ಬ್ರೇಕಿಂಗ್ ನ್ಯೂಸ್
03-10-22 03:42 pm HK News Desk ದೇಶ - ವಿದೇಶ
ಕೊಲ್ಕತ್ತಾ, ಅ.3: ದುರ್ಗಾ ಮೂರ್ತಿಯ ಕಾಲ ಕೆಳಗೆ ಮಹಿಷಾಸುರನ ಬದಲು ಮಹಾತ್ಮ ಗಾಂಧೀಜಿ ಇರುವಂತೆ ಬಿಂಬಿಸಿ ಪ್ರತಿಮೆ ರಚಿಸಿದ್ದು ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೊಲ್ಕತ್ತಾದಲ್ಲಿ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮೂರ್ತಿಯ ಪೆಂಡಾಲ್ ನಲ್ಲಿ ಈ ರೀತಿ ಚಿತ್ರಿಸಲಾಗಿದ್ದು, ಗೃಹ ಸಚಿವಾಲಯದ ಸೂಚನೆಯಂತೆ ಬಳಿಕ ಗಾಂಧೀಜಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅಖಿಲ ಭಾರತೀಯ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯಲ್ಲಿ ಅಸುರ ಗಾಂಧಿಯನ್ನು ದುರ್ಗಾಮಾತೆ ಕೊಲ್ಲುವ ರೀತಿ ಚಿತ್ರಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದು ಮಹಾಸಭಾ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಾಚುರ್ ಗೋಸ್ವಾಮಿ, ನಾವು ಗಾಂಧಿಯನ್ನು ನೈಜ ಅಸುರನಾಗಿಯೇ ನೋಡುತ್ತೇವೆ. ಗಾಂಧಿ ಒಬ್ಬ ರಾಕ್ಷಸನಾಗಿದ್ದ. ಅದಕ್ಕಾಗಿಯೇ ಆ ರೀತಿ ಮೂರ್ತಿಯನ್ನು ಚಿತ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಗಾಂಧೀಜಿಯನ್ನು ಪ್ರಮೋಟ್ ಮಾಡುತ್ತಿದೆ. ಆದರೆ ನಾವು ಗಾಂಧಿಯನ್ನು ಒಪ್ಪುವುದಿಲ್ಲ. ನಾವು ಅಸುರನಂತೆ ಚಿತ್ರಿಸಿ ಹಾಕಿದ್ದ ಮೂರ್ತಿಯನ್ನು ಬಲವಂತದಿಂದ ಬದಲಿಸಿದ್ದಾರೆ. ನಾವು ಎಲ್ಲ ಕಡೆ ಹಾಕಿರುವ ಗಾಂಧಿ ಚಿತ್ರಣವನ್ನು ತೆಗೆದು ಸುಭಾಸ್ ಚಂದ್ರ ಬೋಸ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಮುನ್ನೆಲೆಯಲ್ಲಿ ಹಾಕಲಿದ್ದೇವೆ ಎಂದು ಗೋಸ್ವಾಮಿ ಹೇಳಿದ್ದಾರೆ. ದಸರಾ ಎಂದರೆ, ಮಹಿಷಾಸುರನನ್ನು ದೇವಿ ಕೊಂದಿರುವ ದಿನವೆಂದು ಪುರಾಣ ನಂಬಿಕೆ. ಅದೇ ರೀತಿ ಅಸುರನನ್ನು ಕೊಂದ ದೇವಿಯ ಪ್ರತೀಕವಾಗಿ ದೇಶದೆಲ್ಲೆಡೆ ದೇವಿಯ ಆರಾಧನೆ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಗಾಂಧೀಜಿ ಜನ್ಮದಿನದ ಸಂದರ್ಭದಲ್ಲಿ ದಸರಾ ಬಂದಿದ್ದರಿಂದ ಗಾಂಧೀಜಿಯನ್ನೇ ದುರ್ಗೆ ಕೊಲ್ಲುವ ರೀತಿ ಚಿತ್ರಿಸಿ ವಿವಾದ ಎಬ್ಬಿಸಲಾಗಿದೆ. ಘಟನೆ ಬಗ್ಗೆ ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
A controversy erupted after a durga puja in Kolkata organised by the All India Hindu Mahasabha depicted the ‘Mahisasura’ as Mahatma Gandhi, sparking a controversy. However, after pressure from the Ministry of Home Affairs , the organisers of the puja changed and removed the face, they alleged.
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
29-06-26 03:35 pm
HK News Staffer
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
ಜಾತಿ ಹುಟ್ಟಿನಿಂದಲೇ ಬರಬೇಕು, ಇಸ್ಲಾಂಗೆ ಮತಾಂತರಗೊಂಡ...
28-06-26 04:03 pm
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
29-06-26 07:25 pm
HK News Staffer
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm
ತಾಯಿಯ ಹೆಸರಿನಲ್ಲಿದ್ದ ಆಸ್ತಿ ಕಿತ್ತುಕೊಂಡ ಮಗ, ತಂದೆ...
29-06-26 04:45 pm
ವಿಟ್ಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್...
29-06-26 02:00 pm
Panambur Robbery, Mangalore: ಮುಂಬೈನಿಂದ ಬರುತ್ತ...
29-06-26 09:32 am