ಬ್ರೇಕಿಂಗ್ ನ್ಯೂಸ್
23-08-25 10:40 pm Bangalore Correspondent ಕರ್ನಾಟಕ
ಬೆಂಗಳೂರು, ಆ.23 : ಧರ್ಮಸ್ಥಳ ಪ್ರಕರಣದ ಕುರಿತು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಬಂಧಿಸಿ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಮಾಸ್ಕ್ ಮ್ಯಾನ್ ಒಬ್ಬ ಇಡೀ ಸರ್ಕಾರಿ ಯಂತ್ರವನ್ನು ಒಂದು ತಿಂಗಳ ಕಾಲ ಮೋಸಗೊಳಿಸಿದ್ದಾನೆ. ಸನಾತನ ಧರ್ಮದ ಕೇಂದ್ರ ಧರ್ಮಸ್ಥಳ ದೇಗುಲವನ್ನು ಅಪವಿತ್ರಗೊಳಿಸುವ ಪಿತೂರಿಯ ಭಾಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ್ದಲ್ಲ, ಆತನ ಹಿಂದೆ ದೊಡ್ಡ ವ್ಯವಸ್ಥೆಯೇ ಇದೆ. ಈಗ ಒಬ್ಬನ ಮುಖವಾಡ ಮಾತ್ರ ಬಯಲಾಗಿದ್ದು ದೊಡ್ಡ ಷಡ್ಯಂತ್ರದ ಅಸಲಿ ಮುಖ ಬಯಲಾಗಬೇಕಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
1994 ಮತ್ತು 2014 ರ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದರಿಂದ ಈ ವಿವಾದ ಉಂಟಾಗಿತ್ತು.
'ಒಬ್ಬ ಮುಖವಾಡ ಧರಿಸಿದ ವ್ಯಕ್ತಿ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕ ರಾಜ್ಯದ ಸಂಪೂರ್ಣ ಸರ್ಕಾರಿ ಯಂತ್ರವನ್ನು ಹಗುರವಾಗಿ ಬಳಸಿಕೊಂಡಿದ್ದಾನೆ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿಲ್ಲ, ಬದಲಾಗಿ ಬಹುದೊಡ್ಡ ಪಿತೂರಿಯ ಭಾಗವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಖವಾಡ ಧರಿಸಿದ ವ್ಯಕ್ತಿಯ ಆಧಾರರಹಿತ ಆರೋಪಗಳಿಗೆ ಪ್ರಾಥಮಿಕ ಪುರಾವೆಗಳಿಲ್ಲದೆಯೇ ಕಾನೂನುಬದ್ಧತೆಯನ್ನು ನೀಡಿದ್ದು ಮೂರ್ಖತನ.
ಹತಾಶೆಯ ಪ್ರತೀಕ ಎನ್ನುವಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದಲ್ಲದೆ, 13 ಸ್ಥಳಗಳಲ್ಲಿ ಶೋಧ ಆರಂಭಿಸಿ ಅವುಗಳನ್ನು ದೇಗುಲಕ್ಕೆ ಸಂಬಂಧಿಸಿದ "ಸಮಾಧಿ ಸ್ಥಳಗಳು" ಎಂದು ಬಿಂಬಿಸಿತು. ಅಲ್ಲಿನ ಒಂದು ಸ್ಥಳದಲ್ಲಿ ಮಾತ್ರ ಒಂದು ಅಸ್ಥಿಪಂಜರ ಪತ್ತೆ ಮಾಡಿದ್ದರು. ಇನ್ನೊಂದು ಸ್ಥಳದಲ್ಲಿ ಮೂಳೆಗಳು ಕಂಡುಬಂದಿದ್ದು ಅವು ಇತ್ತೀಚೆಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯದ್ದಾಗಿತ್ತು ಮತ್ತು ಮತ್ತೆ ಅದು ಪುರುಷನದ್ದೆಂದು ಕಂಡುಬಂದಿತ್ತು.
ಇದೆಲ್ಲದರ ನಡುವೆ ಈ ತನಿಖೆಯ ಸಮಯದಲ್ಲಿ, ಸುಜಾತಾ ಭಟ್ ಎಂಬ ಮಹಿಳೆ 2003ರಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿದರು. ನಂತರ ತನ್ನ ಮಗಳ ಅಸ್ತಿತ್ವವು ನಕಲಿ ಮತ್ತು ಕೆಲವು ವ್ಯಕ್ತಿಗಳು ಈ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಅವರೇ ಒಪ್ಪಿಕೊಂಡು ಇಡೀ ಪ್ರಕರಣಕ್ಕೆ ತಿರುವು ನೀಡಿದ್ದಾರೆ.
ಅಲ್ಲದೆ, 'ಈ ಮುಸುಕುಧಾರಿ ವ್ಯಕ್ತಿಯ ಬಂಧನವನ್ನು ಪ್ರಕರಣದ ಅಂತ್ಯವೆಂದು ನೋಡಲಾಗುವುದಿಲ್ಲ. ಅವನಿಗೆ ಯಾರು ಮಾರ್ಗದರ್ಶನ ನೀಡಿದರು? ಅವನಿಗೆ ಯಾರು ಹಣಕಾಸು ನೆರವು ಒದಗಿಸಿದರು? ಧರ್ಮಸ್ಥಳವನ್ನು ದೂಷಿಸುವುದರಿಂದ ಯಾರಿಗೆ ಲಾಭ? ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೇಳಬೇಕಾದ ಪ್ರಶ್ನೆಗಳಾಗಿವೆ. ಈ ಪಿತೂರಿಯ ನಿಜವಾದ ಸೂತ್ರಧಾರಿಗಳನ್ನು ಬಹಿರಂಗಪಡಿಸಬೇಕು ಮತ್ತು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.
Former Tamil Nadu BJP president K. Annamalai has lashed out at the Karnataka Congress government over the Dharmasthala case, accusing it of falling prey to a “larger conspiracy” aimed at maligning a sacred Hindu centre.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm