ಬ್ರೇಕಿಂಗ್ ನ್ಯೂಸ್
21-02-21 03:50 pm Headline Karnataka News Network ಕರ್ನಾಟಕ
ಬೆಂಗಳೂರು, ಫೆ.21: ಕರ್ನಾಟಕದ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತದಲ್ಲಿ ಅವ್ಯವಹಾರ, ಒಟ್ಟು ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅದರ ಎಲ್ಲ ರೀತಿಯ ವಹಿವಾಟುಗಳನ್ನು ನಿರ್ಬಂಧಿಸಿ ಆರ್ ಬಿಐ ಆದೇಶ ಹೊರಡಿಸಿದೆ. ಇದರಿಂದ ಯಾವುದೇ ರೀತಿಯ ಹೊಸ ಸಾಲ ನೀಡುವಂತಿಲ್ಲ ಹಾಗು ಡಿಪಾಸಿಟ್ ಹಣವನ್ನೂ ಪಡೆಯುವ ಹಾಗಿಲ್ಲ.
ಈ ನಡುವೆ, ಇನ್ನು ಆರು ತಿಂಗಳ ಅವಧಿಯಲ್ಲಿ ಗ್ರಾಹಕರು ಕೇವಲ ರೂ.1000 ಮಾತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಈ ಆರು ತಿಂಗಳಲ್ಲಿ ಗ್ರಾಹಕರ ಹಣಕ್ಕೆ ಸಂಪೂರ್ಣ ಬಡ್ಡಿ ಪಾವತಿಸಲಾಗುವುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಗ್ರಾಹಕರು ತಮ್ಮ ಸಾಲ ತೀರಿಸಲು ಬ್ಯಾಂಕ್ ನಲ್ಲಿರುವ ಹಣವನ್ನು ಬಳಕೆ ಮಾಡಬಹುದು ಎಂದು RBI ಹೇಳಿದೆ. ಆದರೆ ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.

ಗ್ರಾಹಕರು ಆತಂಕ ಪಡಬೇಕಿಲ್ಲ
ಡೆಕ್ಕನ್ ಸಹಕಾರಿ ಬ್ಯಾಂಕಿನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂದರೆ ಫೆಬ್ರುವರಿ 19, 2021 ರಿಂದ ಮುಂದಿನ ಆರು ತಿಂಗಳ ಕಾಲ ಎಲ್ಲ ರೀತಿಯ ವ್ಯವಹಾರಗಳಿಗೆ ತಡೆ ಇರಲಿದೆ. ಆದರೆ ಈ ತಡೆಯ ಅರ್ಥ ಬ್ಯಾಂಕಿನ ಲೈಸನ್ಸ್ ರದ್ದುಗೊಳಿಸಲಾಗಿದೆ ಎಂದು ಭಾವಿಸಬಾರದು ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ. ನಿರ್ಬಂಧಗಳನ್ನು ಪಾಲಿಸಿ ಬ್ಯಾಂಕ್ ಎಂದಿನಂತೆ ತನ್ನ ಕೆಲಸ ಮುಂದುವರೆಸಲಿದೆ. ಈ ಆರು ತಿಂಗಳ ನಿರ್ಬಂಧ ಬಳಿಕ ಪುನಃ ಬ್ಯಾಂಕ್ ಸಮೀಕ್ಷೆ ನಡೆಸಲಾಗುವುದು. ಆದರೆ, ಕೆಲಸದ ಮೇಲಿನ ಬ್ಯಾನ್ ಹೊರತಾಗಿಯೂ ಶೇ.99 ರಷ್ಟು ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು RBI ಹೇಳಿದೆ.
ಇದೆ ವೇಳೆ ಗ್ರಾಹಕರಿಗೆ 'ಉಳಿತಾಯ ವಿಮಾ ಹಾಗೂ ಸಾಲ ಗ್ಯಾರಂಟಿ ನಿಗಮ'ದ ವತಿಯಿಂದ ಉಳಿತಾಯದ ಮೇಲೆ ಸಿಗುವ ವಿಮಾ ಲಾಭ ನೀಡಲಾಗುವುದು. ಈ ವಿಮೆಯ ಅಡಿ ಬ್ಯಾಂಕ್ ನಲ್ಲಿ ಗ್ರಾಹಕರು ಮಾಡಿರುವ ಉಳಿತಾಯದ ಮೇಲೆ 5 ಲಕ್ಷ ರೂ.ವಿಮಾ ಕವರೇಜ್ ಸಿಗಲಿದೆ.
The Reserve Bank of India (RBI) has imposed a withdrawal cap of Rs 1,000 on customers of the Deccan Urban Co-operative Bank and has barred the lender from granting new loans or accepting deposits due to its liquidity position.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm