ಬ್ರೇಕಿಂಗ್ ನ್ಯೂಸ್
12-12-20 06:17 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.12: ಡ್ರೋಣ್ ಹೆಸರಲ್ಲಿ ಕುಖ್ಯಾತಿ ಪಡೆದಿರುವ ಮಂಡ್ಯ ಮೂಲದ ಡ್ರೋಣ್ ಪ್ರತಾಪ್, ಈ ಬಾರಿಯ ಬಿಗ್ ಬಾಸ್ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಜನವರಿಯಲ್ಲಿ ಆರಂಭಗೊಳ್ಳುವ ಬಿಗ್ ಬಾಸ್ -8ನೇ ಸೀಸನ್ ನಲ್ಲಿ ಡ್ರೋಣ್ ಪ್ರತಾಪ್ ಕೂಡ ಒಬ್ಬ ಸ್ಪರ್ಧಿಯಾಗಲಿದ್ದಾರೆ ಎನ್ನುವ ವದಂತಿ ಕೇಳಿಬಂದಿದೆ.
ಆದರೆ, ಡ್ರೋಣ್ ಹೆಸರಲ್ಲಿ ಕನ್ನಡಿಗರನ್ನು ವಂಚಿಸಿರುವ ಡ್ರೋಣ್ ಪ್ರತಾಪ್ ಬಿಗ್ ಬಾಸ್ ಸ್ಪರ್ಧಿಯಾಗುವ ವಿಚಾರದಲ್ಲಿ ವಿರೋಧ ಕೇಳಿಬಂದಿದೆ. ಟಿವಿ, ಮಿಕ್ಸರ್ ಮತ್ತಿತರ ಉಪಕರಣಗಳ ವೇಸ್ಟ್ ಬಳಸಿ, 600ಕ್ಕೂ ಹೆಚ್ಚು ಡ್ರೋಣ್ ತಯಾರಿಸಿದ್ದೇನೆ ಎಂದು ಪುಂಗಿ ಬಿಟ್ಟಿದ್ದಲ್ಲದೆ, ಜಪಾನ್ ಮತ್ತು ಜರ್ಮನಿಯಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದೆ ಎಂದು ಹೇಳಿಕೊಂಡು ಕನ್ನಡ ಚಾನೆಲ್ ಗಳಲ್ಲಿ ಭಾರೀ ಪ್ರಚಾರ ಪಡೆದಿದ್ದ. ಆದರೆ, ಹೊರದೇಶಗಳಲ್ಲಿ ಪ್ರದರ್ಶನ ಮಾಡಿದ್ದಕ್ಕೆ ಯಾವುದೇ ರೀತಿಯ ಪುರಾವೆ ಒದಗಿಸಬಲ್ಲ ಫೋಟೋ ಆಗಲೀ, ವಿಡಿಯೋ ಆಗಲೀ ಇರಲಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿಬಂದ ಬಳಿಕ ಡ್ರೋಣ್ ಪ್ರತಾಪ್ ನಾಪತ್ತೆಯಾಗಿದ್ದ. ಅಲ್ಲದೆ, ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದ ಬಗ್ಗೆ ಫೋಟೋ, ವಿಡಿಯೋ ಒದಗಿಸಲು ವಿಫಲವಾಗಿದ್ದ. ಹೀಗಾಗಿ ಡ್ರೋಣ್ ಪ್ರತಾಪ್ ನಕಲಿ ಎನ್ನುವ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು.


ಇದೀಗ ಕನ್ನಡದ ಹೆಸರಾಂತ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಚಿತ್ರನಟ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸ್ಪರ್ಧೆಗೆ ಕೆಲವರ ಹೆಸರು ಕೇಳಿಬರುತ್ತಿದೆ. ಟಿವಿ ಆಂಕರ್ ರಾಧಾ ಹಿರೇಗೌಡರ್, ನಟ ಅನಿರುದ್ಧ್, ಟಿಕ್ ಟಾಕ್ ಕ್ವೀನ್ ಸೋನು ಗೌಡ, ಬಿಂದು ಗೌಡ, ಡ್ರೋಣ್ ಪ್ರತಾಪ್ ಹೀಗೆ ಕೆಲವರ ಹೆಸರು ಕೇಳಿಬರುತ್ತಿದೆ. ಆದರೆ, ಕನ್ನಡಿಗರಿಗೆ ವಂಚನೆ ಎಸಗಿದ್ದ ಡ್ರೋಣ್ ಪ್ರತಾಪ್ ಅನ್ನು ಬಿಗ್ ಬಾಸ್ ಸ್ಪರ್ಧೆಗೆ ಸೇರಿಸಬಾರದೆಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಸಲಹೆ ನೀಡುತ್ತಿದ್ದಾರೆ. ಡ್ರೋಣ್ ಹೆಸರಲ್ಲಿ ದೊಡ್ಡ ಪ್ರಾಜೆಕ್ಟ್ ಮಾಡಬೇಕೆಂದು ಹಲವರಿಂದ ಹಣ ಪಡೆದು ವಂಚನೆ ಎಸಗಿದ್ದಾನೆ ಎನ್ನಲಾಗುತ್ತಿದ್ದು, ಇಂಥ ವ್ಯಕ್ತಿಯನ್ನು ಬಿಗ್ ಬಾಸ್ ಸ್ಪರ್ಧೆಗೆ ಪರಿಗಣಿಸಬಾರದು ಎನ್ನುತ್ತಿದ್ದಾರೆ.
ಆದರೆ, ಕನ್ನಡ ಬಿಗ್ ಬಾಸ್ ಸ್ಪರ್ಧೆಯಲ್ಲಿ ವಿವಾದಕ್ಕೊಳಗಾದ ವ್ಯಕ್ತಿಗಳನ್ನು ಹೆಚ್ಚಾಗಿ ಸ್ಪರ್ಧೆಗೆ ಪರಿಗಣಿಸುತ್ತಿರುವುದು ನಡೆದುಬಂದಿದೆ. ಈ ಬಾರಿ ಡ್ರೋಣ್ ಪ್ರತಾಪ್ ಬಗ್ಗೆ ಆಗಲೀ, ಯಾವುದೇ ಸ್ಪರ್ಧಿ ಬಗ್ಗೆ ಆಗಲೀ ಚಾನೆಲ್ ಮಾಹಿತಿ ಹೊರಗೆಡವಿಲ್ಲ. ಆದ್ರೂ ಈ ಕುರಿತು ವದಂತಿ ಮತ್ತು ಟೀಕೆ ಎರಡೂ ಕೇಳಿಬರುತ್ತಿದೆ.
Drone Boy or Drone Prathap, whose claim of building 600 drones using e-waste is all set to enter the house of Bigg Boss Kannada in colours channel.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm