ಬ್ರೇಕಿಂಗ್ ನ್ಯೂಸ್
04-11-21 01:12 pm Headline Karnataka News Desk ಕರ್ನಾಟಕ
ಬೆಂಗಳೂರು, ನ.4: ರಾಜ್ಯ ಸರಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ತಲಾ ಏಳು ರೂ. ಇಳಿಕೆ ಮಾಡಿದೆ. ನಿನ್ನೆ ರಾತ್ರಿ ಕೇಂದ್ರ ಸರಕಾರ ಪೆಟ್ರೋಲಿಗೆ ಐದು ರೂ. ಮತ್ತು ಡೀಸೆಲ್ ಗೆ ಹತ್ತು ರೂ. ತೆರಿಗೆ ಇಳಿಸಿತ್ತು.
ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಲೀಟರಿಗೆ 12 ರೂ. ಮತ್ತು ಡೀಸೆಲಿಗೆ 17 ರೂ. ಇಳಿಕೆಯಾಗಿದೆ. ಇದರಂತೆ, ರಾಜ್ಯದಲ್ಲಿ ಪೆಟ್ರೋಲ್ ದರ 98 ರೂ. ಮತ್ತು ಡೀಸೆಲ್ ದರ 85 ರೂ. ಆಸುಪಾಸು ಆಗಲಿದೆ.
ಇಳಿಕೆ ಆಗಿದ್ದು ಹೇಗೆ ?
ಕಳೆದ ಬಾರಿ, 2020ರ ಮೇ ತಿಂಗಳ ಲಾಕ್ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ವಿಪರೀತ ಇಳಿಕೆಯಾಗಿದ್ದ (ಬ್ಯಾರಲ್ ತೈಲಕ್ಕೆ 20 ಡಾಲರ್) ಕಾರಣ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ಮೇಲೆ ಕ್ರಮವಾಗಿ 12 ರೂ. ಮತ್ತು 17 ರೂ. ಹೆಚ್ಚಿಸಿತ್ತು. ಅದರ ಅನುಸಾರ ಅಂತಾರಾಷ್ಟ್ರೀಯ ಬೆಲೆಯೇರಿಕೆ ಅನುಸಾರ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿರ್ಧರಿಸುವ ತೈಲ ಕಂಪನಿಗಳ ನೀತಿಯಂತೆ ದರ ಇಳಿಸುವುದಕ್ಕೆ ಸರಕಾರ ಅಡ್ಡಗಾಲು ಹಾಕಿತ್ತು.
ಆಗ ಏರಿಸಿದ ವಿಪರೀತ ತೆರಿಗೆಯನ್ನು ಆನಂತರ ಇಳಿಸದೇ ಇದ್ದುದರಿಂದ ಆನಂತರದ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದಾಗ ಸಹಜವಾಗಿಯೇ ಬೆಲೆ ಏರಿಕೆಯಾಗಿತ್ತು. ಆಗ ಹೆಚ್ಚಿಸಿದ ತೆರಿಗೆಯನ್ನು ಸರಕಾರ ಈಗ ಇಳಿಕೆ ಮಾಡಿದೆ. ಅದರ ಜೊತೆಗೆ, ಆಯಾ ರಾಜ್ಯ ಸರಕಾರಗಳು ವ್ಯಾಟ್ ತೆರಿಗೆ ಇಳಿಸುವಂತೆ ಸಲಹೆ ಮಾಡಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರಕಾರಗಳು ತಮ್ಮಲ್ಲಿ ತೆರಿಗೆ ಇಳಿಸಿದ್ದು ಜನರ ಮೇಲಿನ ಹೊರೆಯನ್ನು ತಗ್ಗಿಸಿದೆ.
After the Centre cut excise duty on petrol and diesel on Wednesday, the Karnataka government announced slashing their prices by an additional Rs 7 per litre.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am