ಬ್ರೇಕಿಂಗ್ ನ್ಯೂಸ್
 
            
                        31-10-25 08:10 pm HK News Desk ಕರ್ನಾಟಕ
 
            ಕಲಬುರಗಿ, ಅ.31 : ಆರೆಸ್ಸೆಸ್ ನವರು ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ನಾನು ಎಲ್ಲೂ ಆರೆಸ್ಸೆಸ್ ಬ್ಯಾನ್ ಮಾಡುವಂತೆ ಹೇಳಿಲ್ಲ. ಆದರೆ ಆರೆಸ್ಸೆಸ್, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅವರು ತಮ್ಮ ಪಥಸಂಚಲನಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಓದಲು ಬರ್ತಾರೆ, ಇವರು ಪಥಸಂಚಲನಕ್ಕೆ ಬನ್ನಿ ಅಂತಾರೆ. ಇದೆಲ್ಲ ಸರಿಯಲ್ಲ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನಾವು ಯಾವುದೇ ಪ್ರತಿಭಟನೆ ಮಾಡಬೇಕಾದ್ರೆ ಪರವಾನಿಗೆ ಪಡೆಯುತ್ತೇವೆ. ಆದ್ರೆ ಅವರು ಪರವಾನಿಗೆ ಕೇಳದೇ ಮಾಹಿತಿಗಾಗಿ ಅಂತ ಕೇಳ್ತಾರೆ. ಪಥಸಂಚಲನಕ್ಕೆ ಅಧಿಕಾರಿಗಳ ಬಳಿ ಪರವಾನಿಗೆ ಕೇಳಿಲ್ಲ. ನಾನು ಪತ್ರ ಬರೆದಿದ್ದೇನೆ ಅಂತ ನಮ್ಮ ಮೇಲೆ ಮುಗಿಬಿದ್ದಿದ್ದಾರೆ.
ಆರೆಸ್ಸೆಸ್ ರಿಜಿಸ್ಟರ್ ಇಲ್ಲದ ಸಂಘವಾಗಿದೆ. ಯಾವುದೇ ಪಕ್ಷಕ್ಕೆ ಸೀಮಿತ ಇಲ್ಲ ಅಂತಾರೆ. ಆದರೆ ಬಿಜೆಪಿಯವರು ಯಾಕೆ ಅವರ ಪರ ವಹಿಸುತ್ತಾರೆ. ಆರೆಸ್ಸೆಸ್ ಬಗ್ಗೆ ಮಾತಾಡಿದರೆ ನನಗೆ ದೇಶ ವಿದೇಶದಿಂದ ಫೋನ್ ಮಾಡಿ ಬೈದಿದ್ದಾರೆ. ನನಗೆ, ನಮ್ಮ ಕುಟುಂಬಕ್ಕೆ ಬೈದಿದ್ದಾರೆ, ಯಾರಾದ್ರೂ ಅದನ್ನ ಖಂಡಿಸಿದ್ರಾ?
ಮಾಹಿತಿ ಅಷ್ಟೇ ಕೊಡೋದಾದ್ರೆ ನಾವು ಅವರಿಗೆ ಯಾಕೆ ಅವರಿಗೆ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡಿ ಅಂತ ಕೇಳಿದ್ರೆ ನಮ್ಮ ಅಧಿಕಾರಿಗಳು ಅವರಿಗೆ ಕೊಡ್ತಾ ಇದ್ರು. ಲಾಠಿ ಬೀಸಿಕೊಂಡು ಹೋದ್ರೆ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಅಂತ ಮತ್ತೊಂದು ಸಂಘಟನೆಯವರು ಕೊಡಬೇಡಿ ಅಂತ ಹೇಳಿದ್ದಾರೆ. ಹಾಗಾಗಿ ಆಕ್ಷೇಪ ಬಂದಿರುವುದರಿಂದ ಕೊಟ್ಟಿಲ್ಲ. ಈಗ ವಿಷಯ ಹೈಕೋರ್ಟ್ ನಲ್ಲಿದೆ, ಕೋರ್ಟ್ ಏನು ಹೇಳುತ್ತೋ ಅದನ್ನು ಪಾಲಿಸುತ್ತೇವೆ ಎಂದರು.
ಬೇರೆ ನಾಯಕರ ಐಡಿಯಾಲಜಿ ಬಗ್ಗೆ ಮಾತನಾಡಲ್ಲ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಖರ್ಗೆ, ಸಿದ್ದರಾಮಯ್ಯನವರ ಐಡಿಯಾಲಜಿ ಫಾಲೋ ಮಾಡುತ್ತೇನೆ. ಅದು ಸಾಕು ನಂಗೆ ಎಂದು ಹೇಳಿದ ಪ್ರಿಯಾಂಕ ಖರ್ಗೆ, ಪಥಸಂಚಲನಕ್ಕೆ ಅರ್ಜಿ ಹಾಕಿದ್ದ ಆರ್ಎಸ್ಎಸ್ ಮುಖಂಡ ಯಾಕೆ ಶಾಂತಿ ಸಭೆಗೆ ಹೋಗಲಿಲ್ಲ. ತನ್ನ ಬದಲು ಬಿಜೆಪಿ ಮುಖಂಡರನ್ನ ಶಾಂತಿ ಸಭೆಗೆ ಯಾಕೆ ಕಳುಹಿಸಿದ್ರು. ಅಶಾಂತಿ ಮೂಡಿಸೋಕೆ ಬಿಜೆಪಿ ಮುಖಂಡರು ಹೋಗಿದ್ರಾ..? ಎಂದು ಪ್ರಶ್ನಿಸಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾಲ್ಕೈದು ಜನರಿಗೆ ಮಾತ್ರ ಗೊತ್ತಿದೆ. ಅದು ಬಿಟ್ಟು ನೀವು ಎಲ್ಲರನ್ನೂ ಕೇಳ್ತಿದ್ದೀರಾ? ಎಂದು ಸಚಿವ ಸಂಪುಟ ವಿಸ್ತರಣೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಖರ್ಗೆ ಕಟಕಿಯಾಡಿದರು.
 
            
            
            Minister Priyank Kharge has alleged that the RSS has turned conducting a path sanchalan (march) in his constituency into a matter of prestige and is now personally targeting him.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm