ಬ್ರೇಕಿಂಗ್ ನ್ಯೂಸ್
09-03-21 09:33 pm Headline Karnataka News Network ಕರ್ನಾಟಕ
ಕೊಡಗು, ಮಾರ್ಚ್ 9: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹಂತಕ ಹುಲಿಯ ಹಾವಳಿ ಮಿತಿ ಮೀರಿದ್ದು, ಬೆಳಂಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ತಾತನ ಜೊತೆ ಹೊಗಿದ್ದ ಮಗು ಚಿರತೆ ಪಾಲಾದ ಘಟನೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಸದ್ಯ ಈ ವ್ಯಾಘ್ರನ ಉಪಟಳವನ್ನ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಗ್ರಾಮದ ಚಕ್ಕೇರ ಸನ್ನಿ ಸುಬ್ಬಯ್ಯ ಎಂಬುವವರ ತೋಟದಲ್ಲಿ ಕೆಲಸಕ್ಕಿದ್ದ ಕಾರ್ಮಿಕರ ಕುಟುಂಬ ಹುಲಿ ಭಯದಿಂದ ಕಳೆದೊಂದು ವಾರದಿಂದ ತೋಟದತ್ತ ಮುಖ ಮಾಡಿರಲಿಲ್ಲ. ಆದರೆ ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಆನ್ ಮಾಡುವಂತೆ 8 ವರ್ಷದ ಬಾಲಕ ರಂಗ ಸ್ವಾಮಿಯನ್ನ ಕಳುಹಿಸಿದ್ದಾರೆ. ಆತ ತೆರಳಿ ಎಷ್ಟು ಹೊತ್ತಾದರೂ ಮರಳಿಲ್ಲ. ಹಾಗಾಗಿ ಆತನನ್ನ ಹುಡುಕುತ್ತಾ ತಾತ ಕೆಂಚ ಅಲ್ಲಿಗೆ ತೆರಳಿದ್ದಾರೆ. ಆದರೆ, ತಾತ ಕೂಡ ಮರಳುವುದಿಲ್ಲ.

ಇದರಿಂದ ಆತಂಕಗೊಂಡ ಕುಟುಂಬಸ್ಥರು ತಾತ ಮತ್ತು ಮಗುವನ್ನು ಹುಡುಕುತ್ತಾ ತೋಟಕ್ಕೆ ತೆರಳಿದ್ದಾರೆ. ಆದರೆ ಅವರಿಗೆ ತೋಟದಲ್ಲಿ ಕಂಡಿದ್ದು, ಮಗು ರಂಗಸ್ವಾಮಿ ಮೆದುಳು ಹೊರಬಂದು ಅಪ್ಪಚ್ಚಿಯಾಗಿ ಹೆಣವಾಗಿ ಹೋಗಿರುವುದು ಮತ್ತು ತಾತ ಕೆಂಚ ತೀವ್ರವಾಗಿ ಗಾಯಗೊಂಡು ನರಳುತ್ತಾ ಬಿದ್ದಿದ್ದ ದೃಶ್ಯ. ಕಳೆದ ರಾತ್ರಿಯಷ್ಟೇ ಇದೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಈಗ ಈ ವ್ಯಾಘ್ರಕ್ಕೆ ಸುಲಭವಾಗಿ ಸಿಕ್ಕಿದ್ದು ಇದೇ ಬಾಲಕ ರಂಗಸ್ವಾಮಿ ಮತ್ತು ತಾತ ಕೆಂಚ.
ಯಾವಾಗ ಈ ಘಟನೆ ನಡೆಯಿತೋ ಇಡೀ ಬೆಳ್ಳೂರು ಗ್ರಾಮ ರೊಚ್ಚಿಗೆದ್ದಿತ್ತು. 15 ದಿನಗಳ ಹಿಂದಷ್ಟೇ ಓರ್ವ ಬಾಲಕ ಹಾಗೂ ಮತ್ತೋರ್ವ ಮಹಿಳೆಯನ್ನ ಇದೇ ಹುಲಿ ಕೊಂದು ಹೋಗಿತ್ತು. ಜೊತೆಗೆ 13 ಹಸುಗಳನ್ನೂ ಬಲಿ ಪಡೆದಿತ್ತು. ಈ ಅರಣ್ಯ ಇಲಾಖೆ ಮಾತ್ರ ಹುಲಿ ಸೆರೆ ಹಿಡಿಯದೆ ಕಾಲ ಹರಣ ಮಾಡ್ತಾ ಇದೆ ಎಂದು ಆರೋಪಿಸಿದ ಗ್ರಾಮಸ್ಥರು ಗೋಣಿಕೊಪ್ಪ-ಕೇರಳ ಮುಖ್ಯ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಹುಲಿಗೆ ನೀವೇ ಗುಂಡಿಕ್ಕಿ ಇಲ್ಲಾ, ನಾವು ಗ್ರಾಮಸ್ಥರೇ ಗುಂಡಿಕ್ಕುತ್ತೇವೆ ಎಂದು ಆಗ್ರಹಿಸಿದ್ದು, ಗ್ರಾಮಸ್ಥರ ಆಗ್ರಹಕ್ಕೆ ಮಣಿದಿರುವ ಅರಣ್ಯ ಇಲಾಖೆ ಕೊನೆಗೂ ಹುಲಿಯನ್ನು ಕೊಲ್ಲುತ್ತೇವೆ ಎಂದು ಕಾರ್ಯಾಚರಣೆಗೆ ಇಳಿದಿದೆ.
In a tragic incident an 8 year old youth was killed after a tiger attacked him in Madikeri.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm