ಬ್ರೇಕಿಂಗ್ ನ್ಯೂಸ್
24-09-20 04:02 pm Udupi Correspondent ಕ್ರೈಂ
ಉಡುಪಿ, ಸೆಪ್ಟಂಬರ್ 24: ಉಡುಪಿ ನಗರ ಭಾಗದ ಹಿರಿಯಡ್ಕದಲ್ಲಿ ಹಾಡುಹಗಲೇ ರೌಡಿಶೀಟರ್ ಒಬ್ಬನನ್ನು ಕಡಿದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕನನ್ನು ಕಿಶನ್ ಹೆಗ್ಡೆ ಇನ್ನಾ ಎಂದು ಗುರುತಿಸಲಾಗಿದೆ.
ನಗರದ ಹೃದಯ ಭಾಗದಲ್ಲೇ ಜನರು ನೋಡನೋಡುತ್ತಿದ್ದಂತೆ ಘಟನೆ ನಡೆದಿದ್ದು ಯುವಕನ ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಿಶನ್ ಹೆಗ್ಡೆ ತನ್ನ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದಾಗ ಉಡುಪಿ ಕಡೆಯಿಂದ ಬಂದ ಇನ್ನೋವ ಮತ್ತು ರಿಡ್ಜ್ಕಾರಿನಲ್ಲಿ 8 ಮಂದಿ ಬಂದಿದ್ದಾರೆ. ಸ್ಥಳದಲ್ಲಿ ಕೆಲಕಾಲ ವಾಗ್ವಾದ ನಡೆದು ಕಿಶನ್ ಹೆಗ್ಡೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಯುವಕರ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ತಲೆಯ ಹಿಂಭಾಗಕ್ಕೆ ಮತ್ತು ಕುತ್ತಿಗೆಗೆ ಬಲವಾದ ಪೆಟ್ಟಾಗಿದೆ. ಕಿಶನ್ ಹೆಗ್ಡೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ವಿವರ ನೀಡಿದ್ದಾರೆ.
ಕಿಶನ್ ಹೆಗ್ಡೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಹಿರಿಯಡ್ಕ ಪರಿಸರದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದ ಅಪರಾಧ ಹಿನ್ನೆಲೆ ಹೊಂದಿದ್ದ. ಪೂರ್ವ ದ್ವೇಷದಿಂದ ಎರಡು ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ತಂಡ ಕಿಶನ್ ಹೆಗ್ಡೆಯ ಕಾರನ್ನು ಅಡ್ಡಗಟ್ಟಿ ಕುತ್ತಿಗೆಯನ್ನು ಕತ್ತರಿಸಿದ್ದಾರೆ. ಕಿಶನ್ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕೊಲೆಯ ಹಿಂದೆ ಯಾರಿದ್ದಾರೆ, ದ್ವೇಷ ಏನಿತ್ತು ಎಂಬುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಹಿರಿಯಡ್ಕ ಪೊಲೀಸ್ ಠಾಣಾ ಸಿಬ್ಬಂದಿಗಳು ಭೇಟಿ, ಬಂದೋಬಸ್ತ್ ಕೈಗೊಂಡಿದ್ದಾರೆ. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
16-06-25 02:56 pm
HK News Desk
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 05:07 pm
Mangalore Correspondent
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
Mangalore Fire, Deralakatte Hostel, Rain: ಜಡಿ...
15-06-25 11:04 pm
Kadri Kaibattal, Mangalore Rain, Landslide: ಕ...
15-06-25 09:50 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm