ಬ್ರೇಕಿಂಗ್ ನ್ಯೂಸ್
04-12-22 09:43 pm HK News Desk ದೇಶ - ವಿದೇಶ
ಅಹ್ಮದಾಬಾದ್, ಡಿ.4: ಮುಸ್ಲಿಂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ ನಡೆ ಎಂದು ಅಹ್ಮದಾಬಾದಿನ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಶಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿ ಆಡಳಿತ ಕೇಂದ್ರಕ್ಕೆ ಬಂದರೆ, ಇಸ್ಲಾಮ್ ಧರ್ಮ ದುರ್ಬಲವಾಗುತ್ತದೆ. ಅದರಿಂದ ಇಸ್ಲಾಮಿನ ಕಟ್ಟುಪಾಡುಗಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಹಿಜಾಬ್ ಕುರಿತ ಪ್ರಶ್ನೆಗೆ, ಮುಸ್ಲಿಮ್ ಮಹಿಳೆಯರು ಶಾಸಕರು, ಸಚಿವ ಸ್ಥಾನಕ್ಕೆ ಬಂದರೆ ಏನಾಗುತ್ತದೆ ಅಂದರೆ, ಹಿಜಾಬ್ ಕುರಿತು ಪ್ರಶ್ನೆಯನ್ನು ಎತ್ತುವುದು ಸಾಧ್ಯವಾಗುವುದಿಲ್ಲ. ಅಂಥ ಪ್ರಶ್ನೆ ನಾವು ಮುಂದಿಟ್ಟಾಗ ನಿಮ್ಮ ಮಹಿಳೆಯರೇ ಇಲ್ಲಿ ಶಾಸಕರಾಗಿದ್ದಾರಲ್ಲಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಮುಸ್ಲಿಂ ಮಹಿಳೆ ಆಡಳಿತ ಕೇಂದ್ರಕ್ಕೆ ಬರಬಾರದು ಅನ್ನುವುದು. ಯಾಕೆ, ನಮ್ಮಲ್ಲಿ ಪುರುಷರು ಇಲ್ಲವೇ ಎಂದವರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ಕೊಡುವುದನ್ನು ವಿರೋಧಿಸಿ ಮನೆ- ಮನೆ ಅಭಿಯಾನ ನಡೆಸುತ್ತೇವೆ. ನಾವು ಎಲ್ಲರಲ್ಲಿಯೂ ನಮ್ಮ ಧರ್ಮದ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಶಬೀರ್ ಅಹ್ಮದ್ ಹೇಳಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಮಹಿಳೆಯರು ಕಾರ್ಪೊರೇಟರ್ ಆಗಿದ್ದಾರಲ್ಲವೇ ಎಂಬ ಪ್ರಶ್ನೆಗೆ, ಇದರಿಂದ ನನಗೆ ಅರ್ಥ ಆಗೋದು ಏನಂದ್ರೆ, ಈಗ ಮಹಿಳೆಯರ ನಿಯಂತ್ರಣ ಬಂದಿದೆಯೆಂದು ರಾಜಕೀಯ ಪಕ್ಷಗಳವರು ಅನ್ಕೊಂಡಿದ್ದಾರೆ. ಹಾಗಾಗಿ ಮಹಿಳೆಯರನ್ನು ಟ್ರಾಪ್ ಮಾಡಿದರೆ, ಇಡೀ ಕುಟುಂಬವನ್ನು ಟ್ರಾಪ್ ಮಾಡಬಹುದೆಂಬ ಹುನ್ನಾರ ಇರಬಹುದು. ಇದರ ಹಿಂದೆ ಬೇರೆ ಯಾವುದೇ ಅಜೆಂಡಾ ಇದ್ದಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.
ಗುಜರಾತಿನಲ್ಲಿ ಡಿ.5ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಶಾಹಿ ಇಮಾಮ್ ಹೇಳಿಕೆ ಅಲ್ಲಿನ ಮುಸ್ಲಿಮ್ ಮಹಿಳೆಯರ ಮೇಲೆ ಪ್ರಭಾವ ಬೀರುತ್ತಾ ಅನ್ನುವ ಕುತೂಹಲ ಇದೆ.
#WATCH | Those who give election tickets to Muslim women are against Islam, weakening the religion. Are there no men left?: Shabbir Ahmed Siddiqui, Shahi Imam of Jama Masjid in Ahmedabad#Gujarat pic.twitter.com/5RpYLG7gqW
— ANI (@ANI) December 4, 2022
Shabbir Ahmed Siddiqui, the Shahi Imam of the Jama Masjid in Gujarat's Ahmedabad said those who give election tickets to Muslim women are against Islam and are weakening the religion. Talking to news agency ANI, he further asked, "Are there no men that you're bringing women?" Speaking on the idea of weakening Islam, he mentioned the hijab protests in Karnataka and said, "If you make women MLAs, ministers and councillors, then what will happen? We can no longer safeguard hijabs, and we won't be able to raise this issue."
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm