DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ ; ಅವ್ರಿಗೆ ಯಾವ್ದು ಸುಮ್ಮನೆ ಫಲ ಕೊಡಲ್ಲ, ಒದ್ದು ಕಿತ್ತುಕೊಳ್ಳಬೇಕು, ದಸರಾಗೂ ಮುನ್ನ ಹೊಸ ಸಿಎಂ ಪಕ್ಕಾ, ವಿಪಕ್ಷ ನಾಯಕ ಭವಿಷ್ಯ ! ಅಶೋಕ್ ಗುರೂಜಿಗೆ ಡಿಕೆ ಟಾಂಗ್ ! 

29-06-25 10:33 pm       Bangalore Correspondent   ಕರ್ನಾಟಕ

ಕಾಂಗ್ರೆಸ್‌ ಸಚಿವರು ಕ್ಷಿಪ್ರ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜಾತಕ ಸರಿಯಿಲ್ಲ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕಿದೆ. ಅವರಿಗೆ ನೈಸರ್ಗಿಕವಾದ ಯೋಗವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರು, ಜೂ. 29 : ಕಾಂಗ್ರೆಸ್‌ ಸಚಿವರು ಕ್ಷಿಪ್ರ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜಾತಕ ಸರಿಯಿಲ್ಲ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕಿದೆ. ಅವರಿಗೆ ನೈಸರ್ಗಿಕವಾದ ಯೋಗವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. 

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸದನದಲ್ಲೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದೆ ಎಂದ್ರು. ಅವರ ಜಾತಕದಲ್ಲಿ ಗುರು, ಶುಕ್ರ, ಶನಿ ಇದ್ದು, ಸುಮ್ಮನೆ ಫಲ ಕೊಡಲ್ಲ, ಒದ್ದು ಕಿತ್ತುಕೊಳ್ಳಬೇಕು. ಅವರಿಗೆ ಯಾವುದು ಕೂಡ ಹಾಗೇ ಸಿಗಲ್ಲ ಎಂದಿದ್ದಾರೆ.

ಸಿಸೇರಿಯನ್ ಆಗಬೇಕು ಅವರಿಗೆ ನಾರ್ಮಲ್ ಡೆಲವರಿ ಆಗಲ್ಲ ಎಂದು ಡಿಕೆ ಶಿವಕುಮಾರ್​ ಅವರು ಸಿಎಂ ಹುದ್ದೆಗೆ ಏರುವ ವಿಚಾರವಾಗಿ ಅಶೋಕ್ ವ್ಯಂಗ್ಯ ಮಾಡಿದ್ದಾರೆ. ದಸರಾಗೂ ಮುನ್ನವೇ ಹಲವು ಬದಲಾವಣೆ ನಡೆಯಲಿದೆ ಎಂದಿದ್ದಾರೆ.

ಇನ್ನು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉತ್ಸವ ನಡೆಯುವುದಿಲ್ಲ. ದಸರಾಗೂ ಮುನ್ನ ಹೊಸ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ಇದನ್ನು ಈಗಾಗಲೇ ವಿಧಾನಸಭೆಯಲ್ಲಿ ಹೇಳಿದ್ದೇನೆಂದು ಹೇಳಿದರು.

ಬದಲಾವಣೆ ಅನಿವಾರ್ಯ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಈಗಾಗಲೇ ಆಂತರಿಕ ಹಗ್ಗಜಗ್ಗಾಟ ನಡೆಯುತ್ತಿದೆ. ನೀವೀಗ ನೋಡುತ್ತಿರುವುದು ಕೇವಲ ಟ್ರೇಲರ್ ಮಾತ್ರ, ಪೂರ್ಣ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೊಸ ಮುಖ್ಯಮಂತ್ರಿ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಸಹ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸುಳ್ಳಿನ ರಾಜಕೀಯದಲ್ಲಿ ತೊಡಗಿದ್ದು, ಕಾಂಗ್ರೆಸ್‌ನಲ್ಲಿ ಅಧಿಕಾರ ಹೋರಾಟವು ಉತ್ತುಂಗಕ್ಕೇರಿದೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಸಂಭವನೀಯ ಬದಲಾವಣೆ ಕುರಿತ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ರಾಜ್ಯ ಅಧ್ಯಕ್ಷರನ್ನು ಅಥವಾ ವಿರೋಧ ಪಕ್ಷದ ನಾಯಕರನ್ನು ಬದಲಾಯಿಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲು ನಾನು ಪ್ರತಿ ಮೂರು ತಿಂಗಳಿಗೊಮ್ಮೆ ದೆಹಲಿಗೆ ಭೇಟಿ ನೀಡಬೇಕಾಗುತ್ತದೆ. ಇದರಂತೆ ನಿನ್ನೆ ದೆಹಲಿಗೆ ಹೋಗಿ ವರದಿ ನೀಡಿದ್ದೆ. ಪ್ರಸ್ತುತ ರಾಜ್ಯಾಧ್ಯಕ್ಷರಿಗಾಗಿ ಯಾವುದೇ ಚುನಾವಣೆಗಳೂ ನಡೆಯುವುದಿಲ್ಲ ಎಂದು ಹೇಳಿದರು.

ಆರ್​ ಅಶೋಕ್ ಭವಿಷ್ಯಕ್ಕೆ ಡಿಕೆಶಿ ಟಾಂಗ್​!

ದಸರಾಗೂ ಮುಂಚೆ ಬದಲಾವಣೆ ಆಗುತ್ತೆ ಎಂಬ ಆರ್ ಅಶೋಕ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್​, ಅಶೋಕ್ ಅವರು ಅಸ್ಟ್ರಾಲಜಿ ಅಥವಾ ಜ್ಯೋತಿಷ್ಯ ಏನಾದ್ರೂ ಕಲಿತಿದ್ದಾರಾ? ಹಾಗಾದ್ರೆ ನಾನು ತುಂಬಾ ಕೇಳೋದಿದೆ. ನನಗೂ ಟೈಮ್ ಕೊಡಿಸಿ, ನಾನು ಕೂಡ ಭೇಟಿ ಮಾಡಿ ಕೆಲ ಪ್ರಶ್ನೆ ಕೇಳ್ತೀನಿ ಎಂದು ಡಿಕೆ ಶಿವಕುಮಾರ್​ ತಿರುಗೇಟು ಕೊಟ್ಟಿದ್ದಾರೆ.

Karnataka Leader of the Opposition R. Ashok has stirred a political debate with his prediction that Deputy Chief Minister D.K. Shivakumar is unlikely to assume the Chief Minister's post, citing astrological reasons and internal party strife.