ಬ್ರೇಕಿಂಗ್ ನ್ಯೂಸ್
30-10-25 07:25 pm Bangalore Correspondent ಕರ್ನಾಟಕ
ಬೆಂಗಳೂರು, ಅ.30 : ನವೆಂಬರ್ 1ರಂದು ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 70 ಮಂದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಿದೆ.
ಸಾಹಿತ್ಯ ಕ್ಷೇತ್ರದಲ್ಲಿ ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ತುಂಬಾಡಿ ರಾಮಯ್ಯ, ಆರ್.ಸುನಂದಮ್ಮ, ಡಾ.ಎಚ್.ಎಲ್ ಪುಷ್ಪ, ಸಿನಿಮಾ ಕ್ಷೇತ್ರದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್, ಹೊರನಾಟ ಕನ್ನಡಿಗ ಕ್ಷೇತ್ರದಲ್ಲಿ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಜಕರಿಯಾ ಜೋಕಟ್ಟೆ, ಪಿವಿ ಶೆಟ್ಟಿ ಮುಂಬೈ, ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಕೆ.ಸುಬ್ರಹ್ಮಣ್ಯ, ಅಂಶಿ ಪ್ರಸನ್ನ ಕುಮಾರ್, ಬಿ.ಎಂ.ಹನೀಫ್, ಎಂ.ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಗಿದೆ.


ಯಕ್ಷಗಾನ ಕ್ಷೇತ್ರದಲ್ಲಿ ಕೋಟ ಸುರೇಶ್ ಬಂಗೇರ, ಐರಬೈಲ್ ಆನಂದ ಶೆಟ್ಟಿ, ಕೃಷ್ಣ ಪರಮೇಶ್ವರ ಹೆಗಡೆ, ಬಯಲಾಟ ಕ್ಷೇತ್ರದಲ್ಲಿ ಗುಂಡೂರಾಜ್, ರಂಗಭೂಮಿ ಕ್ಷೇತ್ರದಲ್ಲಿ ಎಚ್.ಎಂ. ಪರಮಶಿವಯ್ಯ, ಎಲ್.ಬಿ ಶೇಖ್, ಬಂಗಾರಪ್ಪ ಖುದಾನ್ ಪುರ, ಮೈಮ್ ರಮೇಶ್, ರತ್ನಮ್ಮ ದೇಸಾಯಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಂ.ಆರ್ ಜಯರಾಂ, ಡಾ.ಎನ್.ಎಸ್ ರಾಮೇಗೌಡ, ಎಸ್.ಬಿ ಹೊಸಮನಿ, ನಾಗರಾಜು, ಕ್ರೀಡಾ ಕ್ಷೇತ್ರದಲ್ಲಿ ಅಶೀಶ್ ಕುಮಾರ್ ಬಲ್ಲಾಳ್, ಎಂ.ಯೋಗೇಂದ್ರ, ಡಾ.ಜುಬಿನಾ ಎನ್.ಎಂ, ಸಮಾಜಸೇವೆ ಕ್ಷೇತ್ರದಲ್ಲಿ ಸೂಲಗಿತ್ತಿ ಈರಮ್ಮ, ಕೋರಿನ್ ಆಂಟೊನಿಯಟ್ ರಸ್ಕಿನ್ನಾ, ಎನ್.ಸೀತಾರಾಮ ಶೆಟ್ಟಿ, ಕೋಣಂದೂರು ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇತರೇ ಸಂಕೀರ್ಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಮೇಶ್ ಪಂಬದ, ರವೀಂದ್ರ ಕೋರಿಶೆಟ್ಟರ್, ಕೆ.ದಿನೇಶ್, ಶಾಂತರಾಜು, ಜಾನಪದ ಕ್ಷೇತ್ರದಲ್ಲಿ ಬಸಪ್ಪ ಭರಮಪ್ಪ ಚೌಡಿ, ಬಿ.ಟಾಕಪ್ಪ ಕಣ್ಣೂರು, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಹನುಮಂತಪ್ಪ ಮಾರಪ್ಪ ಚೀಳಂಗಿ, ಎಂ. ತೋಪಣ್ಣ, ಸೋಮಪ್ಪ ದುಂಡಪ್ಪ ಧನಗೊಂಡ, ದಕ್ಷಿಣ ಕನ್ನಡ ಜಿಲ್ಲೆಯ ಸಿಂಧು ಗುಜರನ್, ಮೈಸೂರಿನ ಮಹದೇವಪ್ಪ ಉಡಿಗಾಲ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ಕರದಲ್ಲಿ ದೇವೇಂದ್ರ ಕುಮಾರ್ ಪತ್ತಾರ್, ಮಡಿವಾಳಯ್ಯ ಸಾಲಿ, ನೃತ್ಯ – ಪ್ರೊ.ಕೆ.ರಾಮಮೂರ್ತಿ ರಾವ್, ಆಡಳಿತ ವಿಭಾಗದಲ್ಲಿ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ, ವೈದ್ಯಕೀಯ- ಡಾ.ಆಲಮ್ಮ ಮಾರಣ್ಣ, ಡಾ.ಜಯ ರಂಗನಾಥ್, ಪರಿಸರ- ಮಲ್ಲಿಕಾರ್ಜುನ ನಿಂಗಪ್ಪ, ರಾಮೇಗೌಡ, ಕೃಷಿ – ಡಾ.ಎಸ್.ವಿ ಹಿತ್ತಲಮನಿ, ಎಂ.ಸಿ. ರಂಗಸ್ವಾಮಿ, ಸಹಕಾರ ಕ್ಷೇತ್ರದಲ್ಲಿ ಶೇಖರ ಗೌಡ ಮಾಲಿಪಾಟೀಲ್ ಆಯ್ಕೆಯಾಗಿದ್ದಾರೆ.
On the occasion of Karnataka Rajyotsava (November 1), the Department of Kannada and Culture has announced 70 eminent personalities from various fields for the prestigious State Rajyotsava Awards.
29-12-25 07:24 pm
Bangalore Correspondent
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 08:47 pm
Mangalore Correspondent
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
ಮಂಗಳೂರು ಕಂಬಳದಲ್ಲಿ ಹೊಸ ಇತಿಹಾಸ ; ಹುಸೇನ್ ಬೋಲ್ಟ್...
28-12-25 09:37 pm
29-12-25 03:02 pm
Mangalore Correspondent
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm