ಬ್ರೇಕಿಂಗ್ ನ್ಯೂಸ್
24-03-21 11:08 am Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಮಾ.24: ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಯೊಂದಿಗೆ ಜನ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ ನಡೆದಿದೆ.
ತಡರಾತ್ರಿ ಕಾಡುಪಾಪವೊಂದು ಕಾಡಿನಿಂದ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ಗೆ ದಾರಿತಪ್ಪಿ ಬಂದಿದ್ದು ನಾಯಿಗಳಿಂದ ಅಪರೂಪದ ಅತಿಥಿಯನ್ನು ರಕ್ಷಿಸಿದ್ದಾರೆ. ಅಡವಿ ಪಾಪನ ಕಂಡು ಜನ ಸಂತಸಗೊಂಡಿದ್ದಾರೆ. ಮೊದಲಿಗೆ ಭಯವಾದರೂ ಅದು ಕಾಡುಪಾಪ ಎಂದು ತಿಳಿದ ಮೇಲೆ ಪೆಟ್ರೋಲ್ ಬಂಕ್ಗೆ ಬಂದಿದ್ದ ಸವಾರರು ಕಾಡುಪಾಪದೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಕಾಡುಪಾಪವನ್ನು ಬೀದಿ ನಾಯಿಗಳು ದಾಳಿ ನಡೆಸಿದ್ದವು. ಸದ್ಯ ನಾಯಿ ದಾಳಿಯಿಂದ ಸ್ಥಳೀಯರು ಕಾಡುಪಾಪವನ್ನು ರಕ್ಷಿಸಿದ್ದಾರೆ. ಅಪರೂಪದ ಪ್ರಾಣಿಕಂಡು ಚಕಿತರಾದ ಜನರು ಅದರ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ ಅವರ ಸಮ್ಮುಖದಲ್ಲೇ ಚಾರ್ಮಾಡಿ ಅರಣ್ಯದಲ್ಲಿ ಕಾಡುಪಾಪ ಬಿಟ್ಟು ಬಂದಿದ್ದಾರೆ.
ಇನ್ನು ಕಾಡುಪಾಪಗಳಿಗೆ ದೊಡ್ಡ ಕಣ್ಣು(ಪಾಪೆ) ಇರುವುದರಿಂದ ಅದನ್ನು ಅಡವಿ ಪಾಪ ಎಂದೂ ಸಹ ಕರೆಯುತ್ತಾರೆ. ಕಾಡು ಪ್ರಾಣಿಗಳಲ್ಲೇ ಇದು ಅತ್ಯಂತ ಮುಗ್ಧ ಜೀವಿ. ಕಾಡುಪಾಪಗಳಿಗೆ ಹೆಚ್ಚು ನಾಚಿಕೆ ಸ್ವಭಾವವಿರುತ್ತೆ. ಇವು ನಿಶಾಚರಿ ಜೀವಿಗಳಾದ್ದರಿಂದ ಜನರ ಕಣ್ಣಿಗೆ ಬೀಳುವುದು ಅಪರೂಪ. ತಂಪು ಹವೆಯ ಎಲೆ ತೋಟಗಳು, ಮಾವಿನಮರ, ನೀಲಗಿರಿ, ಆಲ, ಅರಳಿ, ಹುಣಸೆ ಮರಗಳಲ್ಲಿ ಇವು ಬೀಡು ಬಿಡುತ್ತವೆ. ಹಣ್ಣು, ಕಾಯಿ, ಕೀಟ, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆ, ಮರಗಪ್ಪೆ ತಿನ್ನುತ್ತವೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.
Slender loris also called as kadu papa was found in Chikmagalur we're people thronged to click selfies with the animal.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm