ಬ್ರೇಕಿಂಗ್ ನ್ಯೂಸ್
04-11-21 01:12 pm Headline Karnataka News Desk ಕರ್ನಾಟಕ
ಬೆಂಗಳೂರು, ನ.4: ರಾಜ್ಯ ಸರಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ತಲಾ ಏಳು ರೂ. ಇಳಿಕೆ ಮಾಡಿದೆ. ನಿನ್ನೆ ರಾತ್ರಿ ಕೇಂದ್ರ ಸರಕಾರ ಪೆಟ್ರೋಲಿಗೆ ಐದು ರೂ. ಮತ್ತು ಡೀಸೆಲ್ ಗೆ ಹತ್ತು ರೂ. ತೆರಿಗೆ ಇಳಿಸಿತ್ತು.
ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಲೀಟರಿಗೆ 12 ರೂ. ಮತ್ತು ಡೀಸೆಲಿಗೆ 17 ರೂ. ಇಳಿಕೆಯಾಗಿದೆ. ಇದರಂತೆ, ರಾಜ್ಯದಲ್ಲಿ ಪೆಟ್ರೋಲ್ ದರ 98 ರೂ. ಮತ್ತು ಡೀಸೆಲ್ ದರ 85 ರೂ. ಆಸುಪಾಸು ಆಗಲಿದೆ.
ಇಳಿಕೆ ಆಗಿದ್ದು ಹೇಗೆ ?
ಕಳೆದ ಬಾರಿ, 2020ರ ಮೇ ತಿಂಗಳ ಲಾಕ್ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ವಿಪರೀತ ಇಳಿಕೆಯಾಗಿದ್ದ (ಬ್ಯಾರಲ್ ತೈಲಕ್ಕೆ 20 ಡಾಲರ್) ಕಾರಣ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ಮೇಲೆ ಕ್ರಮವಾಗಿ 12 ರೂ. ಮತ್ತು 17 ರೂ. ಹೆಚ್ಚಿಸಿತ್ತು. ಅದರ ಅನುಸಾರ ಅಂತಾರಾಷ್ಟ್ರೀಯ ಬೆಲೆಯೇರಿಕೆ ಅನುಸಾರ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿರ್ಧರಿಸುವ ತೈಲ ಕಂಪನಿಗಳ ನೀತಿಯಂತೆ ದರ ಇಳಿಸುವುದಕ್ಕೆ ಸರಕಾರ ಅಡ್ಡಗಾಲು ಹಾಕಿತ್ತು.
ಆಗ ಏರಿಸಿದ ವಿಪರೀತ ತೆರಿಗೆಯನ್ನು ಆನಂತರ ಇಳಿಸದೇ ಇದ್ದುದರಿಂದ ಆನಂತರದ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದಾಗ ಸಹಜವಾಗಿಯೇ ಬೆಲೆ ಏರಿಕೆಯಾಗಿತ್ತು. ಆಗ ಹೆಚ್ಚಿಸಿದ ತೆರಿಗೆಯನ್ನು ಸರಕಾರ ಈಗ ಇಳಿಕೆ ಮಾಡಿದೆ. ಅದರ ಜೊತೆಗೆ, ಆಯಾ ರಾಜ್ಯ ಸರಕಾರಗಳು ವ್ಯಾಟ್ ತೆರಿಗೆ ಇಳಿಸುವಂತೆ ಸಲಹೆ ಮಾಡಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರಕಾರಗಳು ತಮ್ಮಲ್ಲಿ ತೆರಿಗೆ ಇಳಿಸಿದ್ದು ಜನರ ಮೇಲಿನ ಹೊರೆಯನ್ನು ತಗ್ಗಿಸಿದೆ.
After the Centre cut excise duty on petrol and diesel on Wednesday, the Karnataka government announced slashing their prices by an additional Rs 7 per litre.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm