ಬ್ರೇಕಿಂಗ್ ನ್ಯೂಸ್
11-06-22 09:47 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 11: ಬಿಜೆಪಿ ನಾಯಕಿ ನೂಪುರ್ ಶರ್ಮಾ ಶಿರಚ್ಚೇದನ ಮಾಡಿರುವ ರೀತಿ ಚಿತ್ರಿಸಿ ಯೂಟ್ಯೂಬ್ ನಲ್ಲಿ ಎಡಿಟೆಡ್ ವಿಡಿಯೋ ಪ್ರಕಟಿಸಿದ ಕಾಶ್ಮೀರಿ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೈಗಂಬರ್ ಅವಹೇಳನದ ಹೇಳಿಕೆಯ ಕಾರಣಕ್ಕೆ ದೇಶದ ಹಲವೆಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಮಧ್ಯೆಯೇ ಕಾಶ್ಮೀರದಲ್ಲಿ ಯೂಟ್ಯೂಬರ್ ಆಗಿ ಫೇಮಸ್ ಆಗಿರುವ ಫೈಸಲ್ ವಾನಿ ತನ್ನ ಚಾನೆಲ್ ನಲ್ಲಿ ನೂಪುರ್ ಶರ್ಮಾ ದೇಹವನ್ನು ತಲೆಯನ್ನು ಕಡಿದ ರೀತಿ ಚಿತ್ರಿಸಿದ್ದಲ್ಲದೆ, ಬರೀಯ ರುಂಡ ರಹಿತ ದೇಹವನ್ನು ತೋರಿಸಿ ಅವಹೇಳನ ಮಾಡಿದ್ದ. ಪೈಗಂಬರ್ ಅವಹೇಳನಕ್ಕೆ ಇದೇ ಶಿಕ್ಷೆ ಎನ್ನುವ ರೀತಿ ತೋರಿಸಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಶ್ಮೀರದ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಜಾಲತಾಣದಲ್ಲಿ ಪ್ರತಿಯಾಗಿ ಆಕ್ರೋಶ ಕೇಳಿಬರುತ್ತಿದ್ದಂತೆ ಫೈಸಲ್, ತನ್ನ ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ ತಾನೇನು ಉದ್ದೇಶಪೂರ್ವಕವಾಗಿ ಈ ರೀತಿ ಚಿತ್ರಿಸಿಲ್ಲ ಎಂದು ಕ್ಷಮೆ ಕೋರಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದ. ಯಾವುದೇ ಧರ್ಮದ ಜನರ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದ. ಪೊಲೀಸರು ಧರ್ಮಗಳ ಮಧ್ಯೆ ದ್ವೇಷ ಹಚ್ಚುವ ರೀತಿ ವರ್ತಿಸಿದ್ದಾನೆ ಎಂದು ಐಪಿಸಿ 505 ಮತ್ತು 506 ಅಡಿ ಕೇಸು ದಾಖಲಿಸಿದ್ದಲ್ಲದೆ, ಶನಿವಾರ ಫೈಸಲ್ ನನ್ನು ಬಂಧಿಸಿದ್ದಾರೆ.
ಫೈಸಲ್ ಎರಡು ದಿನಗಳ ಹಿಂದೆ ಡೀಪ್ ಪೈನ್ ಫಿಟ್ನೆಸ್ ಹೆಸರಲ್ಲಿ ವಿಡಿಯೋ ಪ್ರಕಟಿಸಿದ್ದು, ಅದರಲ್ಲಿ ನೂಪುರ್ ಶರ್ಮಾ ತಲೆ ಕಡಿಯುವ ರೀತಿ ಪ್ರಚೋದನಕಾರಿ ವಿಡಿಯೋ ಅಪ್ಲೋಡ್ ಮಾಡಿದ್ದ. ಅಲ್ಲದೆ, ತಲೆಯನ್ನು ಕಡಿದ ರಕ್ತಸಿಕ್ತ ಕತ್ತಿಯನ್ನೂ ತೋರಿಸಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
A Kashmiri YouTuber, whose video depicting the beheading of suspended BJP spokesperson Nupur Sharma had gone viral on social media platforms, was arrested on Saturday for breaching public tranquillity and causing fear in the public, police said. Wani has deleted the video and apologised for it as well.Before his arrest, Wani posted another video in which he said he did not have any intention of hurting the sentiments of people or any religion.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm