ಬ್ರೇಕಿಂಗ್ ನ್ಯೂಸ್
30-05-22 08:06 pm HK News Desk ದೇಶ - ವಿದೇಶ
ನವದೆಹಲಿ, ಮೇ 30: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಆಪ್ ಸರಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
2015-16ರಲ್ಲಿ ಸತ್ಯೇಂದ್ರ ಜೈನ್ ದೆಹಲಿಯಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ 4.81 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಆಗಿತ್ತು. ಕೊಲ್ಕತ್ತಾ ಮೂಲದ ಕಂಪನಿಗಳು ಹವಾಲಾ ರೂಪದಲ್ಲಿ ಸತ್ಯೇಂದ್ರ ಜೈನ್ ಹೆಸರಲ್ಲಿದ್ದ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಈ ಹಣವನ್ನು ಸತ್ಯೇಂದ್ರ ಜೈನ್ ದೆಹಲಿ ಸುತ್ತಮುತ್ತ ಆಸ್ತಿ ಖರೀದಿಸಲು ಬಳಕೆ ಮಾಡಿದ್ದರು ಅನ್ನೋದು ಇಡಿ ಅಧಿಕಾರಿಗಳ ಆರೋಪ.
ಆದರೆ ಹಳೆ ಪ್ರಕರಣದಲ್ಲಿ ಈಗ ಯಾಕೆ ಬಂಧಿಸುತ್ತಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಸತ್ಯೇಂದ್ರ ಜೈನ್, ದೆಹಲಿ ಸರಕಾರದಲ್ಲಿ ಇಂಧನ, ಆರೋಗ್ಯ, ಕೈಗಾರಿಕೆ, ಪಿಡಬ್ಲ್ಯುಡಿ ಹೀಗೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಆಪ್ ಸರಕಾರದಲ್ಲಿ ಪ್ರಭಾವಿ ಸಚಿವರೂ ಹೌದು. ಇತ್ತೀಚೆಗೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಆರೋಗ್ಯ ಸಚಿವ ಗುತ್ತಿಗೆ ಒಂದರಲ್ಲಿ ಪರ್ಸೆಂಟೇಜ್ ತೆಗೆದುಕೊಂಡಿರುವುದು ತಿಳಿಯುತ್ತಲೇ ಸಚಿವ ಸ್ಥಾನದಿಂದ ವಜಾ ಮಾಡಿದ್ದಲ್ಲದೆ, ಒಟ್ಟು ಪ್ರಕರಣದ ಬಗ್ಗೆ ತನಿಖೆಗೆ ಆದೇಶ ಮಾಡಿ ಸಚಿವರನ್ನೇ ಬಂಧಿಸಿತ್ತು.
ಪಂಜಾಬ್ ಆಪ್ ಸರಕಾರದ ನಡೆ ದೇಶಾದ್ಯಂತ ಭಾರೀ ಮೆಚ್ಚುಗೆಗೂ ಪಾತ್ರವಾಗಿದ್ದಲ್ಲದೆ, ಬಿಜೆಪಿ ಸರಕಾರಕ್ಕೆ ಇರಿಸು ಮುರಿಸನ್ನೂ ಮಾಡಿತ್ತು. ಬಿಜೆಪಿ ಸರಕಾರದ ಸಚಿವರ ಬಗ್ಗೆ ಆರೋಪಗಳು ಇದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆಪ್ ಸರಕಾರ ತನ್ನ ಸಚಿವನನ್ನೇ ಬಂಧಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೇ ಕಾರಣಕ್ಕೋ ಏನೋ, ಇಡಿ ಅಧಿಕಾರಿಗಳ ಮೂಲಕ ಹಳೆ ಕೇಸಿನಲ್ಲಿ ಆಪ್ ಸರಕಾರದ ಸಚಿವರನ್ನು ಬಂಧಿಸಿದೆ.
The Enforcement Directorate on Monday arrested Delhi Health Minister Satyendar Jain in a case connected to hawala transactions related to a Kolkata-based company. Jain, 57, is the minister for health, power, home, PWD, industries, urban development, flood, irrigation and water in the Arvind Kejriwal-led government. In April, ED had attached assets worth Rs 4.81 crore of the family and companies ''beneficially owned and controlled'' by Jain in connection with a money-laundering probe against him.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm