ಬ್ರೇಕಿಂಗ್ ನ್ಯೂಸ್
02-10-22 05:42 pm HK News Desk ದೇಶ - ವಿದೇಶ
ಕಾಸರಗೋಡು, ಅ.2: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾಸರಗೋಡು ಜಿಲ್ಲಾ ಘಟಕದ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ನಾಯಮ್ಮಾರಮೂಲೆಯಲ್ಲಿದ್ದ ಕಚೇರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬೀಗ ಜಡಿದು ಮೊಹರು ಹಾಕಿದ್ದಾರೆ. ಅಲ್ಲದೆ, ಪಿಎಫ್ಐ ನಾಯಕರು ಸಹಿತ ಜಿಲ್ಲೆಯ ಹಲವಾರು ಮಂದಿ ಸದಸ್ಯರಾಗಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೆ ಸೇರಿದ ಕಚೇರಿಗೂ ಬೀಗ ಹಾಕಲಾಗಿದೆ.
ಕಾಸರಗೋಡು ನಗರ ಹೊರವಲಯದ ಚೆಂಗಳ ಪಂಚಾಯತ್ ಏರಿಯಾದ ಪೆರುಂಬಳ ಕಡವು ಸುತುವೆ ಬಳಿಯಿದ್ದ ಚಂದ್ರಗಿರಿ ಚಾರಿಟೇಬಲ್ ಟ್ರಸ್ಟ್ ಹೆಸರಿನ ಪಿಎಫ್ಐ ಕಚೇರಿಗೂ ಬೀಗ ಹಾಕಿ ಮೊಹರು ಹಾಕಲಾಗಿದೆ. ಇದಲ್ಲದೆ, ಕೇಂದ್ರ ಸರಕಾರ ಇತ್ತೀಚೆಗೆ ನಿಷೇಧಿಸಿರುವ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳ ಬಗ್ಗೆ ಮಾಹಿತಿಗಳಿದ್ದ ನೋಟೀಸನ್ನು ಕಚೇರಿಯ ಬಾಗಿಲಿಗೆ ಅಂಟಿಸಲಾಗಿದೆ.

ಎನ್ಐಎ ಕೊಚ್ಚಿ ಘಟಕದ ಎಸ್ಪಿ ಉಮೇಶ್ ರಾಯ್ ನೇತೃತ್ವದ ತಂಡ ಇಲ್ಲಿಗೆ ಆಗಮಿಸಿದ್ದು, ನೋಟೀಸ್ ಅಂಟಿಸಿ ಕಚೇರಿಗೆ ಬೀಗ ಹಾಕಿದೆ. ಈ ವೇಳೆ, ಇಬ್ಬರು ತಹಸೀಲ್ದಾರರು, ಡಿವೈಎಸ್ಪಿ ವಿವಿ ಮನೋಜ್, ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ಉಪಸ್ಥಿತರಿದ್ದರು. ಎನ್ಐಎ ಸೂಚನೆಯಂತೆ ಹೊಸದುರ್ಗ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಚಂದೇರ ಪೊಲೀಸ್ ಇನ್ ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ಪೊಲೀಸರು ಪಡನ್ನ ಎಂಬಲ್ಲಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೂ ಬೀಗ ಹಾಕಿದ್ದಾರೆ. ಪಡನ್ನ ಹೈಸ್ಕೂಲ್ ಸಮೀಪದ ಕಟ್ಟಡದಲ್ಲಿ ನಾಮಫಲಕ ಇಲ್ಲದೆ ನೀರ ಚಾರಿಟೇಬಲ್ ಟ್ರಸ್ಟ್ ಕಚೇರಿ ಕಾರ್ಯಾಚರಿಸುತ್ತಿತ್ತು. ಎನ್ಐಎ ಬಂಧಿಸಿರುವ ಪಿಎಫ್ಐ ಜಿಲ್ಲಾಧ್ಯಕ್ಷ ತೃಕ್ಕರಿಪುರ ಮೂಲದ ಸಿಟಿ ಸುಲೇಮಾನ್ ಸೇರಿ ಕಾಸರಗೋಡಿನ ಹಲವು ಪ್ರಮುಖರು ಟ್ರಸ್ಟಿನಲ್ಲಿ ಸದಸ್ಯರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Following the Central government order to ban Popular Front of India, offices were closed and sealed in Kannur and Kasaragod district.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm