ಬ್ರೇಕಿಂಗ್ ನ್ಯೂಸ್
13-12-20 11:28 pm Mangaluru Correspondent ಕರ್ನಾಟಕ
ಬೆಂಗಳೂರು, ಡಿ.13: ಒಂದೆಡೆ ಸಾರಿಗೆ ನೌಕರರ ಸಂಘದ ಮುಖಂಡರ ಜೊತೆ ಸಾರಿಗೆ ಸಚಿವರು ಮಾತುಕತೆ ನಡೆಸಿ, ಸಂಧಾನ ಸಫಲ ಎಂದು ಘೋಷಣೆ ಮಾಡಿದರೆ, ಇತ್ತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತ್ರ ಮಾತುಕತೆ ವಿಫಲ, ಮುಷ್ಕರ ಮುಂದುವರಿಯುತ್ತೆ ಎಂದಯ ಘೋಷಣೆ ಮಾಡಿದ್ದಾರೆ. ಆಮೂಲಕ ಸಾರಿಗೆ ನೌಕರರ ಇಡೀ ಮುಷ್ಕರವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೈಜಾಕ್ ಮಾಡಿದ್ದಾರೋ ಅನ್ನುವ ಅನುಮಾನ ಮೂಡಿದೆ.
ಸತತ ಮುಷ್ಕರದಿಂದಾಗಿ ಸಿಬಂದಿ ಮತ್ತು ಸಾರ್ವಜನಿಕರು ಬಸವಳಿದಿದ್ದರು. ರಾಜ್ಯ ಸರಕಾರರನ್ನಾಗಿ ಮಾಡುವ ವಿಚಾರ ಬಿಟ್ಟು ಉಳಿದೆಲ್ಲ ಎಂಟು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡುತ್ತೇವೆಂದು ಸರಕಾರದಿಂದ ಭರವಸೆ ನೀಡಲಾಗಿತ್ತು. ಈ ವಿಚಾರದಲ್ಲಿ ಸಾರಿಗೆ ನೌಕರರ ಸಂಘದ ಮುಖಂಡರು ಕೂಡ ಒಪ್ಪಿದ್ದರು. ಇದರಂತೆ, ಮುಷ್ಕರ ಕೈಬಿಟ್ಟು ಬೆಂಗಳೂರು ಕೇಂದ್ರ ನಿಲ್ದಾಣದಿಂದ ಬಸ್ ಆರಂಭಿಸಲು ತಯಾರಿ ನಡೆದಿತ್ತು. ಕೆಲವರು ಜಿಲ್ಲೆಗಳತ್ತ ಬಸ್ ಚಾಲೂ ಮಾಡಿಯೂ ಆಗಿತ್ತು. ಪ್ರಯಾಣಿಕರು ಕೂಡ ಬಸ್ ಆರಂಭಗೊಳ್ತು ಎಂದು ಬಸ್ ನಿಲ್ದಾಣದತ್ತ ದಾಂಗುಡಿ ಇಟ್ಟಿದ್ದರು.
ಆದರೆ, ಸಂಧಾನ ಮಾತುಕತೆ ನಡೆದ ಬಳಿಕ ಫ್ರೀಡಂ ಪಾರ್ಕ್ ತಲುಪಿದ ಮುಖಂಡರು, ಅಲ್ಲಿ ಉಲ್ಟಾ ಹೊಡೆದಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಸೇರಿ ಮುಷ್ಕರ ಮತ್ತೆ ಮುಂದುವರಿಯಲಿದೆ. ಯಾರು ಕೂಡ ಬಸ್ ಬಿಡಬಾರದು ಎಂದು ಹೇಳಿಕೆ ನೀಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಉದ್ದೇಶಪೂರ್ವಕವಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಡುತ್ತಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಈ ಬಗ್ಗೆ ಸರಕಾರದ ಸಚಿವರು ಕೂಡ ಕೋಡಿಹಳ್ಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಂದ್ ಮಾಡುವಂತೆ ನೌಕರರನ್ನು ಎತ್ತಿ ಕಟ್ಟುವುದು ಕುಹಕ ಬುದ್ಧಿ. ಅವರಿಗೆ ನೌಕರರ ಸಮಸ್ಯೆ ಗೊತ್ತಿದೆಯೇ.. ಮಾತುಕತೆಗೆ ಬಂದಿದ್ದವರು ಸಂಘದ ಮುಖಂಡರು 9 ಬೇಡಿಕೆ ಈಡೇರಿಕೆಯನ್ನು ಒಪ್ಪಿ ತೆರಳಿದ್ದರು. ಆದರೆ, ಒಂದು ಬೇಡಿಕೆ ಮಾತ್ರ ನಿರಾಕರಿಸಲಾಗಿತ್ತು. ಆದರೆ, ಕೋಡಿಹಳ್ಳಿ ಮುಷ್ಕರ ನಿರತರನ್ನು ಉಲ್ಟಾ ಹೊಡೆಯುವಂತೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗಾಗಿ ಇಂಥ ಗತಿ ಆಗಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ಕೋವಿಡ್ ಇರುವ ಕಷ್ಟದಲ್ಲಿರ ಬೇಕಿದ್ದರೆ ಬಂದ್ ಮಾಡುವಂತೆ ಒತ್ತಾಯ ಮಾಡುತ್ತಾರೆಯೇ.. ಇವರಿಗೆ ಮಾನವೀಯತೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಬಸ್ ಓಡಿಸಲು ಅವಕಾಶ
ನಾಳೆ, ಖಾಸಗಿ ಬಸ್ ಓಡಿಸಲು ಎಲ್ಲ ಅನುಮತಿ ನೀಡುತ್ತೇವೆ. ಯಾವುದೇ ಪರವಾಗಿ ಕೇಳುವುದಿಲ್ಲ. ಎಲ್ಲ ಖಾಸಗಿ ಬಸ್ ಗಳೂ ಯಾವುದೇ ಜಿಲ್ಲೆಗೂ ಹೋಗಬಹುದು. ಯಾವುದೇ ಪ್ರಯಾಣಿಕನಿಗೂ ತೊಂದರೆ ಆಗಬಾರದು. ತೊಟ್ಟು ರಕ್ತ ಬಂದರೆ ಅದಕ್ಕೆ ಕಾರಣರಾದವರನ್ನು ಜೈಲಿಗಟ್ಡುತ್ತೇವೆ ಎಂದು ಸಚಿವ ಅಶೋಕ್ ಗುಡುಗಿದ್ದಾರೆ.
Karnataka's road transport employees on Sunday called off their 4-day strike after the state government responded to some of their demands, enabling resumption of bus services across the southern state.
09-08-25 10:12 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
09-08-25 10:53 pm
Mangalore Correspondent
Drug’s Mangalore, Police, Arrest: ಡ್ರಗ್ಸ್ ಮುಕ...
09-08-25 09:42 pm
ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವ...
09-08-25 08:10 pm
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm