ಬ್ರೇಕಿಂಗ್ ನ್ಯೂಸ್
27-08-22 12:28 pm HK News Desk ದೇಶ - ವಿದೇಶ
ತಿರುವನಂತಪುರ, ಆಗಸ್ಟ್ 27 : ರಾಜ್ಯದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಕೇಂದ್ರಗಳಿದ್ದು ಇಲ್ಲಿನ ಜನಸಂಖ್ಯೆಗೂ ಧಾರ್ಮಿಕ ರಚನೆಗಳಿಗೂ ಅನುಪಾತದಲ್ಲಿ ತುಂಬ ವ್ಯತ್ಯಾಸ ಇದೆ. ಜನರು ಮನೆ ಹತ್ತಿರವೇ ಮಸೀದಿ ಇರಬೇಕೆಂದು ಬಯಸಿದರೆ ಅದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಕೇರಳವು ಧಾರ್ಮಿಕ ರಚನೆಗಳು, ಪ್ರಾರ್ಥನಾ ಕೇಂದ್ರಗಳಿಂದಲೇ ತುಂಬಿ ತುಳುಕುತ್ತಿದೆ ಎಂದು ಈ ಕುರಿತ ಪ್ರಕರಣ ಒಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. ಕೇರಳವನ್ನು ವಿಶಿಷ್ಟ ಭೌಗೋಳಿಕ ಪರಿಸರದ ಕಾರಣಕ್ಕೆ 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಆದರೆ ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ತುಂಬಿ ಹೋಗಿದ್ದೇವೆ. ತೀರಾ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಮುಸ್ಲಿಂ ಸಮುದಾಯಕ್ಕೆ ಮಸೀದಿಗಳು ಬಹಳ ಮುಖ್ಯ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ಕುರಾನ್ನಲ್ಲಿ ಪ್ರತಿ ರಸ್ತೆ, ಪ್ರತಿ ಗಲ್ಲಿಯಲ್ಲೂ ಮಸೀದಿ ಇರಬೇಕು ಎಂದು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
"ಹದೀಸ್" ಅಥವಾ ಪವಿತ್ರ ಕುರಾನ್ನಲ್ಲಿ ಮಸೀದಿ ಪ್ರತಿ ಮುಸ್ಲಿಂ ಸಮುದಾಯದ ಸದಸ್ಯರ ಮನೆಯ ಪಕ್ಕದಲ್ಲಿರಬೇಕು ಎಂದು ಹೇಳಲಾಗಿಲ್ಲ. ಇರುವ ದೂರವು ಮಾನದಂಡವಲ್ಲ. ಆದರೆ ಮಸೀದಿಯನ್ನು ತಲುಪಬೇಕು ಎನ್ನುವುದಷ್ಟೆ ಮುಖ್ಯ. ಅದನ್ನು ನ್ಯಾಯಾಲಯ ಗಮನಿಸಿದೆ. 2011ರ ಜನಗಣತಿ ಆಧಾರದಲ್ಲಿ ಧಾರ್ಮಿಕ ರಚನೆಗಳ ಮೇಲಿನ ಅಧ್ಯಯನವನ್ನು ಉಲ್ಲೇಖಿಸಿದ ನ್ಯಾಯಾಲಯವು 'ಆತಂಕಕಾರಿ ಬೆಳವಣಿಗೆ' ಎಂದು ಕರೆದಿದೆ. ಕೇರಳದ ಗ್ರಾಮಗಳಲ್ಲಿ ಅಂದಾಜು 10ರಷ್ಟು ಧಾರ್ಮಿಕ ರಚನೆಗಳಿವೆ. ಇದು ಆಸ್ಪತ್ರೆಗಳ ಸಂಖ್ಯೆಗಿಂತ 3.5 ಪಟ್ಟು ಹೆಚ್ಚು ಎಂದು ಕೋರ್ಟ್ ಹೇಳಿದೆ.
ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿಗಳು, ಪಾರ್ಸಿಗಳು ಇತ್ಯಾದಿ ಪ್ರತಿಯೊಬ್ಬ ಧರ್ಮದವರು ತಮ್ಮ ಮನೆಯ ಬಳಿಯೇ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ಕೋಮು ಸಾಮರಸ್ಯ ಕಾಪಾಡುವಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸದ್ರಿ ಪ್ರಕರಣದಲ್ಲಿ ಗುಪ್ತಚರ ವರದಿ ಮತ್ತು ಪೊಲೀಸ್ ವರದಿಯ ಪ್ರಕಾರ, ಪ್ರಸ್ತುತ ವಾಣಿಜ್ಯ ಕಟ್ಟಡವನ್ನು ಧಾರ್ಮಿಕ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಅವಕಾಶವಿದೆ ಎಂದು ಹೇಳುತ್ತದೆ. ಇದು ಸೂಕ್ಷ್ಮ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
The Kerala High Court recently, while disallowing a petition to convert a commercial building to a Muslim place of worship, issued a direction to the State Government to close down religious places and prayer halls that were functioning illegally and without permission.
21-08-25 06:02 pm
Bangalore Correspondent
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm