ಬ್ರೇಕಿಂಗ್ ನ್ಯೂಸ್
14-04-21 02:26 pm Headline Karnataka News Network ಕರ್ನಾಟಕ
ಶಿರಸಿ, ಏ. 14: ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಶಿರಸಿಯ 17 ವಿದ್ಯಾರ್ಥಿಗಳು ಬುಧವಾರ ಬನವಾಸಿಯಿಂದ ಶಿರಸಿವರೆಗೆ ಸ್ಕೇಟಿಂಗ್ ಮಾಡಿದರು.
ಬನವಾಸಿಯ ಕದಂಬ ವೃತ್ತದಿಂದ ಸ್ಕೇಟಿಂಗ್ ಆರಂಭಿಸಿದ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಸಾಗಿದರು. ಗುಡ್ನಾಪುರ, ಉಂಚಳ್ಳಿ, ಅರೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ಕೊರೊನಾ ಲಸಿಕೆ ಕುರಿತು ಅರಿವು ಮೂಡಿಸುವ ಕರಪತ್ರ ಹಂಚಿದರು.
ರಸ್ತೆಯ ಒಂದು ಬದಿಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲಿ ಪೊಲೀಸರು, ಪಾಲಕರು ಸುರಕ್ಷತೆ ಸಲುವಾಗಿ ಸಾಲಾಗಿ ವಾಹನ ಚಲಾಯಿಸುತ್ತ ಸಾಗಿದರು.
ಎರಡೂವರೆ ಗಂಟೆ ಬಳಿಕ ಶಿರಸಿ ನಗರಕ್ಕೆ ತಲುಪಿದ ವಿದ್ಯಾರ್ಥಿಗಳು ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
'ಏ.11 ರಿಂದ 14ರವರೆಗೆ ದೇಶವ್ಯಾಪಿ ಕೊರೊನಾ ಲಸಿಕೋತ್ಸವಕ್ಕೆ ಪ್ರಧಾನಿ ನೀಡಿದ ಕರೆಯಂತೆ ವಿಶಿಷ್ಟ ರೀತಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು' ಎಂದು ಕಾರ್ಯಕ್ರಮ ಆಯೋಜಕ ಅದ್ವೈತ ಸ್ಕೇಟಿಂಗ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನ ಕಿರಣಕುಮಾರ್ ತಿಳಿಸಿದರು.
'ಮೊದಲ ಬಾರಿಗೆ ಇಷ್ಟು ದೂರ ಸ್ಕೇಟಿಂಗ್ ಮಾಡುತ್ತ ಸಂಚರಿಸಿದ್ದು ಅವಿಸ್ಮರಣೀಯ ಅನುಭವ. ನಾವು ಮಾಡಿದ ಜಾಗೃತಿ ಜನರನ್ನು ತಲುಪಿದರೆ ಸಾರ್ಥಕ ಎನಿಸುತ್ತದೆ' ಎಂದು ವಿದ್ಯಾರ್ಥಿನಿ ಅನಘ ಪ್ರತಿಕ್ರಿಯಿಸಿದರು.
ಸ್ಕೇಟಿಂಗ್ ಮೂಲಕ ನಡೆಸಿದ ಜಾಗೃತಿ ಅಭಿಯಾನಕ್ಕೆ ಬನವಾಸಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಚಾಲನೆ ನೀಡಿದ್ದರು. ಸಿಪಿಐ ಬಿ.ಯು.ಪ್ರದೀಪ ನೇತೃತ್ವದಲ್ಲಿ ಸುರಕ್ಷತೆ ವಹಿಸಲಾಗಿತ್ತು.
Students in Sirsi go on Skating for 23 Kms to bring covid 19 vaccine awareness among people. The students were thrilled to travek so far.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm