ಬ್ರೇಕಿಂಗ್ ನ್ಯೂಸ್
14-12-20 12:25 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14 : ಕೋಲಾರ ಜಿಲ್ಲೆಯ ನರಸಾಪುರ ಸಮೀಪದ ಐಫೋನ್ ಕಾರ್ಖಾನೆಯಲ್ಲಿ ಕಾರ್ಮಿಕರು ನಡೆಸಿದ ದಾಂಧಲೆಯಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆಕ್ರೋಶದಲ್ಲಿ ಕಾರ್ಮಿಕರು ಘಟಕದ ಮೇಲೆ ದಾಳಿ ನಡೆಸಿದ್ದರು. ಜತೆಗೆ ಸಾವಿರಾರು ಐಫೋನ್ಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದ್ದು, ಸುಮಾರು 440 ಕೋಟಿ ರೂ. ನಷ್ಟ ಆಗಿದೆ ಎಂದು ವಿಸ್ಟ್ರಾನ್ ಕಂಪೆನಿ ತಿಳಿಸಿದೆ.
ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ನೀಡಿರುವ ದೂರಿನಲ್ಲಿ ಕಂಪೆನಿ ಈ ಮಾಹಿತಿ ನೀಡಿದೆ. ಈ ನಷ್ಟದಲ್ಲಿ ಹೆಚ್ಚಿನ ಮೊತ್ತದ ಪಾಲು ಐಫೋನ್ಗಳ ಕಳ್ಳತನದಿಂದ ಆಗಿದೆ. ದಾಳಿಯ ವೇಳೆ ಸುಮಾರು 21 ಸಾವಿರ ಐ ಫೋನ್ಗಳನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿತ್ತು. ಹಿಂಸಾಚಾರದ ಸಂದರ್ಭದಲ್ಲಿ ಘಟಕದಲ್ಲಿದ್ದ ಸಾವಿರಾರು ಫೋನ್ಗಳನ್ನು ಕಳವು ಮಾಡಲಾಗಿದೆ. ಜತೆಗೆ ಕಾರ್ಖಾನೆಯ ಪ್ರಮುಖ ಕಾರ್ಯ ಚಟುವಟಿಕೆಯ ಕೇಂದ್ರ ಹಾಗೂ ಉಪಕರಣಗಳಿಗೆ ಹಾನಿ ಮಾಡಲಾಗಿದೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಕಂಪೆನಿ ದೂರಿನಲ್ಲಿ ತಿಳಿಸಿದೆ.


ಎರಡು ಗಂಟೆ ನಡೆದಿದ್ದ ದಾಳಿ
ಕೋಲಾರದ ನರಸಾಪುರ ಸಮೀಪದಲ್ಲಿರುವ ಐಫೋನ್ ತಯಾರಿಕಾ ಘಟಕದಲ್ಲಿ ಶನಿವಾರ ಸುಮಾರು ಎರಡು ಗಂಟೆಗಳ ಕಾಲ ಹಿಂಸಾಕೃತ್ಯ ನಡೆದಿತ್ತು. ಕಂಪೆನಿ ಸರಿಯಾಗಿ ಸಂಬಳ ಕೊಡದೆ ಸತಾಯಿಸಿದ್ದರ ವಿರುದ್ಧ ರೊಚ್ಚಿಗೆದ್ದಿದ್ದ ಕಾರ್ಮಿಕರು ಕೈಗೆ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದರು. ಕಂಪೆನಿಗೆ ಹಾನಿ ಮಾಡಿದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ವಿಸ್ಟ್ರಾನ್ ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ಮೂರು ತಿಂಗಳಿನಿಂದಲೂ ವೇತನದ ಕುರಿತಂತೆ ವಿವಾದ ನಡೆಯುತ್ತಿತ್ತು. ಕೋಲಾರದಲ್ಲಿನ ತನ್ನ ಘಟಕಕ್ಕೆ ಆರು ಅಂಗಸಂಸ್ಥೆಗಳಿಂದ 8,900 ಮಂದಿ ಕಾರ್ಮಿಕರನ್ನು ವಿಸ್ಟ್ರಾನ್ ನೇಮಿಸಿಕೊಂಡಿತ್ತು ಅವರು ತಿಳಿಸಿದ್ದಾರೆ.



ಗುತ್ತಿಗೆ ಸಂಸ್ಥೆಗಳ ಲೋಪ
'ಕಂಪೆನಿಯು ಕಾರ್ಮಿಕರನ್ನು ಗುತ್ತಿಗೆ ನೀಡಿದ ಸಂಸ್ಥೆಗಳಿಗೆ ವೇತನವನ್ನು ಸರಿಯಾಗಿ ಪಾವತಿ ಮಾಡಿತ್ತು. ಆದರೆ ಆ ಸಂಸ್ಥೆಗಳು ತನ್ನ ಉದ್ಯೋಗಿಗಳ ವೇತನವನ್ನು ವಿಳಂಬಮಾಡಿತ್ತು ಎಂದು ನಮಗೆ ತಿಳಿದುಬಂದಿದೆ. ಇದನ್ನು ಪರಿಶೀಲಿಸಲಾಗುತ್ತಿದೆ' ಎಂದು ಶೆಟ್ಟರ್ ಹೇಳಿದ್ದಾರೆ. ಬಾಕಿ ಮೊತ್ತವನ್ನು ಕಾರ್ಮಿಕರಿಗೆ ಪಾವತಿಸುವಂತೆ ವಿಸ್ಟ್ರಾನ್ಗೆ ಕಾರ್ಮಿಕ ಇಲಾಖೆ ನೋಟಿಸ್ ನೀಡಿದೆ.
An iPhone manufacturing plant run by giant Wistron Corporation at Narsapura came under attack from its employees over salary dues, by incurring a loss of 440 crores.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm