ಬ್ರೇಕಿಂಗ್ ನ್ಯೂಸ್
28-12-21 10:12 pm HK Desk news ಕರ್ನಾಟಕ
ಮಂಡ್ಯ, ಡಿ.28 : ಮತಾಂತರ ನಿಷೇಧ ಕಾಯ್ದೆ ಆರೆಸ್ಸೆಸ್ ಅಜೆಂಡಾ. ಕಾಯ್ದೆಯ ಕರಡನ್ನು ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸಲಾಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈಗ ಆರೆಸ್ಸೆಸ್ ಹೇಳಿದಂತೆ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಲು ಹೊರಟಿದೆ. ಇದೇ ಕರಡನ್ನು ನಾನು ಅಧಿಕಾರದಲ್ಲಿದ್ದಾಗ ರೆಡಿ ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹೌದು.. ಆ ಮಸೂದೆಯ ಕರಡನ್ನು ನನ್ನ ಮುಂದೆ ಇಟ್ಟಿದ್ದರು. ಅದನ್ನು ಬರೆದಿದ್ದ ಎಲ್ಲರೂ ಆರೆಸ್ಸೆಸ್ ನವರಾಗಿದ್ದರು. ನಾನು ಆಗ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಆಂಜನೇಯರಿಗೆ ಅದನ್ನ ಮುಗಿಸಿಬಿಡು ಅಂತಾ ಹೇಳಿದ್ದೆ. ಅದರಂತೆ ಆಂಜನೇಯ ಅದನ್ನ ತಿರಸ್ಕರಿಸುವಂತೆ ಸೂಚಿಸಿ ಬರೆದಿದ್ದರು.

ಮತಾಂತರ ನಿಷೇಧ ಮಸೂದೆಯ ಕರಡು ತಂದಿದ್ದು 2011ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ. ಅದನ್ನ ಸದನದಲ್ಲಿ ನಾನು ಯಡಿಯೂರಪ್ಪಗೆ ಹೇಳಿದ್ದೆ. ಯಡಿಯೂರಪ್ಪ ಕೂಡ ಅದನ್ನ ಒಪ್ಪಿಕೊಂಡಿದ್ದರು ಎಂದು ಹೇಳಿದರು ಸಿದ್ದರಾಮಯ್ಯ.
ಈಶ್ವರಪ್ಪ ಒಬ್ಬ ಪೆದ್ದ...!
ಈ ಮಸೂದೆಯನ್ನು ಆರೆಸ್ಸೆಸ್ ನವರು ಮಾಡಿರೋದು ಅಂತ ಸದನದಲ್ಲಿ ಹೇಳಿದ್ದೆ. ಹೌದು ಅಂತಾ ಈಶ್ವರಪ್ಪ ಸದನದಲ್ಲಿ ಒಪ್ಪಿಕೊಂಡ. ಆದರೆ ಈಶ್ವರಪ್ಪ ಒಬ್ಬ ಪೆದ್ದ. ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾನೆ ಎಂದು ಸಿದ್ದು ಟೀಕಿಸಿದರು.

ಸಂವಿಧಾನದಲ್ಲೇ ಯಾವುದೇ ಮತ, ಧರ್ಮ ಸ್ವೀಕಾರಕ್ಕೆ ಮುಕ್ತ ಅವಕಾಶ ಇದೆ. ಪ್ರೀತಿಸಿ ಮದುವೆ ಆಗೋದನ್ನ ಪ್ರಶ್ನೆ ಮಾಡೋಕೆ ಇವನ್ಯಾರು? ಯಾರು ಯಾರನ್ನೇ ಮದುವೆ ಆದ್ರೂ ಪ್ರಶ್ನೆ ಮಾಡುವಂತೆ ಇಲ್ಲ. ಆದರೆ ಈ ಕಾನೂನು ಮೂಲಕ ಪ್ರೀತಿಸಿ ಮದುವೆಯಾಗೋದಕ್ಕೂ ಅವಕಾಶ ಇಲ್ಲದಾಗಿದೆ. ಇವರು ಜನವಿರೋಧಿ ಕಾನೂನು ತಂದಿದ್ದಾರೆ. ಬಿಜೆಪಿಯವರದ್ದು ಜನ ವಿರೋಧಿ ಆರೆಸ್ಸೆಸ್ ಸಿದ್ಧಾಂತ. ಕಾಂಗ್ರೆಸ್ ಪಕ್ಷದ್ದು ಜನಪರ ಸಿದ್ಧಾಂತ. ನಾವು ಜನಪರ ಇರುವವರು. ಬಿಜೆಪಿಯವರು ಜನರನ್ನ ಬೇರ್ಪಡಿಸುವವರು ಎಂದು ಸಿದ್ದರಾಮಯ್ಯ ಟೀಕಿಸಿದರು.
The Congress will repeal the proposed contentious anti-conversion legislations immediately after coming to power following the 2023 Assembly polls in Karnataka, Leader of Opposition Siddaramaiah said on Monday.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm