ಬ್ರೇಕಿಂಗ್ ನ್ಯೂಸ್
19-09-22 12:35 pm HK News Desk ದೇಶ - ವಿದೇಶ
ತಿರುವನಂತಪುರಂ, ಸೆ.19: ಭಾಗ್ಯಲಕ್ಷ್ಮಿ ಕೆಲವೊಮ್ಮೆ ಯಾವ ಮೂಲೆಯಿಂದ ಮನೆ ಒಳಕ್ಕೆ ಕಾಲಿಡುತ್ತಾಳೆಂದು ಹೇಳೋದಿಕ್ಕೆ ಬರಲ್ಲ. ಕೇರಳದಲ್ಲಿ ಬಡ ಆಟೋ ಚಾಲಕನ ಪಾಲಿಗೆ ಅದೃಷ್ಟ ಲಕ್ಷ್ಮಿಯೇ ಒಲಿದು ಬಂದಿದ್ದಾಳೆ. ಹಣ ಇಲ್ಲದೆ, ಮಗಳ ದುಡ್ಡಿನಲ್ಲಿ 500 ರೂ. ಮೊತ್ತದ ಲಾಟರಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ತನ್ನನ್ನು ತಾನೇ ನಂಬದಾಗಿದ್ದಾನೆ.
ತಿರುವನಂತಪುರದ ಶ್ರೀ ವರಹಂ ಎಂಬಲ್ಲಿನ ನಿವಾಸಿ ಅನೂಪ್ ಎಂಬ ಆಟೋ ಚಾಲಕ ಲಾಟರಿ ಗೆದ್ದ ಅದೃಷ್ಟವಂತ. ಲಾಟರಿ ಡ್ರಾಗೊಳ್ಳುವ ದಿನಾಂಕದ ಒಂದು ದಿನದ ಹಿಂದೆ ಮನೆಗೆ ಮರಳುತ್ತಿದ್ದಾಗ ತಿರುವನಂತಪುರದ ಪಜವಂಗಡಿಯ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದರು. ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಮೂಲಕ ಇವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಲಾಟರಿ ಏಜೆಂಟ್ ತಂಗರಾಜ್ ಎಂಬವರಿಂದ ಖರೀದಿಸಿದ ಈ ಲಾಟರಿಯಿಂದ ಅನೂಪ್ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದು, ದೇಶದ ಗಮನಸೆಳೆದಿದ್ದಾರೆ.
ಆಟೋ ಚಾಲಕ ಅನೂಪ್ ಬಡ ಕುಟುಂಬದ ವ್ಯಕ್ತಿಯಾಗಿದ್ದು ಆಟೋ ಚಾಲನೆಯಿಂದಲೇ ಜೀವನ ದೂಡುತ್ತಿದ್ದ. ಲಾಟರಿ ಟಿಕೆಟ್ ದರ 500 ರೂಪಾಯಿ ಇದ್ದುದರಿಂದ ಅದನ್ನು ಕೊಳ್ಳುವುದಕ್ಕೂ ಹಣ ಇರಲಿಲ್ಲ. ತನ್ನ ಮಗಳ ಪಿಗ್ಗಿ ಡಬ್ಬಿಯಲ್ಲಿದ್ದ ಐನೂರು ರೂ. ತೆಗೆದುಕೊಂಡು ಹೋಗಿ ಲಾಟರಿ ಖರೀದಿಸಿದ್ದರು. ಮಗಳ ಅದೃಷ್ಟದ ಫಲವೋ ಎಂಬಂತೆ ಅದೇ ಲಾಟರಿ ಟಿಕೇಟಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಲಾಟರಿ ಬಹುಮಾನದ ಫಲಿತಾಂಶ ಪ್ರಕಟಿಸಿದ್ದರು.
Ticket number TJ-750605 has emerged as the winner at the much-awaited Onam bumper lucky draw, which carries a jackpot of Rs 25 crore. Anoop, a native of Sreevaraham in Thiruvananthapuram, has won the mega prize.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
11-03-26 10:58 am
HK News Staffer
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am