ್ ಆಲುಕ್ಸಾಸ್ ಸಮೂಹವು ದುಬೈನಲ್ಲಿಯೂ ಮಳಿಗೆಗಳನ್ನು ಸ್ಥಾಪಿಸುತ್ತಿದೆ.

ಎರಡು ದಿನಗಳಲ್ಲಿ ತ್ರಿಶ್ಶೂರ್ ನಗರದ ಶೋಭಾ ಸಿಟಿಯಲ್ಲಿರುವ ಭೂಮಿ ಮತ್ತು ರೆಸಿಡೆನ್ಸಿ ಬಿಲ್ಡಿಂಗ್ ಸೇರಿ 33 ಕಡೆಯ ಸ್ಥಿರಾಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. 91.22 ಲಕ್ಷ ರೂಪಾಯಿ ಇದ್ದ ಮೂರು ಬ್ಯಾಂಕ್ ಖಾತೆಗಳು, 5.58 ಕೋಟಿಯಿದ್ದ ಮೂರು ಫಿಕ್ಸೆಡ್ ಡಿಪಾಸಿಟ್, ಜೋಯಲುಕ್ಕಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿರುವ 217.81 ಕೋಟಿ ಮೌಲ್ಯದ ಶೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈನಲ್ಲಿ ಜುವೆಲ್ಲರಿ ಮಳಿಗೆ ಸ್ಥಾಪಿಸಲು ಜೋಯಲುಕ್ಕಾಸ್ ಗ್ರೂಪ್ ನಿಂದ ಹವಾಲಾ ಮೂಲಕ ವಿದೇಶಕ್ಕೆ ಹಣದ ರವಾನೆ ಆಗಿದೆ ಎನ್ನುವ ಮಾಹಿತಿಯಡಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜೋಯಲುಕ್ಕಾಸ್ ಷೇರು ಮಾರುಕಟ್ಟೆಯಿಂದ ದಿಢೀರ್ ಆಗಿ 2300 ಕೋಟಿ ಮೊತ್ತವನ್ನು ಐಪಿಓ ಮೂಲಕ ಹಿಂಪಡೆದಿದ್ದು, ಅಚ್ಚರಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇಡಿಯಿಂದ ತನಿಖೆ ಶುರುವಾಗಿತ್ತು. ಭಾರತದಲ್ಲಿ 68 ನಗರಗಳಲ್ಲಿ ಜೋಯಲುಕ್ಕಾಸ್ ಚಿನ್ನಾಭರಣ ಮಳಿಗೆಯಿದ್ದು, ದೇಶದ ಅತಿ ದೊಡ್ಡ ಜುವೆಲ್ಲರಿ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ.
The Enforcement Directorate on Friday said it has attached assets worth more than ₹305 crore of Joy Alukkas Verghese, the owner of prominent Kerala-based jewellery group Joyalukkas, in a FEMA case linked to alleged transfer of "huge cash" to Dubai by the company through hawala channels.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm