ಬ್ರೇಕಿಂಗ್ ನ್ಯೂಸ್
24-11-21 05:44 pm HK news Desk ಕರ್ನಾಟಕ
ಕಲಬುರ್ಗಿ, ನ.24: ಅತ್ತ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮನೆ ಬಾಗಿಲು ಬಡಿಯುತ್ತಿದ್ದರೆ, ಇತ್ತ ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮಿನಲ್ಲಿ ಹಣದ ಕಂತೆಯನ್ನು ಒಂದೊಂದೇ ನೀರಿನ ಪೈಪಿಗೆ ತೂರಿಸುತ್ತಿದ್ದ.. ಹೌದು.. ತನ್ನ ಕೆಲಸದ ಉದ್ದಕ್ಕೂ ಜನರ ದುಡ್ಡನ್ನು ಕಿತ್ತು ತಿಂದು ಗುಡ್ಡೆ ಹಾಕಿದ್ದ ಪರಮ ಭ್ರಷ್ಟ ಅಧಿಕಾರಿಯೊಬ್ಬನ ಅಸಲಿ ಬಣ್ಣ ನೋಡಿ ಎಸಿಬಿ ಅಧಿಕಾರಿಗಳೇ ದಿಗಿಲುಗೊಂಡಿದ್ದಾರೆ.
ಭಾರೀ ಆಸ್ತಿ ಗಳಿಸಿರುವ ಆರೋಪದಲ್ಲಿ ಕಲಬುರ್ಗಿಯ ಲೋಕೋಪಯೋಗಿ ಇಲಾಖೆಯ ಜೆಇ ಆಗಿರುವ ಶಾಂತಗೌಡನ ಬಿರಾದಾರ ಎಂಬ ಅಧಿಕಾರಿಯ ಮನೆಗೆ ಹೊಕ್ಕಿದ್ದ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಆಗಿದ್ದಾರೆ. ಪೈಪ್, ಬಕೇಟ್ ನಲ್ಲಿ ತುಂಬಿದ್ದ ಕಂತೆ ಕಂತೆ ನೋಟಿನ ರಾಶಿಯನ್ನೇ ಪತ್ತೆ ಹಚ್ಚಿದ್ದಾರೆ. ಮನೆಯ ಬಾತ್ ರೂಮಿನ ಪೈಪ್ ನಲ್ಲಿ ತೂರಿಸಿದ್ದ ನಗದನ್ನು ಹೊರ ತೆಗೆಯಲು ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ. ಪ್ಲಂಬರನ್ನು ಕರೆಸಿ, ಬಾತ್ ರೂಮಿನಿಂದ ಮನೆಯ ಹೊರಗೆ ಚಾಚಿಕೊಂಡಿದ್ದ ಪೈಪನ್ನು ಕಟ್ ಮಾಡಿ ತೆಗೆಯುತ್ತಿದ್ದಾಗ ನೋಟಿನ ಕಂತೆಗಳೇ ಹೊರಬಿದ್ದಿವೆ. ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಸ್ವತಃ ಲಂಚಕೋರ ಅಧಿಕಾರಿಯೇ ಪೈಪ್ ಒಳಗೆ ಲಂಚದ ಹಣವನ್ನು ತೂರಿಸಿದ್ದು ಎಲ್ಲವನ್ನೂ ಎಸಿಬಿ ಸಿಬಂದಿ ಹೊರತೆಗೆದಿದ್ದಾರೆ.
ನೆಲಕ್ಕೆ ಹುದುಗಿದ್ದ ಪೈಪನ್ನೂ ಅಗೆದು ತೆಗೆದಿದ್ದು ಕೊನೆಗೆ 13 ಲಕ್ಷ 50 ಸಾವಿರ ಹಣ ಪಿವಿಸಿ ಪೈಪ್ ನಲ್ಲೇ ಪತ್ತೆಯಾಗಿದೆ. ಅಲ್ಲಲ್ಲಿ ಪತ್ತೆಯಾದ ಹಣದ ಕಂತೆಗಳನ್ನು ಬಕೆಟ್ ನಲ್ಲಿ ತುಂಬಿಸಿ ಅಧಿಕಾರಿಗಳು ಲೆಕ್ಕ ಮಾಡಿದ್ದಾರೆ. ಒಟ್ಟು ಶಾಂತಗೌಡನ ಮನೆಯಲ್ಲಿ ಬರೋಬ್ಬರಿ 55 ಲಕ್ಷ ನಗದು ಪತ್ತೆಯಾಗಿದೆ. ಆರಂಭದಿಂದಲೂ ಎಸಿಬಿ ತನಿಖೆಗೆ ಸಹಕರಿಸದೆ ನಾಟಕವಾಡಿದ ಅಧಿಕಾರಿ, ಕಪಾಟು, ಬೀರುವಿನ ಕೀಯನ್ನು ಕೊಡದೆ ಸತಾಯಿಸಿದ್ದಾನೆ.
ಇದಲ್ಲದೆ, ಶಾಂತಗೌಡ ಬಿರಾದಾರ ಕಲಬುರಗಿಯ ವಿವಿಧ ಕಡೆ ಆಸ್ತಿ ಹೊಂದಿದ್ದಾನೆ. ಗುಬ್ಬಿ ಕಾಲೋನಿಯಲ್ಲಿ ಒಂದು ಭವ್ಯ ಬಂಗಲೆ, ಕಲಬುರಗಿಯ ಬಡೇಪುರದಲ್ಲಿ ಇನ್ನೊಂದು ಭವ್ಯ ಬಂಗಲೆ ಪತ್ತೆಯಾಗಿದೆ. ಕಲಬುರಗಿ ನಗರದ ಬ್ರಹ್ಮಪೂರ ಬಡವಾಣೆ ಕೋಟನೂರ್ ಡಿ ಬಡವಾಣೆಯಲ್ಲಿ ತಲಾ ಎರಡು ಸೈಟ್ ಹೊಂದಿರುವುದು ಪತ್ತೆಯಾಗಿದೆ.
ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ 25 ಎಕರೆ ಫಾರ್ಮ್ ಹೌಸ್, 10 ಎಕರೆ ಜಮೀನು ಸೇರಿ ಒಟ್ಟು 35 ಎಕರೆ ಜಮೀನು ಸದ್ಯಕ್ಕೆ ಪತ್ತೆಯಾಗಿದೆ. ಹಂಗಾರಮಗ ಗ್ರಾಮದ ಫಾರ್ಮ್ ನಲ್ಲಿ ಮತ್ತೆರಡು ಭವ್ಯ ಬಂಗಲೆ ಇರುವುದನ್ನೂ ಪತ್ತೆ ಮಾಡಿದ್ದಾರೆ.
ಹಂಗಾಮಿ ನೌಕರನಾಗಿ ಸೇರಿದ್ದ ಲಂಚಕೋರ !
1992 ರಲ್ಲಿ ಕುಲಬುರ್ಗಿ ಜಿಲ್ಲಾ ಪಂಚಾಯ್ತಿ ಆಳಂದ ವಿಭಾಗದಲ್ಲಿ ಕಿರಿಯ ಅಭಿಯಂತರ ಹುದ್ದೆಗೆ ಹಂಗಾಮಿ ನೌಕರನಾಗಿ ಸೇರ್ಪಡೆಯಾಗಿದ್ದ ಶಾಂತಗೌಡ ತನ್ನ ಕರ್ತವ್ಯದ ಉದ್ದಕ್ಕೂ ಭ್ರಷ್ಟಾಚಾರದಿಂದ ಕೂಡಿಟ್ಟ ಹಣಕ್ಕೆ ಲೆಕ್ಕ ಇರಲಿಕ್ಕಿಲ್ಲ. 2000 ಇಸವಿಯಲ್ಲಿ ಖಾಯಂ ನೌಕರನಾಗಿ ಸೇರಿದ್ದ ಶಾಂತಗೌಡ ಕಲಬುರಗಿ ಜಿಲ್ಲೆಯ ಆಳಂದ, ವಿಜಯಪುರ ಜಿಲ್ಲೆಯ ಆಲಮೇಲ, ಬೆಳಗಾವಿ, ಜೇವರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ಪೂರೈಸಿದ್ದಾನೆ. ಕಡಿಮೆ ಅವಧಿಯಲ್ಲಿ ಕೂಡಿಹಾಕಿದ ಆಸ್ತಿಯನ್ನು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ. ಕಡತ ಪರಿಶೀಲನೆ ಮುಂದುವರಿದಿದ್ದು ಇನ್ನು ಬ್ಯಾಂಕಿನಲ್ಲಿರುವ ಆಸ್ತಿ ಪಾಸ್ತಿಯ ಬಗ್ಗೆ ಇನ್ನೂ ಹೊರಬಂದಿಲ್ಲ.
A search of the resident of a Junior Engineer in the Public Works Department (PWD) in Kalaburagi yielded assets, including cash, that were said to be disproportionate to the known source of the officer’s income.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am