ಬ್ರೇಕಿಂಗ್ ನ್ಯೂಸ್
01-06-22 02:39 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 1: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನೇಶನಲ್ ಹೆರಾಲ್ಡ್ ಅಕ್ರಮ ಪ್ರಕರಣದಲ್ಲಿ ಜೂನ್ 9ರಂದು ವಿಚಾರಣೆಗೆ ಹಾಜರಾಗಲು ಇಬ್ಬರಿಗೆ ನೋಟೀಸ್ ನೀಡಿದ್ದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ದೃಢಪಡಿಸಿದ್ದಾರೆ.
ಆದರೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. 2015ರಲ್ಲಿ ಇಡಿ ಅಧಿಕಾರಿಗಳೇ ಪ್ರಕರಣ ಮುಗಿಸಿದ್ದಾರೆ. ಅಂತದರಲ್ಲಿ ಈಗ ಮತ್ತೆ ನೋಟೀಸ್ ನೀಡಿರುವುದು ಬಿಜೆಪಿಯ ನಾಟಕ. ದೇಶದಲ್ಲಿ ಹಣದುಬ್ಬರ ಇನ್ನಿತರ ಮುಖ್ಯ ವಿಚಾರಗಳನ್ನು ಮರೆಮಾಚುವುದಕ್ಕಾಗಿ ನಮ್ಮ ನಾಯಕರಿಗೆ ನೋಟೀಸ್ ನೀಡಿದ್ದಾರೆ. ಇಡಿಯನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಬಿಜೆಪಿಯ ಈ ರೀತಿಯ ಆಟಗಳಿಗೆ ನಾವು ಹೆದರುವುದಿಲ್ಲ ಎಂದು ಸುರ್ಜೇವಾಲಾ ಹೇಳಿದ್ದಾರೆ.
ನೇಶನಲ್ ಹೆರಾಲ್ಡ್ ಸ್ವಾತಂತ್ರ್ಯ ಕಾಲದ ಪತ್ರಿಕೆಯಾಗಿದ್ದು, ಕಾಂಗ್ರೆಸ್ ಮುಖವಾಣಿಯಂತೆ ಪ್ರಕಟವಾಗುತ್ತಿತ್ತು. ಅದನ್ನು ಯಂಗ್ ಇಂಡಿಯಾ ಟ್ರಸ್ಟ್ ಹೆಸರಿನಲ್ಲಿ ಗಾಂಧಿ ಕುಟುಂಬವೇ ನಡೆಸಿಕೊಂಡು ಬಂದಿತ್ತು. ಆನಂತರ, ಪತ್ರಿಕೆಯನ್ನು ನಿಲ್ಲಿಸಲಾಗಿದ್ದು ಅದರಲ್ಲಿ ಎರಡು ಸಾವಿರ ಕೋಟಿ ಬೇನಾಮಿ ಆಸ್ತಿ ಅಕ್ರಮ ಪರಭಾರೆ ಆಗಿದೆ ಅನ್ನುವ ಆರೋಪಗಳಿದ್ದು, ಪ್ರಕರಣದ ಬಗ್ಗೆ ಸುದೀರ್ಘ ಕಾಲದಿಂದ ಇಡಿ, ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದರೆ ಪೂರ್ತಿಯಾಗಿ ಮುಗಿಸದೆ ಅದನ್ನು ಚುನಾವಣೆ ಕಾಲದಲ್ಲಿ ಜಗ್ಗುತ್ತಾ ಬರಲಾಗಿದೆ.
The Enforcement Directorate on Wednesday summoned Congress interim president Sonia Gandhi and Congress MP Rahul Gandhi over the National Herald case, which the Congress claims was closed by the investigating agency in 2015. "The BJP is using puppet agencies to intimidate political opponents. National Heral has a history that goes back to independence days," Congress leader and senior advocate Abhishek Manu Singhvi said adding that all opposition leaders including Mamata Banerjee, Farooq Abdullah are under the attacks from central agencies.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm