ಬ್ರೇಕಿಂಗ್ ನ್ಯೂಸ್
27-11-25 08:14 pm HK News Desk ಕರ್ನಾಟಕ
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಹತ್ತಿರ ಬಂತಂದ್ರೆ ವಿದ್ಯಾರ್ಥಿಗಳಲ್ಲಿ ಅದೇನೋ ಆತಂಕ. ದಿನವಿಡೀ ಓದುವುದು, ಕೋಚಿಂಗ್ ಪಡೆಯುವುದು, ತಲೆಬಿಸಿಯನ್ನೂ ಮಾಡಿಕೊಳ್ಳುತ್ತಾರೆ. ಆದರೆ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ನಿರಂತರ ಓದಿನ ಬದಲು ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲು ಎಐ ವೇದಿಕೆ ಸೃಷ್ಟಿಸಿದೆ. ವಿಶ್ವದ ಮೊದಲ ಎಐ ಕಾರ್ಡ್ ಅಭಿವೃದ್ಧಿ ಪಡಿಸಿರುವ ಯತಿಕಾರ್ಪ್ ಸಂಸ್ಥೆಯು ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗಾಗಿಯೇ ವಿನೂತನ ಎಐ ಶಿಕ್ಷಕ್ ಎನ್ನುವ ಪ್ಲಾಟ್ ಫಾರ್ಮ್ ಒಂದನ್ನು ಪರಿಚಯಿಸಿದೆ.
ಎನ್ಸಿಇಆರ್ಟಿ ಪಠ್ಯಕ್ರಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ತಯಾರಿಸಿದ ಪ್ಲಾಟ್ ಫಾರ್ಮ್ ಇದಾಗಿದ್ದು ಶಿಕ್ಷಕರು, ಪೋಷಕರು ನಿರಾತಂಕವಾಗಿ 'ಎಐ ಶಿಕ್ಷಕ್' ಕಾರ್ಡ್ ಗಿಫ್ಟ್ ನೀಡಿ ಪ್ರೋತ್ಸಾಹಿಸಬಹುದು. ಇಂಗ್ಲಿಷ್, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಕಲಿಕೆಯ ಸೌಲಭ್ಯವಿದ್ದು ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕೆಯ ವೇಗಕ್ಕೆ ತಕ್ಕಂತೆ ಈ ಎಐ ಕಾರ್ಡ್ ಸ್ಪಂದಿಸಲಿದೆ.


ಉತ್ತಮ ಭವಿಷ್ಯದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆಯಲು ಎಐ ಶಿಕ್ಷಕ್ ಅತ್ಯುತ್ತಮ ವೇದಿಕೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡದ ನಡುವೆ ಯಾವುದೇ ರೀತಿಯ ಸ್ಟಡಿ ಮೆಟೀರಿಯಲ್ಸ್ ಗಳನ್ನು ಕ್ಷಣ ಮಾತ್ರದಲ್ಲಿ ಎತ್ತಿ ಕೊಡುವುದರಿಂದ ಈ ಎಐ ಪ್ಲಾಟ್ ಫಾರ್ಮ್ ಸಮಯ ಮತ್ತು ಒತ್ತಡವನ್ನು ಕಡಿಮೆ ಮಾಡಲಿದೆ. ಇದಲ್ಲದೆ, ಸಾಮಾನ್ಯ ಸರ್ಚ್ ಎಂಜಿನ್ಗಳಲ್ಲಿ ಕಂಡುಬರುವ ತಪ್ಪು ಮಾಹಿತಿ ಮತ್ತು ಗೊಂದಲಗಳು ಇಲ್ಲಿ ಇರುವುದಿಲ್ಲ. ಯಾಕೆಂದರೆ ಇದು ಯಾವುದೇ ಪ್ರಶ್ನೆಗೂ ಸ್ಪಷ್ಟ ಮತ್ತು ನಿಖರ ಉತ್ತರವನ್ನಷ್ಟೆ ನೀಡುತ್ತದೆ.
ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ತಂತ್ರಜ್ಞಾನ ವಿದ್ಯಾರ್ಥಿಗಳನ್ನು ಕ್ರಮಬದ್ಧವಾಗಿ ಕಲಿಯಲು ಪ್ರೇರಣೆ ನೀಡುತ್ತದೆ. ಪ್ರತಿ ವಿಷಯವನ್ನು ಪುನರಾವರ್ತಿಸುವುದು ಸೇರಿದಂತೆ ಒತ್ತಡವಿಲ್ಲದೆ ಪಠ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಎಐ ಆಧರಿತ ಈ ಸಂಯೋಜಿತ ಅಧ್ಯಯನ ವಿಧಾನವು ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳನ್ನು ಗಳಿಸಲು ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳ ಸಂದೇಹ ನಿವಾರಣೆಗೆ, ಬೆಳಗ್ಗೆ, ಮುಂಜಾನೆ, ತಡರಾತ್ರಿ ಎನ್ನುವ ಸಮಯದ ಮಿತಿ ಇಲ್ಲದೆ 24 ಗಂಟೆಯೂ ಎಐ ಶಿಕ್ಷಕ್ ಒಬ್ಬ ಬುದ್ಧಿವಂತ ಗುರುವಾಗಿ ಕೆಲಸ ಮಾಡಲಿದೆ. ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಯಾವುದೇ ಪ್ರಶ್ನೆ ಮೂಡಿದರೂ, ತಕ್ಷಣ ಪರಿಹಾರ ದೊರಕಿಸಲು ಎಐ ಕಾರ್ಡ್ ಸಹಾಯ ಮಾಡುತ್ತದೆ.
ಜಟಿಲ ಪ್ರಶ್ನೆಗಳಿಗೆ ಸರಳ ಉತ್ತರ
ವಿದ್ಯಾರ್ಥಿಗಳು ಕೇಳುವ ಜಟಿಲ ಪ್ರಶ್ನೆಗಳಿಗೆ ಕೆಲವೊಮ್ಮೆ ಶಿಕ್ಷಕರಲ್ಲೂ ಸಮರ್ಪಕ ಉತ್ತರ ಇರುವುದಿಲ್ಲ. ಆದರೆ ಶಿಕ್ಷಕರು ಲಭ್ಯರಿಲ್ಲದ ಸಂದರ್ಭದಲ್ಲು ಎಐ ಶಿಕ್ಷಕ್ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರ ರೂಪದಲ್ಲಿ ಉತ್ತರ ನೀಡುತ್ತದೆ. ಪರಿಣತ ತಜ್ಞರಿಂದಲೇ ಎಐ ಶಿಕ್ಷಕ್ ಎನ್ನುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್ ಮತ್ತು ಕನ್ನಡ ಎರಡು ಮಾಧ್ಯಮದಲ್ಲೂ ವಿನ್ಯಾಸಗೊಳಿಸಲಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಸೇರಿ ಎಲ್ಲ ವಿಷಯಗಳ ಪಠ್ಯಕ್ರಮಗಳು, ಪ್ರಶ್ನೆ-ಉತ್ತರಗಳು, ಯಾವುದೇ ಸಂದೇಹಗಳಿಗೂ ತಕ್ಕ ಉತ್ತರಗಳು ಒಳಗೊಂಡಿರುತ್ತವೆ.
ಎಐ ಶಿಕ್ಷಕ್ ನೋಂದಣಿ ಹೇಗೆ ?
10ನೇ ತರಗತಿಯ ಎಲ್ಲ ವಿಷಯಗಳಿಗೆ ಕೇವಲ ರೂ. 888 ಹಾಗೂ ವಿಜ್ಞಾನ ವಿಭಾಗದ ಪಿಯು ವಿದ್ಯಾರ್ಥಿಗಳಿಗೆ 999 ರೂ. ಶುಲ್ಕ ಇರುತ್ತದೆ. ಆಸಕ್ತ ವಿದ್ಯಾರ್ಥಿಗಳು ಅಥವಾ ಪೋಷಕರು ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಅಥವಾ ವಾಟ್ಸಾಪ್ ಸಂಖ್ಯೆ 9535440195, 9608977982 ಗೆ ಸಂದೇಶ ಕಳುಹಿಸಿ ನೋಂದಣಿ ಮಾಡಬಹುದು. ಶಿಕ್ಷಣ ಸಂಸ್ಥೆ, ಕೋಚಿಂಗ್ ಸೆಂಟರ್ ಗಳಿಗೂ ಎಐ ಶಿಕ್ಷಕ್ ಅತ್ಯುತ್ತಮ ಮಾರ್ಗದರ್ಶಿಯಾಗಿದ್ದು, ಈ ವೇದಿಕೆಯನ್ನು ರಿಯಾಯಿತಿ ದರದಲ್ಲಿ ಬಳಸಿಕೊಳ್ಳಲು ದೂರವಾಣಿ ಸಂಖ್ಯೆ 9606977991 ಸಂಪರ್ಕಿಸಬಹುದು.
As SSLC and PUC exams approach, many students feel stressed and overwhelmed with long study hours and coaching classes. To support students, Yathicarp has launched AI Shikshak, a unique AI-powered learning platform designed according to the NCERT syllabus.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 02:44 pm
HK News Staffer
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾಕ್ಕೆ ;...
15-03-26 05:37 pm
ಎಪ್ರಿಲ್ 9 ಮತ್ತು 23 ; ಕೇರಳ, ತಮಿಳುನಾಡಿನಲ್ಲಿ ಒಂದ...
15-03-26 05:08 pm
16-03-26 07:20 pm
HK News Staffer
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am