ಬ್ರೇಕಿಂಗ್ ನ್ಯೂಸ್
23-02-21 11:40 am Headline Karnataka News Network ಕರ್ನಾಟಕ
ಕಾರವಾರ, ಫೆ.23: ಪಂಚಮಸಾಲಿಗಳ ಒತ್ತಡಕ್ಕೆ ಮಣಿದು ಸರಕಾರ ಮೀಸಲಾತಿ ನೀಡಿದಲ್ಲಿ ಪರಿಣಾಮ ನೆಟ್ಟಗಿರಲ್ಲ. ಅದರ ವಿರುದ್ಧ ನಾನೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಸರ್ಕಾರದ ವಿರುದ್ಧ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಗುಡುಗಿದ್ದಾರೆ.
ಭಟ್ಕಳದಲ್ಲಿ ಪಂಚಮಸಾಲಿ ಮೀಸಲಾತಿ ಆಗ್ರಹ ವಿರೋಧಿಸಿ ಉಜಿರೆ ಶ್ರೀರಾಮ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆದಿದ್ದು ರಾಜಕಾರಣಿಗಳ ರಾಜಕೀಯ ಲೇಪಿತ ಹೋರಾಟದ ಬಗ್ಗೆ ಕಿಡಿಕಾರಿದ್ದಾರೆ.
ಸಿಎಂ ಯಡಿಯೂರಪ್ಪ ತುಂಬಾ ಒಳ್ಳೆಯವರು. ಅವರನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರಕಾರದ ಹಿರಿಯ ಮಂತ್ರಿಗಳೇ ಮಾಡುತ್ತಿದ್ದಾರೆ. ಪ್ರಬಲ ಸಮುದಾಯದ ಮಂತ್ರಿಗಳು ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. ಸಿಎಂ ಅವರನ್ನ ನಿದ್ರೆ ಮಾಡದಂತೆ ಮಾಡಿದ್ದಾರೆ. ಹಾಗೆಂದು ಬ್ರಹ್ಮಾನಂದ ಯಾವುದೇ ಜಾತಿಯ ಪರವಾಗಿ ಈ ಸಮಾವೇಶಕ್ಕೆ ಬಂದಿಲ್ಲ. 360 ಹಿಂದುಳಿದ ವರ್ಗದ ಜಾತಿಗಳ ಕಣ್ಣೀರು ಒರೆಸುವ ಉದ್ದೇಶದಿಂದ ವೇದಿಕೆಯಲ್ಲಿ ಬಂದು ಕುಳಿತಿದ್ದೇನೆ ಎಂದು ಹೇಳಿದರು.

ಜಾತಿಯ ಬಲವಿದೆ ಎಂದು ರಾಜ್ಯ ಸರ್ಕಾರ ದುಡುಕಿದ್ರೆ ಅದರ ಪರಿಣಾಮ ಚೆನ್ನಾಗಿರಲ್ಲ. ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಪಾಂಡವರು ಗೆದ್ದಿದ್ದನ್ನ ಸರ್ಕಾರ ನೆನಪಿಡಲಿ. ದುರ್ಬಲ, ಹಿಂದುಳಿದವರು ಓಟಿನ ಮೂಲಕ ಮೇಲ್ವರ್ಗದವರಿಗೆ ಲಾಠಿ ಕೊಟ್ಟು ಬಡಿಸಿಕೊಳ್ಳುತ್ತಿದ್ದೀರಿ. 2- 3 ಶೇ. ಇರೋ ಮೇಲ್ವರ್ಗದ ನಾಯಕರು ಬುದ್ಧಿವಂತಿಕೆಯಿಂದ ನಿಮ್ಮ ಬೆನ್ನು ಸವರಿ ಮತ್ತೆ ಮೇಲೆ ಸವಾರಿ ಮಾಡ್ತಿದ್ದಾರೆ. ಇದು ತುಂಬಾ ಬೇಸರ ತರುವ ವಿಷಯವಾಗಿದೆ. ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಸವಾಲು ಹಾಕ್ತಿದ್ದೇನೆ, ನಿಮಗೆ ಅಧಿಕಾರ ಕೊಟ್ಟವರ್ಯಾರು ? ಸಂವಿಧಾನ ಅಂದ್ರೆ ಅಜ್ಜನಿಂದ ವಂಶ ಪಾರಂಪರ್ಯವಾಗಿ ಬಂದ ಆಸ್ತಿಯಲ್ಲ, ನಿಮಗೆ ಪಾಲು ಮಾಡಿ ಕೊಡಲು. ಪಂಚಮಸಾಲಿಗಳನ್ನ 2ಎ ವಿಭಾಗಕ್ಕೆ ಸೇರಿಸಿದ್ದೆ ಆದಲ್ಲಿ ನಾನೇ ಸುಪ್ರೀಮ್ ಕೋರ್ಟ್ ಮೆಟ್ಟಿಲು ಏರುತ್ತೇನೆ ಎಂದ ಬ್ರಹ್ಮಾನಂದ ಸ್ವಾಮೀಜಿ ಗುಡುಗಿದ್ದಾರೆ.
Kawar Panchamasali Seer warms cm demanding reservations for the community and its inclusion under the Category 2A in the state quota, warning that if the BS Yediyurappa-led government fails to do so they will have to see a big consequences.
17-03-26 12:09 pm
HK News Staffer
ಮಂಜೇಶ್ವರ ಮತಕ್ಷೇತ್ರ ; ಎಕೆಎಂ ಅಶ್ರಫ್ ವಿರುದ್ಧ ಮತ್...
16-03-26 05:52 pm
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
17-03-26 03:06 pm
HK News Staffer
Inspector Sandesh, Mangalore: ಮೂಡುಬಿದ್ರೆ ಇನ್ಸ...
17-03-26 01:55 pm
ಮಂಗಳೂರು ಜೈಲಿನಲ್ಲಿ ಕೈದಿಗಳ ದಾಂಧಲೆ ; ಜೈಲು ಅಧೀಕ್ಷ...
17-03-26 01:40 pm
Mangalore, Bendorewell Humps: ಹಂಪ್ಸ್ ಏನೋ ಹಾಕಿ...
16-03-26 09:48 pm
Moodbidri Inspector Sandesh, Police: ಮೂಡುಬಿದ್...
16-03-26 07:20 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am