ಬ್ರೇಕಿಂಗ್ ನ್ಯೂಸ್
01-08-25 09:09 pm Bangalore Correspondent ಕರ್ನಾಟಕ
ಬೆಂಗಳೂರು, ಆ.1 : ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ರೀತಿಯಲ್ಲೇ ಧರ್ಮಸ್ಥಳ ಫೈಲ್ಸ್ ಹೆಸರಿನಲ್ಲಿ ಚಲನಚಿತ್ರ ಮಾಡಲು ರೆಡಿ ಮಾಡಿಕೊಳ್ಳಲಾಗಿದೆ. ಸುದ್ದಿ ವಾಹಿನಿ ಜೊತೆಗೆ ನಿರ್ಮಾಪಕ ಎ.ಗಣೇಶ್, ಧರ್ಮಸ್ಥಳ ಫೈಲ್ಸ್ ಸಿನಿಮಾ ತೆಗೆಯುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಮಾಡಲು ಫಿಲಂ ಚೇಂಬರ್ ನಿಂದ ಅನುಮತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
'ಧರ್ಮಸ್ಥಳ ಫೈಲ್ಸ್' ಹೆಸರಿನಲ್ಲಿ 20 ದಿನಗಳ ಹಿಂದೆಯೇ ಟೈಟಲ್ ಬುಕ್ ಮಾಡಿದ್ದೆವು. ಧರ್ಮಸ್ಥಳ ಫೈಲ್ಸ್ ಸಿನಿಮಾ ಮತ್ತು ವೆಬ್ ಸಿರೀಸ್ ಮಾಡೋಕೆ ಪ್ಲಾನ್ ಇದೆ. ಫಿಲಂ ಚೇಂಬರ್ ನಲ್ಲಿ ಈಗಾಗಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಚಿತ್ರದ ಕತೆ ಏನೆಂದು ಇನ್ನಷ್ಟೇ ಆಗಬೇಕಿದೆ. ಧರ್ಮಸ್ಥಳದಲ್ಲಿ ಆಗ್ತಿರೋ ಬೆಳವಣಿಗೆ ಆಧರಿಸಿ ಚಿತ್ರ ಮಾಡಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಬಳಿ ಪರ್ಮಿಶನ್ ಪಡೆದೇ ಚಿತ್ರ ಮಾಡುತ್ತೇವೆ. ವಾಸ್ತವ ವಿಚಾರ, ನೈಜತೆಯನ್ನು ಒಳಗೊಂಡು ಚಿತ್ರ ಕತೆ ಮಾಡುತ್ತೇವೆ ಎಂದು ಗಣೇಶ್ ಹೇಳಿದ್ದಾರೆ.
ಕಾನೂನು ತೊಡಕು ಉಂಟಾದ್ರೆ ಅದರ ಪ್ರಕ್ರಿಯೆ ಪಾಲಿಸಿಕೊಂಡು ಸಿನಿಮಾ ಮಾಡಲಾಗುವುದು. ವಿಕೆ ಪ್ರಕಾಶ್ ಎನ್ನುವ ಮಲಯಾಳಿ ನಿರ್ದೇಶಕರಿಂದ ಸಿನಿಮಾ ಮಾಡ್ಸೋ ಪ್ಲಾನ್ ಇದೆ. ಎಂ.ಎಸ್ ರಮೇಶ್ ಅವರಿಂದ ಚಿತ್ರದ ಕರೆ ತಯಾರು ಮಾಡ್ತಿದೇವೆ. ಶ್ರೀರಾಮ್ ಸೇರಿದಂತೆ ಹಲವು ಸಿನಿಮಾ ಮಾಡಿರೋ ನಿರ್ದೇಶಕರಿಂದ ಕಥೆ ತಯಾರಾಗ್ತಿದೆ. ಓಂ ಶ್ರೀ ಚಾಮುಂಡೇಶ್ವೇರಿ ಪ್ರೋಡಕ್ಷನ್ ಬ್ಯಾನರಿನಡಿ ಚಿತ್ರ ತಯಾರಾಗ್ತಿದೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿರುವುದು ದೇಶಾದ್ಯಂತ ಸಂಚಲನ ಎಬ್ಬಿಸಿದ್ದು ಧರ್ಮಸ್ಥಳ ಫೈಲ್ಸ್ ಎನ್ನುವ ಹಾಗೆ ಬಿಂಬಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಚಿತ್ರ ತಂಡವೊಂದು ಸಿನಿಮಾ ಮಾಡಲು ಹೊರಟಿದ್ದು ಟೈಟಲ್ ರಿಜಿಸ್ಟರ್ ಮಾಡಿಕೊಂಡಿದೆ. ಇದೀಗ ಕನ್ನಡದ ನಿರ್ಮಾಪಕರಾದ ಎ. ಗಣೇಶ್ ಅವರು ಈ ಸಿನಿಮಾ ನಾನು ಮಾಡ್ತಿದ್ದೇನೆ ಎಂದು ಹೇಳಿಕೆ ನೀಡಿದ್ದು ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿಸಿದೆ. .
In the backdrop of national discussions around controversial films like The Kashmir Files and The Kerala Story, a new Kannada film titled Dharmasthala Files is now in the pipeline. Kannada film producer A. Ganesh has announced the project and confirmed that the title has already been registered with the Film Chamber of Commerce.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm