ಬ್ರೇಕಿಂಗ್ ನ್ಯೂಸ್
            
                        16-07-25 11:47 am HK News Desk ಕರ್ನಾಟಕ
            ಮಂಡ್ಯ, ಜುಲೈ 16 : ಕಾವೇರಿ ಆರತಿ ಇದೊಂದು ದುಡ್ಡು ಹೊಡೆಯುವ ಸ್ಕೀಮ್. 100% ಮೌಢ್ಯಾಚರಣೆ, ಇದು ತಪ್ಪು ನಡೆಯಾಗಿದ್ದು ಮುಂದೆ ನೀವೇ ಅನುಭವಿಸ್ತೀರಿ.. ಹೀಗೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ ನೀಡಿದ್ದು KRS ನಲ್ಲಿ ಕಾವೇರಿ ಆರತಿ ಮಾಡುವುದಕ್ಕೆ ನನ್ನ ವಿರೋಧ ಇದೆ, ಅದರ ಅವಶ್ಯಕತೆ ಇಲ್ಲ. ಕಾವೇರಿ ಆರತಿ ಎನ್ನುವುದು ದುಡ್ಡು ಹೊಡೆಯುವ ಸ್ಕೀಮ್. ಸಾಹಿತ್ಯ ಸಮ್ಮೇಳನದ ರೀತಿ ದುಡ್ಡು ಹೊಡೆಯುವ ಸ್ಕೀಮ್. ಲೂಟಿ ಮಾಡುವ ಕಾರ್ಯಕ್ರಮ ಎಂದು ಹೇಳಿದ್ದಾರೆ.
ರೈತ ಸಂಘಟನೆ ಈಗಾಗಲೇ ಆರತಿ ಕಾರ್ಯಕ್ರಮವನ್ನು ವಿರೋಧ ಮಾಡಿದೆ. ನಾನು ಕೂಡ ವಿರೋಧ ಮಾಡ್ತೇನೆ. ಯಾವುದೇ ಕಾರಣಕ್ಕೂ ಕಾವೇರಿ ಆರತಿ ಮಾಡಬಾರದು. ಕಾವೇರಿ ಆರತಿ ಮಾಡುವ ಬದಲು ಡ್ಯಾಂ ರಕ್ಷಣೆ ಮಾಡಿ. ಕರ್ಪೂರ ಬೆಳಗಿ ಆರತಿ ಮಾಡಿದ್ರೆ ಕನ್ನಂಬಾಡಿ ಕಟ್ಟೆ ರಕ್ಷಣೆ ಮಾಡಕ್ಕಾಗಲ್ಲ. ಕನ್ನಂಬಾಡಿ ಕಟ್ಟೆ ಮೇಲೆ ಆಸಕ್ತಿ ಇದ್ರೆ ಉಳಿಸಿ. ಡ್ಯಾಂ ಸಮಸ್ಯೆ ಸರಿಪಡಿಸಿ, ಕಾಲುವೆ ಸರಿಪಡಿಸಿ. ರೈತರ ಜಮೀನಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ರೈತರು ಸಮೃದ್ಧವಾಗಿದ್ರೆ ಅದೇ ಕಾವೇರಿ ಆರತಿ.
ಕಡ್ಡಿ, ಕರ್ಪೂರ, ಕಾಯಿ ಹೊಡೆಯುವುದು ಕಾವೇರಿ ಆರತಿ ಅಲ್ಲ, ಕಾವೇರಿ ರಕ್ಷಣೆಯೂ ಅಲ್ಲ. ಕಾವೇರಿ ನದಿ ಶುದ್ದೀಕರಿಸಿ, ಕಟ್ಟೆ ರಕ್ಷಣೆ ಮಾಡಲು ಆರತಿಗೆ ಬಳಸುವ 92 ಕೋಟಿಯನ್ನು ಖರ್ಚು ಮಾಡಿ. ಆರತಿ ಎತ್ತಿ ಹಣ ಲೂಟಿ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಯಾವ ಆರತಿನೂ ಬೇಡ. ಅನಾವಶ್ಯಕ ಕಾರ್ಯಕ್ರಮಕ್ಕೆ ವಿರೋಧ ಮಾಡ್ತೇನೆ. ರೈತರಿಗೆ ಸರಿಯಾಗಿ ನೀರು ಕೊಡುವ ಕೆಲಸ ಮಾಡಿ. 100 % ಮೌಢ್ಯಾಚರಣೆ, ಈ ಕಲ್ಪನೆಯಿಂದ ದೂರವಿರಬೇಕು. ಇದಕ್ಕೆ ಯಾರು ಕೂಡ ಬೆಂಬಲ ಕೊಡಬಾರದು ಇದು ತಪ್ಪು. ಈ ರೀತಿ ದುಡ್ಡು ಅಪವ್ಯಯ ಮಾಡಿದತೆ ಮುಂದಿನ ದಿನಗಳಲ್ಲಿ ನೀವೇ ಅನುಭವಿಸುತ್ತೀರಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಜೆಡಿಎಸ್ ಪಕ್ಷದ ಮಾಜಿ ಶಾಸಕ ಡಾ.ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ. 
ಈಗಾಗಲೇ ಕಾವೇರಿ ಆರತಿ ಕಾರ್ಯಕ್ರಮ ನೆಪದಲ್ಲಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ನೂರು ಕೋಟಿ ಅನುದಾನ ಮಂಜೂರು ಮಾಡಿಸಿದ್ದು ಗಂಗಾರತಿ ರೀತಿ ಕಾವೇರಿ ಆರತಿ ಎತ್ತಲು ಮುತುವರ್ಜಿ ವಹಿಸಿದ್ದಾರೆ.
            
            
            Former JDS MLA Dr. K. Annadani has strongly opposed the proposed Cauvery Aarti program at KRS Dam, calling it a “money-making scheme” and a “100% superstitious ritual” that misuses public funds. He has urged the Karnataka government to focus instead on dam safety and ensuring water reaches farmers’ fields.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm