ಬ್ರೇಕಿಂಗ್ ನ್ಯೂಸ್
02-05-24 10:24 am HK News Desk ಕರ್ನಾಟಕ
ದಾವಣಗೆರೆ, ಮೇ 02: ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಪ್ರಕರಣವು ರಾಜಕೀಯ ಪಕ್ಷಗಳಿಗೆ ಆರೋಪ/ಪ್ರತ್ಯಾರೋಪದ ಸರಕಾಗಿದೆ. ನೊಂದ ಮಹಿಳೆಯರುಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಯಾವ ಪಕ್ಷಗಳೂ ಮಾಡುತ್ತಿಲ್ಲ, ಇದು ಬರೀ ಚುನಾವಣೆಯ ವಿಚಾರವಾಗಿ ಹೋಯಿತೇ ಎನ್ನುವುದು ಎದುರಾಗುತ್ತಿರುವ ಪ್ರಶ್ನೆ.
ಪ್ರಜ್ವಲ್ ರೇವಣ್ಣ ಹಾಲೀ ಸಂಸದರು, ಅವರು ಎಂಪಿಯಾದಾಗ ಕಾಂಗ್ರೆಸ್ ಜೊತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈಗ ರಾಜ್ಯದಲ್ಲಿ ಯಾರ ಸರ್ಕಾರವಿದೆ, ಕಾಂಗ್ರೆಸ್ ಸರ್ಕಾರ ತಾನೇ ಅವರ ಮೇಲೆ ಆಕ್ಷನ್ ತಗೆದುಕೊಳ್ಳಬೇಕಾಗಿತ್ತು " ಎಂದು ಯತ್ನಾಳ್ ಹೊಸ ವಾದವನ್ನು ಮಂಡಿಸಿದ್ದಾರೆ.
ಈ ಸಿಡಿಗೂ ಬಿಜೆಪಿಗೂ ಏನು ಸಂಬಂಧ ? ಅವರು ದೇಶ ಬಿಟ್ಟು ಪರಾರಿಯಾದಾಗ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಇದನ್ನು ವ್ಯವಸ್ಥಿತವಾಗಿ ಮುಚ್ಚಲು ಹೊಂದಾಣಿಕೆ ರಾಜಕಾರಣಿಗಳ ಉದ್ದೇಶವಿದೆ. ಮತದಾನ ಮುಗಿದ ಮೇಲೆ ಇದಕ್ಕೆ ಉತ್ತರ ಸಿಗುತ್ತದೆ ಎಂದು ಯತ್ನಾಳ್ ಹೇಳುವ ಮೂಲಕ, ಚುನಾವಣೆಗಾಗಿಯೇ ಹೊರಬಂದ ಸಿಡಿ ಪ್ರಕರಣವೇ ಎನ್ನುವ ಸಂಶಯ ಎದುರಾಗಿದೆ.
ಈ ರಾಜ್ಯದಲ್ಲಿ ಪಿಎಸ್ಐ ಹಗರಣವಾಯಿತು, ಏನಾದರೂ ಅಂಶ ಹೊರಬಿತ್ತಾ? ಗಾಂಜಾ ಅಫೀಮು ಕೇಸಿನಲ್ಲಿ ಯಾವುದಾದರೂ ಸಿನಿಮಾ ನಟಿಯರು, ರಾಜಕಾರಣಿಗಳ ಮಕ್ಕಳು ಇದ್ದರು ಎನ್ನುವ ಹೆಸರು ಹೊರಗೆ ಬಂತಾ ? ಅದನ್ನು ಮುಚ್ಚಿ ಹಾಕಲಾಯಿತು. ಪೋಕ್ಸೋ ಪ್ರಕರಣದಲ್ಲಿ ಏನಾದರೂ ತನಿಖೆ ಆಗುತ್ತಿದೆಯಾ" ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಹೊಂದಾಣಿಕೆ ರಾಜಕಾರಣಿಗಳು ಇರುವುದರಿಂದ ಸತ್ಯ ಹೊರಗೆ ಬರುವುದಿಲ್ಲ, ಅದಕ್ಕಾಗಿಯೇ ನಾವು ಸಿಬಿಐಗೆ ವಹಿಸಿ ಎಂದು ಒತ್ತಾಯಿಸುತ್ತಿರುವುದು. ಇದೆಲ್ಲಾ ಚುನಾವಣೆಗಾಗಿ ಹೊರ ಬಂದ ವಿಷಯಗಳು, ಕೆಲವೊಂದು ಮಂದಿಗಳು ಇದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ, ಒಂದು ಫ್ಯಾಕ್ಟರಿಯ ಹೆಸರು ಕುಮಾರಸ್ವಾಮಿಯವರು ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿಯ ಹೆಸರು ಮೇ 8ನೇ ತಾರೀಕು ನಾನು ಬಹಿರಂಗ ಪಡಿಸುತ್ತೇನೆ. ಇಬ್ಬರು ಬೇರೆ ಬೇರೆ ಪಾರ್ಟಿಯಲ್ಲಿದ್ದರೂ ಇದು ಅವರ ದಂಧೆ " ಎಂದು ಇಬ್ಬರು ರಾಜ್ಯದ ರಾಜಕಾರಣಿಗಳನ್ನು ಗುರಿಯಾಗಿಸಿ ಆಕ್ರೋಶ ಹೊರಹಾಕಿದ್ದಾರೆ.
ಇಬ್ಬರು ನಾಯಕರ ಸಿಡಿ ಬ್ಯೂಸಿನೆಸ್ ಒಂದೇ ಇದೆ. ಡಿ ಕೆ ಶಿವಕುಮಾರ್ ಅವರ ಹೆಸರನ್ನು ಈಗಾಗಲೇ ಕುಮಾರಸ್ವಾಮಿ ಹೇಳಿಯಾಗಿದೆ. ಇನ್ನೊಂದು ಹೆಸರು ಮೇ 8ರ ನಂತರ ನಾನೇ ಹೇಳುತ್ತೇನೆ. ಈ ಎರಡು ಕುಟುಂಬ ಕರ್ನಾಟದಲ್ಲಿ ಹಲ್ಕಾ ರಾಜಕಾರಣ ಮಾಡುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.
Two CD factories are in Karnataka, one belongs to DK shivakumar another will be announced on May 8th says Yatnal.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm