ಬ್ರೇಕಿಂಗ್ ನ್ಯೂಸ್
04-08-25 01:00 pm Bangalore Correspondent ಕರ್ನಾಟಕ
ಬೆಂಗಳೂರು, ಆ 04 : ಕೇವಲ 14 ವರ್ಷದ ಶಾಲಾ ಬಾಲಕ ಓರ್ವ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಕೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕನನ್ನ ಗಾಂದಾರ್ ಎಂದು ಗುರುತಿಸಲಾಗಿದೆ.
7ನೇ ತರಗತಿಯಲ್ಲಿ ಓದುತ್ತಿದ್ದ ಗಾಂದಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗಾಂದಾರ್ ತಂದೆ ಬೆಳಗ್ಗೆ ಎದ್ದು ಮಗನ ರೂಮಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಲ್ಲೇ ಇದ್ದ ಡೆತ್ನೋಟ್ ಕಂಡು ಆಘಾತಕ್ಕೊಳಗಾಗಿದ್ದಾರೆ. ಇನ್ನೂ ಗಾಂದಾರ್ ತಾಯಿ ಕೂಡ ಗಾಯಕಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಡೆತ್ ನೋಟಿನಲ್ಲಿ ಏನಿದೆ ;
"ಪ್ರೀತಿಯ ಕುಟುಂಬದವರೇ, ನಾನು ಈಗ ಸ್ವರ್ಗದಲ್ಲಿದ್ದೇನೆ. ಯಾರೂ ನನ್ನನ್ನು ತಪ್ಪಾಗಿ ಭಾವಿಸಬೇಡಿ. ನನಗೆ ನಿಮ್ಮ ನೋವು ಗೊತ್ತು. ನಾನು ಈ ಕೆಲಸ ಮಾಡಿಕೊಳ್ಳುವ ಕಾರಣ, ಈ ಮನೆ ಇನ್ನಷ್ಟು ಬೆಳಗಲಿ ಎಂಬ ಆಶಯ. ನನ್ನ ಉದ್ದೇಶ ಸಾವಾಗಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ಇದು ನನ್ನ ನಿರ್ಧಾರ. ನಾನು ಈ 14 ವರ್ಷ ಸಂತೋಷದಿಂದ ಕಳೆದಿದ್ದೇನೆ. ಮುಂದೆ ಕೂಡ ಸಂತೋಷವಾಗಿರುತ್ತೇನೆ, ನನ್ನ ಸ್ನೇಹಿತರಿಗೆ ಹೇಳಿ, ನಾನು ಖುಷಿಯಾಗಿದ್ದೇನೆ. ಗುಡ್ ಬಾಯ್ ಅಮ್ಮ..." ಎಂದು ಅಕ್ಷರಶಃ ಮನಕಲಕುವ ರೀತಿಯಲ್ಲಿ ಪತ್ರ ಬರೆದಿದ್ದಾನೆ.
ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ತಂದೆ ಗಣೇಶ್ ಪ್ರಸಾದ್, ಬೆಳಗ್ಗೆ ಮಗನ ಕೋಣೆಗೆ ಹೋದಾಗ ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಅವರು ಮಗನನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲಿ ಆತನ ಉಸಿರು ನಿಂತಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ತನಿಖೆ ಆರಂಭ ;
ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ. ಡೆತ್ ನೋಟ್ನ ಅರ್ಥವನ್ನು ಪರಿಶೀಲಿಸಲಾಗುತ್ತಿದೆ. ಮಗನ ಮೇಲೆ ಯಾರಾದರೂ ಒತ್ತಡ ಹಾಕಿದರಾ? ಅಥವಾ ಶಾಲೆಯೊಂದಿಗಿನ ಸಂಬಂಧಿತ ಕಾರಣ ಇದೆಯಾ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?
ಇನ್ನು ಬಾಲಕ ಆತ್ಮಹತ್ಯೆಗೆ ಯಾಕೆ ಶರಣಾದ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಕೆಲವು ಮೂಲಗಳ ಪ್ರಕಾರ ಆತ ತನ್ನ ಮನಸ್ಸಿನಲ್ಲಿ ಯಾವುದೋ ನೋವು ಹೊತ್ತುಕೊಂಡಿದ್ದ ಎಂದು ಶಂಕಿಸಲಾಗಿದೆ. ಸೋಶಿಯಲ್ ಮೀಡಿಯಾದ ಪ್ರಭಾವ, ಶೈಕ್ಷಣಿಕ ಒತ್ತಡ, ಅಥವಾ ವೈಯಕ್ತಿಕ ಸಮಸ್ಯೆಗಳಿಗೂ ಸಂಬಂಧವಿರಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
In a tragic incident, a 14-year-old schoolboy died by suicide at his home in the CK Achukattu area of Bengaluru. The deceased has been identified as Gandhar, a 7th-grade student.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 04:48 pm
VK Mangalore
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
MCC Bank Inaugurates 20th Branch in Byndoor,...
04-08-25 12:40 pm
New Witness, Dharmasthala Case, Jayan: ನನ್ನ ಕ...
02-08-25 10:51 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm