Chikkamagaluru Student Suicide, Uniform: ಚಿಕ್ಕಮಗಳೂರು ; ಯೂನಿಫಾರಂ ಕೊಡಿಸಿಲ್ಲವೆಂದು ಮನನೊಂದ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ 

24-06-25 10:15 pm       HK News Desk   ಕರ್ನಾಟಕ

ಯೂನಿಫಾರಂ ಕೊಡಿಸಿಲ್ಲ ಅಂತ ಮನನೊಂದ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರಿಕೇರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ನಡೆದಿದೆ. ನಂದಿತಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 

ಚಿಕ್ಕಮಗಳೂರು, ಜೂನ್ 24 : ಯೂನಿಫಾರಂ ಕೊಡಿಸಿಲ್ಲ ಅಂತ ಮನನೊಂದ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರಿಕೇರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ನಡೆದಿದೆ. ನಂದಿತಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 

ಶಾಲೆಯಲ್ಲಿ ಸಮವಸ್ತ್ರ ಧರಿಸದೆ ತೆರಳಿದ್ದರಿಂದ ಶಿಕ್ಷಕರು  ಯೂನಿಫಾರಂ ಕೇಳಿದ್ದರು. ನಂದಿತಾ ಈ ಹಿಂದೆ ಎರಡು ವರ್ಷ ಶಾಲೆ ಬಿಟ್ಟಿದ್ದರಿಂದ ವಿದ್ಯಾರ್ಥಿನಿ ಬಳಿ ಹಳೇ ಡ್ರೆಸ್ ಕೂಡ ಇರಲಿಲ್ಲ.‌ ಮನೆಗೆ ಬಂದು ಪೋಷಕರ ಬಳಿ ಯೂನಿಫಾರಂ ಕೇಳಿದ್ದಳು. ತಂದೆ, ಎರಡು ದಿನದಲ್ಲಿ ಸಿಗುತ್ತೆ ಎಂದು ಹೇಳಿದ್ದರು. 

ಆದರೆ ಯೂನಿಫಾರಂ ಇಲ್ಲವೆಂದು ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾಳೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

A 13-year-old student from Sahyadripura near Lingadahalli in Tarikere taluk has died in an unfortunate incident, with early reports suggesting emotional distress linked to not having a school uniform. The girl, identified as Nanditha, had rejoined school recently after a two-year break.