ಬ್ರೇಕಿಂಗ್ ನ್ಯೂಸ್
25-09-24 10:48 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.25: ತಾನು ಕಾಂಗ್ರೆಸ್ ನಾಯಕಿ, ಡಿಕೆಶಿ- ಸಿದ್ದರಾಮಯ್ಯ ಖಾಸಾ ದೋಸ್ತ್ ಇದ್ದಾರೆಂದು ಹಲವರಿಗೆ ಉದ್ಯೋಗ ದೊರಕಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದ ಬೆಂಗಳೂರಿನ ಸಂಧ್ಯಾ ಅಲಿಯಾಸ್ ಪವಿತ್ರಾ ನಾಗರಾಜ್ ವಿರುದ್ಧ ಈಗ ಶಿವಾಜಿ ನಗರ ಠಾಣೆಯಲ್ಲಿ ಹನಿಟ್ರಾಪ್ ಕೇಸು ದಾಖಲಾಗಿದೆ. ಎಸ್ಡಿಪಿಐ ಮುಖಂಡ ಬಿ.ಆರ್. ಭಾಸ್ಕರ ಪ್ರಸಾದ್, ತನ್ನ ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದು ಪವಿತ್ರಾ ನಾಗರಾಜ್ ಮತ್ತು ಪವಿತ್ರಾ ಎಂಬಿಬ್ಬರು ಮಹಿಳೆಯರ ವಿರುದ್ಧ ದೂರು ನೀಡಿದ್ದಾರೆ.
ಭಾಸ್ಕರ ಪ್ರಸಾದ್ ನೀಡಿರುವ ದೂರಿನ ಪ್ರಕಾರ, ಹೋರಾಟ- ಚಳವಳಿಗಳ ಸಂದರ್ಭದಲ್ಲಿ ಪರಿಚಯವಾಗಿದ್ದ ಪವಿತ್ರಾ ನಾಗರಾಜ್ ಜೊತೆಗೆ ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದೇನೆ. 2024ರ ಆಗಸ್ಟ್ 28ರಿಂದ ತನ್ನೊಂದಿಗೆ ವಾಟ್ಸಪ್ ಸಂಪರ್ಕ ಮಾಡಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು, ಬಳಿಕ ಮಾನಹರಣ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ್ದಾಳೆ. ಆನಂತರ ತನ್ನಲ್ಲಿ ಬಂದು ಹತ್ತು ಲಕ್ಷ ಹಣಕ್ಕಾಗಿ ಪೀಡಿಸಿದ್ದಾಳೆ. ಇದೇ ಸೆ.23ರಂದು ಸಂಜೆ 3.30 ಗಂಟೆಗೆ ಶಿವಾಜಿನಗರದ ಚಿನ್ನಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿರುವ ಕನ್ನಡ ಒನ್ ನ್ಯೂಸ್ ಚಾನೆಲ್ ಬಳಿ ಸ್ನೇಹಿತರಾದ ಪ್ರೊ.ಹರಿರಾಮ್, ರಮೇಶ್, ಪಿ.ಮೂರ್ತಿ, ಮಂಜುಳಾ ಮಹೇಶ್ ಎಂಬವರು ಬಂದಿದ್ದಾಗ ತನ್ನ ಬಗ್ಗೆ ಅಪಪ್ರಚಾರ ಮಾಡಿ, ಅವಾಚ್ಯವಾಗಿ ಮಾತನಾಡಿದ್ದಾಳೆ. ಹತ್ತು ಲಕ್ಷ ಹಣ ಕೊಡದೇ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಟ್ಟು ಮಾನಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಭಾಸ್ಕರ ಪ್ರಸಾದ್ ಶಿವಾಜಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಭಾಸ್ಕರ ಪ್ರಸಾದ್ ಎಸ್ಡಿಪಿಐ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿಯಾಗಿದ್ದು, ಮುಂಚೂಣಿ ಹೋರಾಟಗಳಲ್ಲಿ ಭಾಷಣಕಾರನಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದಿಂದ ಪುಲಕೇಶಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪವಿತ್ರಾ ನಾಗರಾಜ್ ವಿರುದ್ಧ ಇತ್ತೀಚೆಗೆ ಜ್ಞಾನ ಭಾರತಿ ಠಾಣೆಯಲ್ಲಿ ವೀಣಾ ಎಂಬ ಮಹಿಳೆ ದೂರು ನೀಡಿ, ವಂಚನೆ ಕೇಸು ದಾಖಲಿಸಿದ್ದರು. ಕಂಪನಿಗಳಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಲಕ್ಷಾಂತರ ರೂ. ಹಣ ಪಡೆದು ಹಲವರಿಗೆ ವಂಚಿಸಿರುವ ಬಗ್ಗೆ ಆರೋಪಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕಿಯೆಂದು ಹೇಳಿಕೊಂಡು ಮೋಸ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದರು. ಇದೀಗ ಅದೇ ಮಹಿಳೆಯ ವಿರುದ್ಧ ಹನಿಟ್ರ್ಯಾಪ್ ದೂರು ಕೇಳಿಬಂದಿದೆ.
Congress leader Sandhya Pavitra Nagaraj booked in honeytrap case against SDPI Bhaskar Prasad. Sandhya Pavitra also demanded 10 lakhs blackmailing Bhaskar of upaloading the video on social media.
21-06-26 02:18 pm
HK News Staffer
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
21-06-26 08:59 pm
HK News Staffer
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm