ಬ್ರೇಕಿಂಗ್ ನ್ಯೂಸ್
20-06-22 08:45 pm HK News Desk ದೇಶ - ವಿದೇಶ
ಮುಂಬೈ, ಜೂನ್ 20: ಇಬ್ಬರು ಸೋದರರಿಗೆ ಸೇರಿದ ಎರಡು ಕುಟುಂಬಗಳ ಒಂಬತ್ತು ಮಂದಿ ವಿಷ ಸೇವಿಸಿ ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದ್ದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಗಡಿ ಜಿಲ್ಲೆ ಸಾಂಗ್ಲಿಯ ಮೀರಜ್ ತಾಲೂಕಿನ ಮೈಸಾಲ್ ಎನ್ನುವ ಗ್ರಾಮದಲ್ಲಿ ಇಬ್ಬರು ಸೋದರರ ಎರಡು ಮನೆಗಳಲ್ಲಿ ಘಟನೆ ನಡೆದಿದೆ. ವೃತ್ತಿಯಲ್ಲಿ ಪಶು ವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವಾನ್ಮೋರ್(52) ಅವರ ಅಂಬಿಕಾನಗರದ ಮನೆಯಲ್ಲಿ ಆರು ಮಂದಿಯ ಶವ ಕಂಡುಬಂದಿದ್ದರೆ, ಇನ್ನೊಂದು ಸೋದರನ ಮನೆಯಲ್ಲಿ ಮತ್ತೆ ಮೂವರ ಶವ ಪತ್ತೆಯಾಗಿದೆ. ಸಂಗೀತಾ ಪೋಪಟ್ ವಾನ್ಮೋರ್ (48), ಅರ್ಚನಾ ಪೋಪಟ್ ವಾನ್ಮೋರ್(30), ಶುಭಮ್ ಪೋಪಟ್ ವಾನ್ಮೋರ್ (28), ಮಾನಿಕ್ ಯಲ್ಲಪ್ಪ ವಾನ್ಮೋರ್ (49), ರೇಖಾ ಮಾನಿಕ್ ವಾನ್ಮೋರ್(45), ಆದಿತ್ಯ ಮಾನಿಕ್ ವಾನ್ಮೋರ್ (15), ಅನಿತಾ ಮಾಣಿಕ್ ವಾನ್ಮೋರ್(28), ಅಕ್ಕತಾಯಿ ವಾನ್ಮೋರ್(72) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಬ್ಯಾಂಕ್ ಸಾಲ ಹೊಂದಿದ್ದರಿಂದ ಎರಡು ಕುಟುಂಬಗಳು ಧೃತಿಗೆಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅಂಬಿಕಾ ನಗರದ ಮನೆಯಲ್ಲಿ ಬೆಳಗ್ಗಿನಿಂದಲೂ ಓಪನ್ ಆಗಿರಲಿಲ್ಲ. ಸ್ಥಳೀಯರು ಸಂಶಯದಿಂದ ಬಾಗಿಲು ಬಡಿದು ನೋಡಿದ್ದಾರೆ. ಯಾರೂ ಸ್ಪಂದಿಸದೇ ಇದ್ದಾಗ, ಬಾಗಿಲು ಮುರಿದು ನೋಡಿದ್ದು ಮನೆಮಂದಿ ಸಾವು ಕಂಡಿದ್ದರು. ಆನಂತರ ಇನ್ನೊಬ್ಬ ಸೋದರನ ರಾಜಧಾನಿ ಕಾರ್ನರ್ ಎನ್ನುವ ಜಾಗದ ಮನೆಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಎರಡೂ ಕಡೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶವಗಳನ್ನು ಪೋಸ್ಟ್ ಮಾರ್ಟಂ ಕಳಿಸಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕವೇ ಸಾವಿನ ಕಾರಣ ತಿಳಿಯಬೇಕಷ್ಟೆ ಎಂದಿದ್ದಾರೆ.
In a tragic incident reported from Mhaisal under Miraj taluka in the Sangli district of Maharashtra, nine members of two brothers' families died after allegedly consuming poison at their houses in separate places on Monday.While six of the family members were found dead in their house at Ambikanagar, the bodies of the other three were recovered from another house in Rajdhani Corner.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm