ಬ್ರೇಕಿಂಗ್ ನ್ಯೂಸ್
03-06-22 07:36 pm HK News Desk ದೇಶ - ವಿದೇಶ
ಕಾರವಾರ, ಜೂನ್ 3 : ಹಿಜಾಬ್ ವಿಚಾರ ನಮ್ಮ ಸರ್ಕಾರದ ಮಟ್ಟಿಗೆ ಮುಗಿದುಹೋಗಿರುವ ಅಧ್ಯಾಯ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವರು ಹಿಜಾಬ್ ಹಾಕಿಕೊಂಡು ಬಂದು ಅಶಾಂತಿಯನ್ನ ಸೃಷ್ಟಿಸುತ್ತಿದ್ದಾರೆ. ಸಂವಿಧಾನವನ್ನ ಸ್ವೀಕರಿಸುವವರು ಕೋರ್ಟಿನ ಆದೇಶವನ್ನ ವಿರೋಧ ಮಾಡತಕ್ಕದ್ದಲ್ಲ. ಹಿಜಾಬ್ ಹಾಕಿ ಬಂದು ವಿವಾದ ಸೃಷ್ಟಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಲೌಡ್ ಸ್ಪೀಕರ್ ತೆರವು ಮಾಡದಿದ್ದರೆ ಗುಂಡಿಕ್ಕಿ ಸಾಯಿಸೋದಾಗಿ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ಮುತಾಲಿಕ್ ಅವರು ಯಾವುದೇ ಸರ್ಕಾರ ಇದ್ದರೂ ಜಾಗೃತಿ ಮಾಡುವಂತ ಕೆಲಸ ಮಾಡುತ್ತಾರೆ. ಲೌಡ್ಸ್ಪೀಕರ್ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಜಾರಿಮಾಡಲು ನಿರ್ದೇಶಿಸಿದೆ. ಕೆಲವೆಡೆ ಲೌಡ್ಸ್ಪೀಕರ್ ತೆಗೆಸಲಾಗಿದೆ, ಕೆಲವು ಕಡೆ ತೆಗೆಸುತ್ತಿದ್ದಾರೆ. ಇದು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಎಲ್ಲವೂ ಕೂಡ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರುತ್ತವೆ ಎಂದರು.

ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ. ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಅಂದ್ರೆ ಏನು ಅಂತ ಹೇಳಬೇಕಾದ ಅಗತ್ಯ ಇದೆ. ಅದಕ್ಕೆ ಅವಶ್ಯಕವಾದ ಪಠ್ಯಗಳ ಅಳವಡಿಕೆಗೆ ತಜ್ಞರ ಸಮಿತಿ ಪರಿಷ್ಕರಣೆ ಮಾಡಿದೆ. ವಿನಾಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಹಿಂದೆ ಅಸಹಿಷ್ಣುತೆ ಕಾರಣ ನೀಡಿ ಕೆಲವರು ತಮ್ಮ ಪ್ರಶಸ್ತಿ ವಾಪಸ್ ನೀಡೋದಾಗಿ ಹೇಳಿದ್ದರು. ಆದ್ರೆ ಇಲಾಖೆಯವರ ಬಳಿ ಕೇಳಿದಾಗ ಯಾರೂ ಸಹ ಪ್ರಶಸ್ತಿಯನ್ನಾಗಲಿ, ಹಣವನ್ನಾಗಲಿ ವಾಪಸ್ ಮಾಡಿರಲಿಲ್ಲ. ಹೀಗೆ ಗುಮ್ಮನನ್ನು ಬಿಟ್ಟು ಹೆದರಿಸುವ ಪದ್ದತಿ ಹಿಂದಿನಿಂದಲೂ ಇದೆ. ದೇವನೂರು ಮಹಾದೇವನಂಥವರು ಕೆಲವೊಂದು ವಿಚಾರಗಳನ್ನ ಉಲ್ಲೇಖಿಸಿದ್ದಾರೆ. ಅವರು ತಿಳಿದುಕೊಂಡಿರುವ ತಪ್ಪುಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗುವುದು. ಕೆಲವರು ಪಠ್ಯಪುಸ್ತಕದಿಂದ ತನ್ನ ಪಾಠವನ್ನ ತೆಗೆಯಿರಿ ಎಂದು ಹೇಳಿಕೆ ನೀಡಿದ್ದಾರೆ. ಕೆಲವರ ಪಾಠಗಳೇ ಪುಸ್ತಕದಲ್ಲಿ ಇಲ್ಲ, ಸುಮ್ಮನೆ ಹೇಳಿಕೆ ಕೊಟ್ಟವರೂ ಇದ್ದಾರೆ. ಇದರಲ್ಲಿ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಎಲ್ಲರ ಸಲಹೆ ಕೇಳುತ್ತೇವೆ, ಸರಿಯಾದುದನ್ನೇ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Hijab row in Mangalore university, court order must be strictly followed says Kota Poojary.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm