ಬ್ರೇಕಿಂಗ್ ನ್ಯೂಸ್
08-04-21 08:11 pm Headline Karnataka News Network ಕರ್ನಾಟಕ
ಮೂಲ್ಕಿ, ಎ.8: ರೌಡಿ ಶೀಟರ್ ಆರೋಪಿಗೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲು ತೆರಳಿದ್ದ ಎಎಸ್ಐ ಮೇಲೆ ತಲವಾರು ಬೀಸಿ ಹಲ್ಲೆ ನಡೆಸಿದ ಘಟನೆ ಕಿನ್ನಿಗೋಳಿ ಬಳಿಯ ಲಿಂಗಪ್ಪಯ್ಯಕಾಡಿನಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿ ರೌಡಿಶೀಟರ್ ಆಗಿರುವ ಲಿಂಗಪ್ಪಯ್ಯ ಕಾಡು ನಿವಾಸಿ ಅನ್ಸಾರ್ ನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಅನ್ಸಾರ್ ಮತ್ತು ಆತನ ತಂದೆ ಸಾದಿಕ್ ನವೆಂಬರ್ ನಲ್ಲಿ ಮೂಕ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದು ಈ ಬಗ್ಗೆ ವಿಚಾರಣೆಗೆ ಬರುವಂತೆ ಪೊಲೀಸರು ಕರೆದಿದ್ದರೂ, ಠಾಣೆಗೆ ಬಂದಿರಲಿಲ್ಲ. ಈ ಬಗ್ಗೆ 41 ಸಿಆರ್ ಪಿಸಿ ಪ್ರಕಾರ, ಆರೋಪಿಗೆ ಸ್ಟೇಶನ್ ನೋಟೀಸ್ ನೀಡಿ, ವಿಚಾರಣೆಗೆ ಕರೆಯಲೆಂದು ಮೂಲ್ಕಿ ಎಎಸ್ಐ ಅಶೋಕ್ ಮತ್ತು ಸಿಬಂದಿ ಸುರೇಶ್ ಲಿಂಗಪ್ಪಯ್ಯ ಕಾಡಿಗೆ ತೆರಳಿದ್ದರು. ಪೊಲೀಸರು ಬಂದಿದ್ದನ್ನು ನೋಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ತನ್ನ ಮನೆಗೆ ತೆರಳಿ ಅವಿತುಕೊಂಡಿದ್ದ.
ಪೊಲೀಸ್ ಸಿಬಂದಿ ಅಲ್ಲಿಗೆ ತೆರಳಿದಾಗ, ಮನೆಗೆ ಬಾಗಿಲು ಹಾಕಿ ಒಳಗೆ ಕುಳಿತಿದ್ದನ್ನು ತಿಳಿದು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು. ಬಳಿಕ ಪೊಲೀಸರು ಬಾಗಿಲು ದೂಡಿ, ಒಳಕ್ಕೆ ಹೋಗುತ್ತಿದ್ದಂತೆ ಒಳಭಾಗದಲ್ಲಿದ್ದ ಅನ್ಸಾರ್ ತಲವಾರು ಬೀಸಿದ್ದಾನೆ. ಈ ವೇಳೆ, ಅಶೋಕ್ ಮತ್ತು ಸತೀಶ್ ಎಂಬ ಇನ್ನೊಬ್ಬ ಸಿಬಂದಿಯ ಕೈಗೆ ಗಾಯವಾಗಿದೆ. ಕೂಡಲೇ ಪೊಲೀಸರು ಅನ್ಸಾರ್ ನನ್ನು ಹಿಡಿದು ಬಂಧಿಸಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಪೊಲೀಸರು ಬಳಿಕ ಅಲ್ಲಿಂದ ತೆರಳಿದ್ದರು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಎಎಸ್ಐ ಅಶೋಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇಂದು ಬಿಡುಗಡೆಯಾಗಿದ್ದಾರೆ.
ರೌಡಿ ಅನ್ಸಾರ್ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ತಂದೆ ಸಾದಿಕ್, ತಾಯಿ ಜುಬೈದಾ, ಇನ್ನೊಬ್ಬ ಮಹಿಳೆ ಮಮ್ತಾಜ್ ವಿರುದ್ಧ ಎಎಸ್ಐ ಅಶೋಕ್ ದೂರಿನಂತೆ ಮೂಲ್ಕಿ ಠಾಣೆಯಲ್ಲಿ ಕೊಲೆಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಅನ್ಸಾರ್ ಮೂಲ್ಕಿ ಠಾಣೆ ವ್ಯಾಪ್ತಿಯಲ್ಲಿ ರೌಡಿಯಾಗಿದ್ದು, ಕಳೆದ ಅಕ್ಟೋಬರ್ ನಲ್ಲಿ ಲಿಂಗಪ್ಪಯ್ಯ ಕಾಡಿನಲ್ಲಿ ಮನೆಯೊಂದಕ್ಕೆ ನುಗ್ಗಿ ದರೋಡೆಗೆ ಯತ್ನ ನಡೆಸಿದ ಬಗ್ಗೆ ದೂರು ದಾಖಲಾಗಿತ್ತು. ಆನಂತರ ನವೆಂಬರ್ ನಲ್ಲಿ ತಂದೆ ಮಗ ಸೇರಿ ಒಬ್ಬ ಬಡಪಾಯಿಗೆ ಹಲ್ಲೆಗೈದಿದ್ದ ಬಗ್ಗೆ ದೂರು ದಾಖಲಾಗಿತ್ತು. ಐಕಳದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣದಲ್ಲಿಯೂ ಅನ್ಸಾರ್ ಹೆಸರು ಕೇಳಿಬಂದಿತ್ತು. ಆದರೆ, ಸರಣಿಯಂತೆ ಪ್ರಕರಣ ದಾಖಲಾಗಿದ್ದರೂ ಅನ್ಸಾರ್ ಪೊಲೀಸರ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ.
Police Assistant Sub Inspector who went to service notice was attacked with the sword by rowdy shetter in Mulki. The arrested has been identified as Ansar.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm