ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲೇನು ಕೆಲಸ..? ಅಕ್ರಮ ವಲಸಿಗರಿಗೆ ಮನೆ ನಿರ್ಮಿಸಿಕೊಟ್ಟರೆ ಉಳಿದವರ ಗತಿಯೇನು? ಸಿದ್ದರಾಮಯ್ಯ ಸರ್ಕಾರ ಬಾಂಗ್ಲಾ ವಲಸಿಗರು, ರೋಹಿಂಗ್ಯಾಗಳಿಗೆ ಮನೆ ಮಾಡಿಕೊಡ್ತಿದ್ಯಾ..?

30-12-25 05:10 pm       Bangalore Correspondent   ಕರ್ನಾಟಕ

ಕೇರಳದಲ್ಲಿ ಚುನಾವಣೆ ಕಾವೇರುತ್ತಿದ್ದರೆ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಮನೆ ನಿರ್ಮಿಸಿಕೊಡುತ್ತೇವೆ ಎನ್ನಲು ಅವರು ಯಾರು, ವಿಳಾಸವೇ ಇಲ್ಲದ ಬಾಂಗ್ಲಾ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಕಾಂಗ್ರೆಸ್ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆಯೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು, ಡಿ.30 : ಕೇರಳದಲ್ಲಿ ಚುನಾವಣೆ ಕಾವೇರುತ್ತಿದ್ದರೆ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಮನೆ ನಿರ್ಮಿಸಿಕೊಡುತ್ತೇವೆ ಎನ್ನಲು ಅವರು ಯಾರು, ವಿಳಾಸವೇ ಇಲ್ಲದ ಬಾಂಗ್ಲಾ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಕಾಂಗ್ರೆಸ್ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆಯೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 167 ಮನೆಗಳನ್ನು ಸರ್ಕಾರ ತೆರವುಗೊಳಿಸಿದ್ದು, ಇದರ ನೆಪದಲ್ಲಿ ಕೇರಳದ ಎಡರಂಗ ಸರ್ಕಾರ ರಾಜಕೀಯ ಮಾಡಲು ಮುಂದಾಗಿದೆ. ಅಲ್ಲಿನ ಸಚಿವರು ಮೊಸಳೆ ಕಣ್ಣೀರು ಸುರಿಸಿ ಮುಸ್ಲಿಮರ ಪ್ರೀತಿ ಗಿಟ್ಟಿಸಲು ಮುಂದಾಗಿದ್ದಾರೆ. ಕಾಂಗ್ರೆಸಿನ ಕೆ.ಸಿ.ವೇಣುಗೋಪಾಲ್ ಕೇರಳದ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹುಕುಂ ಜಾರಿಗೊಳಿಸುತ್ತಾರೆ. ಅವರ ಅಣತಿಯಂತೆ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಕೆಲಸ ಮಾಡುತ್ತಾರೆ ಅಂದ್ರೆ, ರಾಜ್ಯದ ಏಳು ಕೋಟಿ ಜನರು ಕೊಟ್ಟ ಸಾಂವಿಧಾನಿಕ ಶಕ್ತಿ ಇಲ್ಲವೇ, ಇನ್ಯಾರದ್ದೋ ಮಾತು ಕೇಳಿ ಅಧಿಕಾರ ನಡೆಸಬೇಕಾದ ಅಗತ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

Because polls are coming in Kerala': Siddaramaiah slams Pinarayi Vijayan  for criticising Kogilu eviction drive | Bangalore News - The Indian Express

ಕೋಗಿಲು ಬಡಾವಣೆ, ಫಕೀರ್ ಬಡಾವಣೆಯಲ್ಲಿ ಕಟ್ಟಿಕೊಂಡಿದ್ದ ಅಕ್ರಮ ವಲಸಿಗರ 167 ಗುಡಿಸಲುಗಳನ್ನು ತೆರವುಗೊಳಿಸಿದ್ದು ಉತ್ತಮ ಕೆಲಸ. ಅಧಿಕಾರಿಗಳ ಕ್ರಮವನ್ನು ಶ್ಲಾಘಿಸುವುದು ಬಿಟ್ಟು ಮೊಸಳೆ ಕಣ್ಣೀರು ಹಾಕಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ಇಲ್ಲಿ ಕಣ್ಣೀರು ಹಾಕಿದರೆ ಕೇರಳದಲ್ಲಿ ಲಾಭ ಪಡೆಯಬಹುದು ಅನ್ನುವ ಹುನ್ನಾರ ಇದರ ಹಿಂದಿದೆ. ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಳ, ಅಕ್ರಮವಾಗಿ ಬಾಂಗ್ಲಾದಿಂದ ವಲಸೆ ಬಂದು ಉಳಿದುಕೊಂಡವರು. ಫಕೀರ್ ಬಡಾವಣೆ, ಹೆಬ್ಬಾಳದ ಅಮೀನ್ ಕೆರೆಯಲ್ಲಿ ವಾಸ ಮಾಡುವವರು ಯಾರೆಂದು ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದೇನೆ. ಅದರಂತೆ, ಅಧಿಕಾರಿಗಳು ಅಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ದೆಹಲಿ ನಾಯಕರ ಒತ್ತಡಕ್ಕೆ ಮಣಿದು ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಕ್ರಮವಾಗಿ ಕುಳಿತವರಿಗೆ ಹೇಗೆ ಮನೆ ನಿರ್ಮಿಸಿಕೊಡುತ್ತಾರೆ. ಅವರು ಅರ್ಜಿ ಸಲ್ಲಿಸಿದ್ದಾರೆಯೇ.. ವಿಳಾಸ ದಾಖಲೆ ಹೊಂದಿದ್ದಾರೆಯೇ.. ಹಾಗಾದರೆ ಈಗಾಗಲೇ ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರ ಗತಿಯೇನು ಎಂದು ಶೋಭಾ ಪ್ರಶ್ನೆ ಎತ್ತಿದ್ದಾರೆ.

ಹಲವು ಕಡೆಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ವಲಸಿಗರು ನೆಲೆಸಿದ್ದಾರೆ, ಅವರ ಬಗ್ಗೆ ಸರ್ಕಾರದಲ್ಲಿ ಮಾಹಿತಿ ಇದೆಯೇ, ಪೊಲೀಸ್ ಇಲಾಖೆಯಲ್ಲಿ ಇಂಥ ಅಕ್ರಮ ವಲಸಿಗರ ಪಟ್ಟಿ ಇದೆಯೇ. ಅಕ್ರಮ ಬಾಂಗ್ಲಾ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟರೆ ಬೆಂಗಳೂರಿನ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ ಸಚಿವೆ ಶೋಭಾ, ನೀವೇ ಅವರಿಗೆ ಮನೆ ಕೊಟ್ಟು ಸರ್ಟಿಫಿಕೇಟ್ ಕೊಟ್ಟು ಖಾಯಂ ಮಾಡುತ್ತಿದ್ದೀರಾ.. ಇವರ ಎಲ್ಲ ರೀತಿಯ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಮತ್ತು ಅವರು ಎಲ್ಲಿಂದ ಬಂದಿದ್ದಾರೆ ಎಂದು ತನಿಖೆ ನಡೆಸಬೇಕು. ರಾಜ್ಯಾದ್ಯಂತ ಅಕ್ರಮ ವಲಸಿಗರ ಪತ್ತೆಗಾಗಿ ಮತದಾರ ಪಟ್ಟಿಯ ಶೀಘ್ರ ಪರಿಷ್ಕರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Union Minister Shobha Karandlaje has criticized Kerala Chief Minister Pinarayi Vijayan, questioning why he is involving himself in Karnataka’s politics when elections are heating up in Kerala. She accused the Kerala CM of exerting pressure on the Karnataka government for political mileage and asked whether the Siddaramaiah-led administration was planning to build houses for undocumented Bangladeshi immigrants and Rohingyas.